Don't Miss!
- Lifestyle ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 28, 29ಕ್ಕೆ ಪ್ರಧಾನಿ ಮೋದಿ ಆಗಮನ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅಪ್ಪಯ್ಯ'ನ ಅಪ್ಪಾಲೆತಿಪ್ಪಾಲೆಗೆ ಚಿತ್ರಮಂದಿರಗಳು ಸಜ್ಜು
'ಅಪ್ಪಯ್ಯ'ನ ಆಟಕ್ಕೆ ಚಿತ್ರಮಂದಿರಗಳು ಸಜ್ಜಾಗಿವೆ. ಒಂದು ನೈಜ ಕಥೆಯನ್ನು ಅಷ್ಟೇ ಸರಳವಾಗಿ ನಿರೂಪಿಸಿ ಮನಸ್ಸಿಗೆ ಹಾಗೂ ಹೃದಯಕ್ಕೆ ಹತ್ತಿರವಾಗುವಂತೆ ಚಿತ್ರೀಕರಣ ಮಾಡಿದ್ದಾರೆ ಖ್ಯಾತ ನಿರ್ದೇಶಕ ಎಸ್ ನಾರಾಯಣ್. ಅವರ ನಿರ್ದೇಶನದ ಅಪ್ಪಯ್ಯ ಚಿತ್ರ ಈ ವಾರ (ಸೆ.13) ಬಿಡುಗಡೆಯಾಗುತ್ತಿದೆ.
ಈ ಬಾರಿ ಎಸ್ ನಾರಾಯಣ್ ಅವರು ನಿಜ ಜೀವನದಲ್ಲಿ ನಡೆದಿರುವ ಘಟನೆಗಳನ್ನೇ ಕಥೆಯಾಗಿಸಿದ್ದಾರೆ. ಜನಪ್ರಿಯ ನಾಯಕ ಶ್ರೀನಗರ ಕಿಟ್ಟಿ ಹಾಗೂ ಸುಂದರ ಚೆಲುವೆ ಭಾಮಾ ಅವರ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿರುವ ಈ ಚಿತ್ರವನ್ನು ಶ್ರೀಮತಿ ಭಾಗ್ಯವತಿ ಕಂಬೈನ್ಸ್ ಅಡಿಯಲ್ಲಿ ಭಾಗ್ಯವತಿ ಹಾಗೂ ಪವನ್ ಕಾರ್ತಿಕ್ ಅವರು ನಿರ್ಮಾಣ ಮಾಡಿದ್ದಾರೆ.
ಎಸ್ ನಾರಾಯಣ್ ಹಾಗೂ ಕವಿರಾಜ್ ಅವರ ಸಾಹಿತ್ಯವಿದೆ. ಹಾಡುಗಳನ್ನು ಎಸ್ ನಾರಾಯಣ್ ಅವರು ರಾಗ ಸಂಯೋಜನೆ ಮಾಡಿದ್ದಾರೆ. ಧರ್ಮ ವಿಶ್ ಅವರು ಹಿನ್ನಲೆ ಸಂಗೀತವನ್ನು ಕೊಟ್ಟಿದ್ದಾರೆ.
ಆಶರಾಣಿ, ಇಂದ್ರಕುಮಾರ್, ಸುರೇಶ್ ಚಂದ್ರ, ನಂದ ಹಾಗೂ ಇನ್ನಿತರರು ಇರುವ ಈ ಚಿತ್ರಕ್ಕೆ ಜಗದೀಶ್ ವಾಲಿ ಅವರ ಛಾಯಾಗ್ರಹ ಇದೆ. ಡಿಫರೆಂಟ್ ಡ್ಯಾನಿ ಅವರ ಸಾಹಸ ಸಂಯೋಜನೆಯು ಚಿತ್ರದ ಪ್ರಮುಖ ಅಂಶ. (ಒನ್ಇಂಡಿಯಾ ಕನ್ನಡ)