Don't Miss!
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- News Kotak Mahindra Bank: ಕೋಟಕ್ ಮಹಿಂದ್ರಾ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ: ಗ್ರಾಹಕರ ಮೇಲೆ ಪರಿಣಾಮಗಳೇನು?
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅವಯವ ದಾನಕ್ಕೆ ಮುಂದಾದ ಎಸ್ಎಸ್ ರಾಜಮೌಳಿ
ಮೆಡಿಕಲ್ ಕಾಲೇಜು ಆಯೋಜಿಸಿದ್ದ ಅವಯವ ದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ರಾಜಮೌಳಿ. ಬಳಿಕ ಅವರು ಕಾರ್ಯಕ್ರಮದಿಂದ ಉತ್ತೇಜಿತರಾಗಿ ತಮ್ಮ ಅವಯವಗಳನ್ನು ದಾನ ಮಾಡುವುದಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, "ಎಲ್ಲ ವೈದ್ಯರಿಗೂ ಹಾಗೂ ಪ್ರೊಫೆಸರ್ ಗಳಿಗೆ ಧನ್ಯವಾದಗಳು. ಗಾಂಧಿ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿದ್ದು ತುಂಬ ಸಂತಸವಾಗಿದೆ. ನಾನು ನನ್ನ ಅವಯವಗಳನ್ನು ದಾನ ಮಾಡಬೇಕೆಂದು ನಿರ್ಧರಿಸಿದ್ದೇನೆ" ಎಂದಿದ್ದಾರೆ.
ಈ ಬಗ್ಗೆ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲೂ ಟ್ವೀಟಿಸಿದ್ದು, ಒಬ್ಬರ ದೇಹದ ಅವಯವಗಳು ಎಂಟು ಮಂದಿಗೆ ಜೀವ ಕೊಡುತ್ತವೆ. ಹಾಗೆಯೇ ತಮ್ಮ ಫಾಲೋವರ್ಸ್ ಗೆ ಒಂದು ಮಹಾನ್ ಸಂದೇಶವನ್ನೂ ರವಾನಿಸಿದ್ದಾರೆ. ತಾವು ಅವಯವ ದಾನಕ್ಕೆ ಸ್ವ ಇಚ್ಛೆಯಿಂದ ಮುಂದೆ ಬರುವುದಾದರೆ www.mohanfoundation.org ಭೇಟಿ ನೀಡಿ ಎಂದಿದ್ದಾರೆ.
ರಾಜಮೌಳಿ ಕೇವಲ ಬಾಕ್ಸಾಫೀಸ್ ಹಿಟ್ ಚಿತ್ರಗಳನ್ನು ನೀಡುವುದರ ಜೊತೆಗೆ ತಮಗೆ ಬಂದ ಲಾಭದಲ್ಲಿ ಕೊಂಚ ಪಾಲನ್ನು ಸಮಾಜಸೇವೆಗೂ ಮೀಸಲಿಟ್ಟಿದ್ದಾರೆ. ಕೆರೆಯ ನೀರನು ಕೆರೆಗೆ ಚೆಲ್ಲುವ ಅವರ ಕಾರ್ಯಕ್ರಮಕ್ಕೆ 'ಪ್ರಾಜೆಕ್ಟ್ 511' ಎಂದು ಹೆಸರಿಟ್ಟಿದ್ದಾರೆ. ಆಲ್ ದ ಬೆಸ್ಟ್ ರಾಜಮೌಳಿ. (ಒನ್ಇಂಡಿಯಾ ಕನ್ನಡ)