Don't Miss!
- News 'ಚೊಂಬು' ವಾಗ್ದಾದ: ಕಾವೇರಿ ನೀರು ಹರಿಸಿ ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟಿದ್ದು ನೀವು: ಬಿಜೆಪಿ ತಿರುಗೇಟು
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಷ್ಣು ದಾದನ ಈ ಪುತ್ಥಳಿ ಮಾಡಿದ 'ಶಿಲ್ಪಿ'ಗೆ ಸುದೀಪ್ ಸಲ್ಯೂಟ್
ಅಭಿನಯ ಭಾರ್ಗವ, ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಪಾಲಿಗೆ 'ಮರೆಯಲಾಗದ ಮಾಣಿಕ್ಯ'. ಹೀಗಾಗಿ, ವಿಷ್ಣುದಾದನ ನೆನಪಿಗಾಗಿ ಪ್ರತಿಯೊಂದು ಊರಿನಲ್ಲೂ 'ಸಿರಿವಂತನ' ಪುತ್ಥಳಿ, ಪ್ರತಿಮೆಗಳನ್ನ ನೋಡಬಹುದು. ಅವುಗಳಲ್ಲಿ, ಬಳ್ಳಾರಿಯ ವಿಷ್ಣುವರ್ಧನ್ ಪಾರ್ಕ್ ನಲ್ಲಿರುವ ಪುತ್ಥಳಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಷ್ಣುವರ್ಧನ್ ಅವರ ಈ ಪುತ್ಥಳಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಫಿದಾ ಆಗಿದ್ದು, ಈ ಪುತ್ಥಳಿಯನ್ನ ಮಾಡಿದ ಆ ಶಿಲ್ಪಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೌದು, ನಿಜ ಜೀವನದಲ್ಲಿ ವಿಷ್ಣುವರ್ಧನ್ ಹೇಗಿದ್ದರೋ ಅದೇ ರೀತಿ, ಅದೇ ಸ್ಟೈಲ್ ನಲ್ಲಿ ಈ ಪುತ್ಥಳಿಯನ್ನ ಸಿದ್ದಮಾಡಲಾಗಿದೆ. ಹೀಗಾಗಿ, ಇದನ್ನ ನಿರ್ಮಾಣ ಮಾಡಿದ ಆ ಶಿಲ್ಪಿಯ ಕಲೆಯನ್ನ ಸುದೀಪ್ ಕೊಂಡಾಡಿದ್ದಾರೆ.[ಮದುವೆ ಆಮಂತ್ರಣ ಪತ್ರಿಕೆಯಲ್ಲೂ ಅಭಿಮಾನ ಮೆರೆದ ವಿಷ್ಣು ಫ್ಯಾನ್]
ವಿಷ್ಣುವರ್ಧನ್ ಅವರ ಈ ಪುತ್ಥಳಿಯ ಫೋಟೋಗೆ ಪ್ರತಿಕ್ರಿಯಿಸಿರುವ ಸುದೀಪ್, ''ವಾಹ್ಹ್.......ಅದೇ ಸ್ಟೈಲ್, ಅದೇ ವರ್ತನೆ, ಈ ಪುತ್ಥಳಿಯನ್ನ ಮಾಡಿದ ಆ ಮಹಾನ್ ಶಿಲ್ಪಿಗೆ ಹ್ಯಾಟ್ಸಪ್'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.[ಕಿಡಿಗೇಡಿಗಳು ಕಡ್ಡಿಗೀರಿದ್ದಕ್ಕೆ, ಕಪಾಲಿ ಥಿಯೇಟರ್ ಮುಂದೆ ವಿಷ್ಣುಗೆ ಕಪಾಳಮೋಕ್ಷ.!]
Wowwwwwwwwwwwwwww........... Now tats style n tats some attitude.... Hats of to the great sculptor who has made it picture perfect .... https://t.co/zM0F2GHEC9
— Kichcha Sudeepa (@KicchaSudeep) May 28, 2017
ಅಂದ್ಹಾಗೆ, ಬಳ್ಳಾರಿಯಲ್ಲಿರುವ ಡಾ.ವಿಷ್ಣುವರ್ಧನ್ ಪಾರ್ಕ್ ನ್ನ 2011 ರಲ್ಲಿ ಉದ್ಘಾಟಿಸಿಲಾಗಿದೆ. ಸುಮಾರು 3 ಎಕರೆ ವಿಸ್ತಾರವಾಗಿರುವ ಈ ಪಾರ್ಕ್ ಮಕ್ಕಳಿಗಾಗಿ ಉಪಯೋಗಿಸಲಾಗುತ್ತಿದೆ.