Don't Miss!
- News Gold Price: ಗಗನ ಕುಸುಮವಾದ ಬಂಗಾರ: ಮಾರ್ಚ್ 28ರ ಚಿನ್ನ ಮತ್ತು ಬೆಳ್ಳಿ ದರ ವಿವರ
- Sports SRH vs MI: ಇತಿಹಾಸದ ಪುಟ ಸೇರಿದ ಪಂದ್ಯ; ಈ ಪಂದ್ಯದಲ್ಲಿ ದಾಖಲಾದ ರೆಕಾರ್ಡ್ ಪಟ್ಟಿ ಇಲ್ಲಿದೆ
- Finance 7th pay Commission: ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ, ಒಂದು ದಿನ ಮುಂಚಿತವಾಗಿ ಸಂಬಳ
- Lifestyle ಒಂದು ಸೌತೆಕಾಯಿ ಹಾಕಿ ಮಾಡಿ ಮೊಸರು ಹುಳಿ..! ಸಿಕ್ಕಾಪಟ್ಟೆ ರುಚಿ ರೆಸಿಪಿ
- Automobiles ಜಿಮ್ನಿಗೆ ಸೆಡ್ಡು ಹೊಡೆಯಲು ಎಂಜಿ ಮಾಸ್ಟರ್ ಪ್ಲಾನ್: ಸದ್ಯದಲ್ಲೇ ಕಾಮೆಟ್ ಆಧರಿಸಿ 5 ಡೋರ್ ಕಾರು ಭಾರತಕ್ಕೆ?
- Technology ರೆಡ್ಮಿಯ ಈ ಮೊಬೈಲ್ಗೆ ಇರುವ ಬಿಗ್ ಆಫರ್ ತಿಳಿದ್ರೆ, ಖಂಡಿತಾ ವಾವ್ ಅಂತೀರಾ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿರಂಜೀವಿಗೆ ಪಾಠ ಮಾಡುತ್ತಿರುವ ಕಿಚ್ಚ ಸುದೀಪ್
ಕನ್ನಡದ ಕಿಚ್ಚ ಸುದೀಪ್ ಸ್ವಲ್ಪ ಗ್ಯಾಪ್ ನಂತರ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಆದರೆ ಇದರಲ್ಲೂ ಹೊಸತನ ಮೆರೆದಿದ್ದಾರೆ. ಈ ಬಾರಿ ಅವರು ನಿರ್ದೇಶಿಸುತ್ತಿರುವುದು ಸಿನಿಮಾದ ಬದಲು ಒಂದು ಕಿರುಚಿತ್ರ. ಇದರಲ್ಲಿ ಅವರಿಗೆ ಶಿಷ್ಯನಾಗಿ ಚಿರಂಜೀವಿ ಸರ್ಜಾ ಸಾಥ್ ನೀಡಲಿದ್ದಾರೆ. ಸಿಸಿಎಲ್, ವರದನಾಯಕ ಚಿತ್ರದ ನಂತರ ಚಿರು-ಕಿಚ್ಚ ಸಖತ್ ಕ್ಲೋಸ್. ಇದು ಸದ್ಯ ಗಾಂಧಿನಗರದಲ್ಲಿ ಸುತ್ತುತ್ತಿರುವ ಸುದ್ದಿ.
ವರದನಾಯಕ ಚಿತ್ರದಲ್ಲಿನ ಸುದೀಪ್ ಭಾಗದ ಚಿತ್ರೀಕರಣವಿನ್ನೂ ಮುಗಿದಿಲ್ಲ. ಅದರ ಮಧ್ಯದಲ್ಲೇ ಸುದೀಪ್ ಕಿರುಚಿತ್ರ ನಿರ್ದೇಶನಕ್ಕೆ ಕೈಹಾಕಿದ್ದಾರೆ. ಹೊಸ ಹುಡುಗರನ್ನು ಈ ಕಿರುಚಿತ್ರಕ್ಕೆ ನಟರನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಸುದೀಪ್. ಇಷ್ಟು ಸುದ್ದಿ ಮಾತ್ರ ಸುದೀಪ್ ಟ್ಟಿಟ್ಟರ್ ನಿಂದ ಬಹಿರಂಗಗೊಂಡಿದೆ. ಯಾವ ವಿಷಯದ ಮೇಲೆ ಕಿರುಚಿತ್ರ, ಹೆಸರೇನು? ಎನ್ನುವ ಪ್ರಶ್ನೆಗಳಿಗೆಲ್ಲಾ ಸದ್ಯಕ್ಕೆ ಉತ್ತರವಿಲ್ಲ.
ಚಿರು ಜೊತೆ ಸುದೀಪ್ ಒಡನಾಟ ಸ್ನೇಹಕ್ಕಷ್ಟೇ ಸೀಮಿತವಾಗದೇ ಚಿರುಗೆ ನಿರ್ದೇಶನದ ಪಾಠವನ್ನೂ ಹೇಳಿಕೊಡುತ್ತಿದ್ದಾರಂತೆ. "ಕಿರುಚಿತ್ರ ನಿರ್ಮಾಣದಲ್ಲಿ ಚಿರಂಜೀವಿ ನನಗೆ ಸಹಕಾರ ನೀಡುತ್ತಿದ್ದಾರೆ" ಎಂದು ಸ್ವತಃ ಸುದೀಪ್ ಹೇಳಿದ್ದಾರೆ. ಮುಂದೊಮ್ಮೆ ಚಿರಂಜೀವಿ ಸರ್ಜಾ ನಿರ್ದೇಶಕರಾಗಲೂಬಹುದು. ಒಟ್ಟಾರೆ, ತಮಗೆ ನಿರ್ದೇಶನ ಮರೆಯಬಾರದೆಂದೋ ಅಥವಾ ಚಿರುಗೆ ನಿರ್ದೇಶನ ಕಲಿಸಲೆಂದೋ ಗೊತ್ತಿಲ್ಲ, ಸುದೀಪ್ ಕಿರುಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)