Don't Miss!
- News ರಾಜ್ಯದ ವಿವಿಧೆಡೆ ಮಳೆರಾಯನ ಆರ್ಭಟ; ಕರ್ನಾಟಕದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟು ? ಇಲ್ಲಿದೆ ಸಂಪೂರ್ಣ ವಿವರ
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿಚ್ಚನ ಅಭಿಮಾನಿಗಳಿಗೆ ಇಲ್ಲಿದೆ ಒಂದು ಕಹಿ ಸುದ್ದಿ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಇಲ್ಲೊಂದು ಕಹಿ ಸುದ್ದಿಯ ಜೊತೆಗೆ ಸಿಹಿ ಸುದ್ದಿ ಇದೆ.
ಹೌದು ಸ್ಯಾಂಡಲ್ ವುಡ್ ನ ಹ್ಯಾಂಡ್ಸಮ್ ನಟ ಕಿಚ್ಚ ಸುದೀಪ್ ಅವರ ಉದ್ದವಾದ ಸಿಲ್ಕಿ ಕೂದಲನ್ನು ಇಷ್ಟಪಡುತ್ತಿದ್ದ ಅಭಿಮಾನಿಗಳಿಗೆ ಇದು ಕಹಿ ಸುದ್ದಿಯಾದ್ರೆ, ನೀಟಾಗಿ ಕೂದಲು ಕತ್ತರಿಸಿ, ಟ್ರಿಮ್ ಮಾಡಿಕೊಂಡಿದ್ದ ಕಿಚ್ಚನ ಹಳೇ ಇಮೇಜ್ ಇಷ್ಟಪಡುವವರಿಗೆ ಇದು ಸಿಹಿ ಸುದ್ದಿ.
ಕಿಚ್ಚ ಸುದೀಪ್ ಅವರು 'ಗಜಕೇಸರಿ' ನಿರ್ದೇಶಕ ಎಸ್ ಕೃಷ್ಣ ಅವರು ಆಕ್ಷನ್-ಕಟ್ ಹೇಳಿರುವ 'ಹೆಬ್ಬುಲಿ' ಚಿತ್ರಕ್ಕಾಗಿ ಬಹಳ ಕಷ್ಟಪಟ್ಟು ಮೈಂಟೆನ್ ಮಾಡಿದ್ದ ತಮ್ಮ ಸುಂದರ ಸಿಲ್ಕಿ ಕೂದಲಿಗೆ ಕತ್ತರಿ ಹಾಕುತ್ತಿದ್ದಾರೆ.['ವಾರದ ಕಿಚ್ಚಿನ ಕಥೆ'ಯಲ್ಲಿ ಕಿಚ್ಚ ಸುದೀಪ್ ನೀಡಿದ ಚಮಕ್!]
ಎಸ್ ಕೃಷ್ಣ ಅವರ 'ಹೆಬ್ಬುಲಿ' ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ಖಡಕ್ ಆರ್ಮಿ ಆಫೀಸರ್ ಪಾತ್ರ ಮಾಡುತ್ತಿರುವುದರಿಂದ ಈ ಚಿತ್ರಕ್ಕಾಗಿ ವಿಶೇಷವಾಗಿ ಈ ವೇಷ ಹಾಕುತ್ತಿದ್ದಾರೆ.
ಕಿಚ್ಚ ಅವರು ತಮ್ಮ ಸಿಲ್ಕಿ ಕೂದಲನ್ನು ಒಂದು ಬಾರಿ ವಿಭಿನ್ನವಾಗಿ ಕೈಯಲ್ಲೇ ಬಾಚಿಕೊಂಡು ಹಿಂದಕ್ಕೆ ತಳ್ಳುತ್ತಿದ್ದ ಆ ಸ್ಟೈಲ್ ಗೆ ಫಿದಾ ಆಗದ ಅಭಿಮಾನಿಗಳೇ ಇಲ್ಲ. ಮಾತ್ರವಲ್ಲದೇ ಈ ಸ್ಟೈಲ್ ನಲ್ಲಿ ಅವರ ಖಡಕ್ ಲುಕ್ ಅಭಿಮಾನಿಗಳನ್ನು ತಮ್ಮ ಕಡೆ ಆಕರ್ಷಿಸಿತ್ತು.[ಕುಚಿಕು ಗೆಳೆಯನ ಟೈಟಲ್ ಲಾಂಚ್ ಗೆ ದರ್ಶನ್ ಯಾಕೆ ಬರಲಿಲ್ಲ]
ತೆಲುಗಿನ ರಿಮೇಕ್ ಸಿನಿಮಾ 'ರನ್ನ' ಬ್ಲಾಕ್ ಬಸ್ಟರ್ ಹಿಟ್ ಆದ ಮೇಲೆ ಸುದೀಪ್ ಅವರು ಸದ್ಯಕ್ಕೆ ಕೆ.ಎಸ್ ರವಿಕುಮಾರ್ ಅವರ ಬಿಗ್ ಬಜೆಟ್ ನ 'ಮುಂಡಿಂಜ ಇವನ ಪುಡಿ' ಸಿನಿಮಾದಲ್ಲಿ ಮತ್ತು ಕಿರುತೆರೆ ಶೋ ಬಿಗ್ ಬಾಸ್ ನಲ್ಲಿ ಬ್ಯುಸಿಯಾಗಿದ್ದಾರೆ.
ಒಟ್ನಲ್ಲಿ ಇನ್ನುಮುಂದೆ ಸುದೀಪ್ ಅವರು ತಮ್ಮ ನ್ಯೂ ಲುಕ್ ನಲ್ಲಿ ಯಾವ ರೀತಿ ಕಾಣಿಸಬಹುದು ಅನ್ನೋದನ್ನು ನೋಡಲು ಸ್ವಲ್ಪ ದಿನ ಅಭಿಮಾನಿಗಳು ಕಾಯಲೇಬೇಕು.