twitter
    For Quick Alerts
    ALLOW NOTIFICATIONS  
    For Daily Alerts

    ಬೀದರ್ ನಲ್ಲಿ ನಟ ಕಿಚ್ಚ ಸುದೀಪ್ ರೋಡ್ ಶೋ

    By Rajendra
    |

    Sudeep road show in Bidar
    ನಟ ಕಿಚ್ಚ ಸುದೀಪ್ ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರದಿದ್ದರೂ ಚುನಾವಣಾ ಪ್ರಚಾರದಲ್ಲಿ ಮತ್ರ ಬಿಜಿಯಾಗಿದ್ದಾರೆ. ಇತ್ತೀಚೆಗೆ ಅವರು ಪದ್ಮನಾಭನಗರದ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಪರ ಭರ್ಜರಿ ಪ್ರಚಾರ ಮಾಡಿದ್ದಾರೆ. ಈಗ ಅಶೋಕ್ ಖೇಣಿ ಪರ ಬೀದಿಗಿಳಿದಿದ್ದಾರೆ.

    ಕರ್ನಾಟಕ ಮಕ್ಕಳ ಪಕ್ಷದ ಸೂತ್ರಧಾರ ಅಶೋಕ್ ಖೇಣಿ ಪರ ಬೀದರ್ ನಲ್ಲಿ ಸುದೀಪ್ ರೋಡ್ ಶೋ ಮಾಡಿ ಮತಯಾಚಿಸಿದರು. ತಾವು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ. ಒಬ್ಬ ಒಳ್ಳೆಯ ವ್ಯಕ್ತಿಗೆ ಪ್ರಚಾರಕೊಡುತ್ತಿದ್ದೇನೆ ಅಷ್ಟೇ ಎಂದು ಸುದೀಪ್ ಈ ಸಂದರ್ಭದಲ್ಲಿ ಹೇಳಿದರು.

    ಬೀದರ್ ತಾಲೂಕಿನ ಅಮಲಾಪುರ, ಮರ್ಜಾಪುರ, ಯಾಕತಪುರ, ಮನ್ನಳ್ಳಿ, ಹೊಕ್ರಾಣಾ, ಚಿಂತಲಗೇರಾ, ರಾಜಗೀರಾ, ಪಾತರಹಳ್ಳಿ, ಬೇಮಳಖೇಡ, ಕಾರಕಮಪಳ್ಳಿ, ಸಿಂಧೋಲ ಮುಂತಾದ ಕಡೆ ರೋಡ್ ಶೋ ನಡೆಸಿ ಖೇಣಿ ಪರ ಮತಯಾಚಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಸುದೀಪ್ ನನಗೆ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ. ಖೇಣಿ ಅವರು ನೈಸ್ ಕಂಪನಿ ಮೂಲಕ ಅನೇಕ ಜನೋಪಯೋಗಿ ಕೆಲಸಕಾರ್ಯಗಳನ್ನು ಮಾಡಿದ್ದಾರೆ. ರಂಜೋಳ ಖೇಣಿ ಗ್ರಾಮದವರಾದ ಅವರು ಜಿಲ್ಲೆಯ ಕೀರ್ತಿಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಹಾರಿಸಿದ್ದಾರೆ.

    ಜಿಲ್ಲೆಯ 105 ಹಳ್ಳಿಗಳ ಅಭಿವೃದ್ಧಿಗೆ ಅವರು ದೃಢಸಂಕಲ್ಪ ಮಾಡಿದ್ದು, ತಮ್ಮ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿ ಮಾಡಲು ಪಣತೊಟ್ಟಿದ್ದಾರೆ. ಖೇಣಿ ಅವರಿಗೆ ಮತ ನೀಡಿ ಎಂದು ಅವರು ಪ್ರಚಾರದ ವೇಳೆ ತಿಳಿಸಿದರು. (ಏಜೆನ್ಸೀಸ್)

    English summary
    Karnataka Makkala Paksha party president Ashok Kheny, who is campaigning in Bidar (his hometown), has got Kicha Sudeep to campaign for him for the elections.
    Monday, April 29, 2013, 13:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X