Don't Miss!
- Finance ಬ್ಯಾಂಕುಗಳ ಮೇಲೆ ನಡೆಯಲಿದ್ಯಾ ಸೈಬರ್ ಅಟ್ಯಾಕ್! ಎಚ್ಚರ ಎಚ್ಚರ ಎಂದ ಆರ್ಬಿಐ
- News ಆಜಾನ್ ಕೂಗುತ್ತಿದ್ದಾಗ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ: ವಿಡಿಯೋ ಹಂಚಿಕೊಂಡು ವಿಜಯೇಂದ್ರ ಕಿಡಿ
- Automobiles BAJAJ CNG ಬೈಕ್ ಚಿತ್ರಗಳು ಸೋರಿಕೆ: ಬೆಲೆ ಕೇಳಿದರೆ ಶಾಕ್ ಆಗುವುದಂತೂ ಪಕ್ಕಾ!
- Sports ಜೆರ್ಸಿ ನಂ.18, ವಿರಾಟ್ ಕೊಹ್ಲಿ ಜೊತೆಗಿನ ಹೋಲಿಕೆ ಬಗ್ಗೆ ಸ್ಮೃತಿ ಮಂಧಾನ ಹೇಳಿದ್ದೇನು?
- Technology Lenovo: ಲೆನೊವೊದಿಂದ ಎಐ ಚಾಲಿತ ಲೀಜನ್ ಗೇಮಿಂಗ್ ಲ್ಯಾಪ್ಟಾಪ್ಗಳು ಲಾಂಚ್; ಬೆಲೆ ಎಷ್ಟು?
- Lifestyle ಕೊನೆಗೂ ಬೆಂಗಳೂರಿಗೆ ಮಳೆ ಭಾಗ್ಯ..! ಹವಾಮಾನ ಇಲಾಖೆ ಸೂಚಿಸಿದ ದಿನಾಂಕವಿದು..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕರವೇಯ ನಾರಾಯಣಗೌಡರೀಗ 'ಕನ್ನಡ ಸಾಮ್ರಾಟ್'
ಡಾ.ವಿಷ್ಣುವರ್ಧನ ಸೇನಾ ಸಮಿತಿಯು ಕಳೆದ ನಾಲ್ಕು ದಶಕಗಳಿಂದ ನಾಡು ನುಡಿ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ತಮಗೆ ತಿಳಿದಿದೆ. ಡಾ.ವಿಷ್ಣು ಅವರ ಹಾಕಿಕೊಟ್ಟ ಹಾದಿಯಲ್ಲಿಯೇ ಸಾಗುತ್ತಿರುವ ಈ ಸಂಘಟನೆಯು ಈ ತಿಂಗಳ ನವೆಂಬರ್ ನಿಂದ "ಕನ್ನಡ ಸಾಮ್ರಾಟ್" ಎಂಬ ಪ್ರಶಸ್ತಿಯನ್ನು ಕನ್ನಡ ಚಳವಳಿಗಾರರಿಗೆ ಪ್ರತಿ ವರ್ಷವೂ ನೀಡಲು ನಿರ್ಧರಿಸಿದೆ.
ಡಾ.ವಿಷ್ಣು ಅವರು ಸದಾ ಒಂದು ಮಾತನ್ನು ಹೇಳುತ್ತಿದ್ದರು, "ಕನ್ನಡಿಗರಲ್ಲಿ ಅಡಗಿರುವ ಅಭಿಮಾನ, ಶೌರ್ಯ ಇವನ್ನೆಲ್ಲಾ ಹೊರತರುವ ನಾಯಕ ನಮಗೆ ಬೇಕು. ನಾಡಿನ ನೆಲ-ಜಲಗಳಿಗೆ ಆತಂಕವಿರುವ ಹಿನ್ನೆಲೆಯಲ್ಲಿ ಕನ್ನಡಿಗರನ್ನೆಲ್ಲಾ ನಿದ್ದೆಯಿಂದ ಎಬ್ಬಿಸುವಂತಹ ದಿಟ್ಟ ನಾಯಕತ್ವದ ವ್ಯಕ್ತಿ ಕರ್ನಾಟಕಕ್ಕೆ ಬೇಕು". [ಡಾ.ವಿಷ್ಣು ಸ್ಮಾರಕಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳು]
ಕನ್ನಡ ಚಳವಳಿಗಳಿಗೆ ಹೊಸ ಹುರುಪನ್ನು ನೀಡಿದ ಅವರು, ನೆಲ-ಜಲದ ರಕ್ಷಣೆಗೆ ಪ್ರಾಣ, ಕುಟುಂಬ ಎಲ್ಲವನ್ನೂ ಪಣಕ್ಕಿಟ್ಟು ಹೋರಾಡಿದ್ದು ಕನ್ನಡಿಗರೆಂದೂ ಮರೆಯಲಾರರು. ಕನ್ನಡನಾಡಿನ ಹೆಮ್ಮೆಯ ಪ್ರತೀಕವಾಗಿರುವ ಇವರನ್ನು ಡಾ.ವಿಷ್ಣುವರ್ಧನ ಸೇನಾ ಸಮಿತಿಯು ನವೆಂಬರ್ ತಿಂಗಳಿನಲ್ಲಿ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಅದ್ದೂರಿ ಸಮಾರಂಭವನ್ನೇರ್ಪಡಿಸಿ 'ಕನ್ನಡ ಸಾಮ್ರಾಟ್' ಪ್ರಶಸ್ತಿಯನ್ನು ನೀಡಿ ಗೌರವಿಸಬೇಕೆಂದು ಡಾ.ವಿಷ್ಣು ಸೇನಾ ಸಮಿತಿಯು ತೀರ್ಮಾನಿಸಿದೆ.
ಈ ಸಂಬಂಧ ಟಿ.ಎ.ನಾರಾಯಣಗೌಡರನ್ನು ಭೇಟಿ ಮಾಡಿದ ಡಾ.ವಿಷ್ಣುವರ್ಧನ ಸೇನಾ ಸಮಿತಿ ತಂಡವು ಅವರಿಗೆ ಹೂಗುಚ್ಛವಿತ್ತು ಆಹ್ವಾನವನ್ನು ನೀಡಿದರು. ತಂಡದಲ್ಲಿ ಪಿ.ಸರವಣ, ಮಂಜುನಾಥ್, ಪ್ರತಾಪ್, ಯದುನಂದನ್, ಅರ್ಜುನ್, ಜಗದೀಶ್, ಆನಂದರಾಚ್ ಮತ್ತು ಧನಂಜಯ್ ಹಾಜರಿದ್ದರು. ಈ ಕಾರ್ಯಕ್ರಮವ ಕಿಮ್ಸ್ ಆಸ್ಪತ್ರೆ ಆವರಣದಲ್ಲಿರುವ 'ಕುವೆಂಪು ಕಲಾಕ್ಷೇತ್ರ'ದಲ್ಲಿ ನವೆಂಬರ್ 23ರಂದು ಬೆಳಿಗ್ಗೆ 11.00ಕ್ಕೆ ಹಮ್ಮಿಕೊಳ್ಳಲಾಗಿದೆ. (ಲೇಖಕರು: ಗೌರವ ಕಾರ್ಯದರ್ಶಿ, ಕುವೆಂಪುನಗರ ಕನ್ನಡ ಸಾಹಿತ್ಯ ಪರಿಷತ್ತು)