Don't Miss!
- News Lok Sabha Election 2024: ನಳಿನ್ ಕುಮಾರ್ ಕಟೀಲ್ಗೆ ಮಹತ್ವದ ಜವಾಬ್ದಾರಿ ನೀಡಿದ ಬಿಜೆಪಿ ಹೈಕಮಾಂಡ್
- Sports Kavya Maran: ಎಸ್ಆರ್ಎಚ್ ಬ್ಯಾಟರ್ಗಳ ಜೋಶ್ ಹೆಚ್ಚಿಸಿದ ಕಾವ್ಯಾ ಮಾರನ್
- Finance ಬೆಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಫ್ಲಾಟ್ಗಳಿಗೆ ಹೆಚ್ಚಿನ ಬೇಡಿಕೆ, ಅಂಕಿಅಂಶ ವಿವರ
- Lifestyle ಒಂದು ಸೌತೆಕಾಯಿ ಹಾಕಿ ಮಾಡಿ ಮೊಸರು ಹುಳಿ..! ಸಿಕ್ಕಾಪಟ್ಟೆ ರುಚಿ ರೆಸಿಪಿ
- Automobiles ಜಿಮ್ನಿಗೆ ಸೆಡ್ಡು ಹೊಡೆಯಲು ಎಂಜಿ ಮಾಸ್ಟರ್ ಪ್ಲಾನ್: ಸದ್ಯದಲ್ಲೇ ಕಾಮೆಟ್ ಆಧರಿಸಿ 5 ಡೋರ್ ಕಾರು ಭಾರತಕ್ಕೆ?
- Technology ರೆಡ್ಮಿಯ ಈ ಮೊಬೈಲ್ಗೆ ಇರುವ ಬಿಗ್ ಆಫರ್ ತಿಳಿದ್ರೆ, ಖಂಡಿತಾ ವಾವ್ ಅಂತೀರಾ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
12 ಲಕ್ಷ ಬೆಲೆಬಾಳುವ ನಿಶ್ಚಿತಾರ್ಥದ ಉಂಗುರ ನಾಪತ್ತೆ
ತಮಿಳು ಚಿತ್ರರಂಗದ ಖ್ಯಾತ ನಟ ಚಿಯಾನ್ ವಿಕ್ರಮ್ ಅವರ ಮಗಳು ಅಕ್ಷಿತಾ ಡಿ.ಎಂ.ಕೆ ಕರುಣಾನಿಧಿ ಅವರ ಮರಿ ಮೊಮ್ಮಗ, ಮನು ರಂಜಿತ್ ಜೊತೆ ಇತ್ತೀಚೆಗೆ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
'ಕೆವಿನ್ ಕೇರ್' ಮಾಲೀಕ ರಂಗನಾಥನ್ ಅವರ ಪುತ್ರ ಮನು ರಂಜಿತ್ ಮತ್ತು ನಟ ವಿಕ್ರಮ್ ಮಗಳು ಅಕ್ಷಿತಾ ಅವರು ಕೆಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಕೊನೆಗೆ ಎರಡೂ ಮನೆಯ ಸಮ್ಮತಿಯ ಮೇರೆಗೆ ಮದುವೆ ನಿಶ್ಚಯವಾಗಿತ್ತು.[ಚಿತ್ರಗಳು: ನಟ ವಿಕ್ರಮ್ ಪುತ್ರಿ ಅಕ್ಷಿತಾ ಗೆ ಚೆನ್ನೈನಲ್ಲಿ ಅದ್ದೂರಿ ನಿಶ್ಚಿತಾರ್ಥ]
ಆದ್ರೆ ಇದೀಗ ವಿಷಯ ಇದಲ್ಲ, ವಿಕ್ರಮ್ ಅವರ ಮಗಳು ಅಕ್ಷಿತಾ, ಇದೀಗ ಸುಮಾರು 12 ಲಕ್ಷ ಬೆಲೆಬಾಳುವ ತಮ್ಮ ವಜ್ರದುಂಗುರವನ್ನು ಕಳೆದುಕೊಂಡಿದ್ದಾರೆ.
ಆಗಸ್ಟ್ 2, ಮಂಗಳವಾರ ಮಧ್ಯಾಹ್ನದ ವೇಳೆ ಅಕ್ಷಿತಾ ಅವರು ಚೆನ್ನೈನ ಖಾದರ್ ನವಾಸ್ ಖಾನ್ ರಸ್ತೆ ಬಳಿ ಇರುವ ಐಸ್ ಕ್ರೀಮ್ ಪಾರ್ಲರ್ ಗೆ ತಮ್ಮ ಸ್ನೇಹಿತೆಯರ ಜೊತೆ ಭೇಟಿ ನೀಡಿದ್ದರು.[ವಿಕ್ರಮ್ ಸಂಭಾವನೆಯ ಅರ್ಧ ಮೊತ್ತ ಸೇರಿದ್ದು ಯಾರಿಗೆ?]
ಪಾರ್ಲರ್ ನಿಂದ ವಾಪಸ್ ಕಾರ್ ಪಾರ್ಕಿಂಗ್ ಬಳಿ ಬಂದಾಗ ತಮ್ಮ ಕೈಯಲ್ಲಿನ ನಿಶ್ಚಿತಾರ್ಥದ ಉಂಗುರ ನಾಪತ್ತೆಯಾಗಿರುವುದನ್ನು ಗಮನಿಸಿ ಅಕ್ಷಿತಾ ಹೌಹಾರಿದ್ದಾರೆ. ಭಾರಿ ಬೆಲೆಬಾಳುವ ವಜ್ರದುಂಗುರ ಕಳೆದುಕೊಂಡು ಗಾಬರಿಯಿಂದ ತಂದೆ ವಿಕ್ರಮ್ ಅವರಿಗೆ ಅಕ್ಷಿತಾ ಅವರು ಸುದ್ದಿ ಮುಟ್ಟಿಸಿದ್ದಾರೆ.
ತದನಂತರ ಚೆನ್ನೈನ ಥೌಸಂಡ್ ಲೈಟ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತಕ್ಷಣ ಪ್ರತಿಕ್ರಿಯಿಸಿ, ಐಸ್ ಕ್ರೀಮ್ ಪಾರ್ಲರ್ ನ ಸಿಸಿಟಿವಿ ಫುಟೇಜ್ ಗಳನ್ನು ಪಡೆದು ತನಿಖೆ ನಡೆಸುತ್ತಿದ್ದಾರೆ.
ಅಬ್ಬಾ...ಸಾಮಾನ್ಯವಾಗಿ ಬೆಲೆಬಾಳುವ ಉಂಗುರ ಕಳೆದು ಹೋದರೆ ಎದೆ ಧಸಕ್ಕೆನ್ನುತ್ತದೆ, ಇನ್ನು 12 ಲಕ್ಷ ಬೆಲೆಬಾಳುವ ವಜ್ರದುಂಗುರು, ಅದೂ ನಿಶ್ಚಿತಾರ್ಥದ ಉಂಗುರ ಕಳೆದು ಹೋಗಿದೆ ಅಂದ್ರೆ ವಿಕ್ರಮ್ ಕುಟುಂಬಕ್ಕೆ ಹೇಗಾಗಿರಬೇಡ ನೀವೇ ಊಹಿಸಿ...