Don't Miss!
- News ಲೋಕಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿವಣ್ಣನ ಮನೆಗೆ ತೆಲುಗು ನಟ ಬಾಲಕೃಷ್ಣ ಬಂದಿದ್ದೇಕೆ
ತೆಲುಗಿನ ಖ್ಯಾತ ನಟ ಕಮ್ ರಾಜಕಾರಣಿ ನಂದಮೂರಿ ಬಾಲಕೃಷ್ಣ ಅವರು ಇತ್ತೀಚೆಗೆ ದಿಢೀರ್ ಅಂತ ಬೆಂಗಳೂರಿನ ನಾಗಾವಾರದಲ್ಲಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮನೆಯಲ್ಲಿ ಹಾಜರಾಗಿದ್ದರು.
ಟಾಲಿವುಡ್ ನ ನಂದಮೂರಿ ಕುಟುಂಬಕ್ಕೂ ಕನ್ನಡ ಚಿತ್ರರಂಗದ ವರನಟ ಡಾ.ರಾಜ್ ಅವರ ಕುಟುಂಬಕ್ಕೂ ಬಹಳ ವರ್ಷಗಳ ಹಿಂದಿನ ನಂಟು ಇದೆ. ಅದು ಕೇವಲ ಅಣ್ಣಾವ್ರ ಕಾಲಕ್ಕೆ ಮಾತ್ರ ಸೀಮಿತವಾಗದೇ ಈಗ ಮಕ್ಕಳ ಕಾಲದಲ್ಲೂ ಆ ನಂಟು ಮುಂದುವರಿಯುತ್ತಿದೆ.[ಚಿತ್ರರಂಗದಲ್ಲಿ ಶಿವಣ್ಣನಿಗಿರುವ ಬೇಡಿಕೆಯ ಹಿಂದಿರುವ ಗುಟ್ಟೇನು]
ಅಂದಹಾಗೆ ಇವರಿಬ್ಬರು ಮುಂದೆ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರ ಅಂತ ನೀವು ಕನ್ ಫ್ಯೂಶನ್ ಮಾಡಿಕೊಳ್ಳಬೇಡಿ. ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರು ಬೆಂಗಳೂರಿನಲ್ಲಿ ಪ್ರತ್ಯಕ್ಷರಾಗಲು ಕಾರಣ ಏನಪ್ಪಾ ಅಂದ್ರೆ, ಹೈದ್ರಾಬಾದ್ ಗೆ ಶಿವಣ್ಣ ಅವರನ್ನು ಕರೆದುಕೊಂಡು ಹೋಗಲು ಇವರು ಬಂದಿದ್ದು.[ಶಿವಣ್ಣ30 ವಿಶೇಷ: ಶಿವಣ್ಣ ಅವರ 20 ಉತ್ತಮ ಚಿತ್ರಗಳ List]
ಹೌದು ಅನಂತಪುರ ಜಿಲ್ಲೆಯಲ್ಲಿರುವ ಲೇಪಾಕ್ಷಿಯಲ್ಲಿ ಫೆ.27 ಹಾಗೂ 28ರಂದು ನಡೆಯಲಿರುವ 'ಲೇಪಾಕ್ಷಿ ಉತ್ಸವ -2016'ಕ್ಕೆ ಶಿವಣ್ಣ ಅವರಿಗೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಲು ನಟ ಕಮ್ ರಾಜಕೀಯ ವ್ಯಕ್ತಿ ಆಗಿರುವ ನಂದಮೂರಿ ಬಾಲಕೃಷ್ಣ ಅವರೇ ನೇರವಾಗಿ ಬೆಂಗಳೂರಿಗೆ ಬಂದಿಳಿದಿದ್ದರು.
ಇನ್ನು ಈ ಆಮಂತ್ರಣವನ್ನು ಸಂತೋಷವಾಗಿ ಸ್ವೀಕರಿಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಈ ಕಾರ್ಯಕ್ರಮಕ್ಕೆ ಖಂಡಿತ ಬರುವುದಾಗಿ ಮಾತು ಬೇರೆ ಕೊಟ್ಟುಬಿಟ್ಟಿದ್ದಾರಂತೆ.[ಶಿವಣ್ಣ30: ಅಭಿಮಾನಿಗಳು ಶಿವಣ್ಣನಿಗೆ ಪ್ರೀತಿಯಿಂದ ಕೊಟ್ಟ ಗಿಫ್ಟೇನು?]
ನಂದಮೂರಿ ಬಾಲಕೃಷ್ಣ ಅವರು ಹಿಂದುಪುರ ಕ್ಷೇತ್ರದ ಶಾಸಕರು. ನಟ ಕಮ್ ಶಾಸಕ ಬಾಲಕೃಷ್ಣ ಅವರೇ 'ಲೇಪಾಕ್ಷಿ ಉತ್ಸವ-2016ರ ಕಾರ್ಯಕ್ರಮದ ಮುಖ್ಯ ಆಯೋಜಕರು. ಇದು ಆಂಧ್ರಪ್ರದೇಶ ಸರ್ಕಾರದ ಒಂದು ಸಾರ್ವಜನಿಕ ಕಾರ್ಯಕ್ರಮ, ಆಂಧ್ರಪ್ರದೇಶ ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿ ಗೊಳಿಸುವ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ.
ಮೊನ್ನೆ ಮೊನ್ನೆ ನಂದಮೂರಿ ಕುಟಂಬದ ಮತ್ತೊಂದು ಕುಡಿ ತೆಲುಗು ಸ್ಟಾರ್ ನಟ ಜ್ಯೂನಿಯರ್ ಎನ್.ಟಿ.ಆರ್ ಅವರು ಪವರ್ ಸ್ಟಾರ್ ಪುನೀತ್ ಅವರ 'ಚಕ್ರವ್ಯೂಹ' ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದರು.[ಪವರ್ ಸ್ಟಾರ್ ಚಿತ್ರಕ್ಕೆ ಧ್ವನಿ ನೀಡಿದ ಯಂಗ್ ಟೈಗರ್ NTR]
ಆ ಮೂಲಕ ಅವರ ಹಳೇ ಕಾಲದ ಬಂಧವನ್ನು ಉಳಿಸುತ್ತಿದ್ದರೆ, ಇದೀಗ ಬಾಲಕೃಷ್ಣ ಅವರು ಶಿವಣ್ಣ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ಮೂಲಕ ಮತ್ತೆ ಹಳೇ ಕಾಲದ ನಂಟನ್ನು ಮುಂದುವರಿಸುತ್ತಿದ್ದಾರೆ.