Don't Miss!
- News Rain Alert: ಮಳೆ.. ಮಳೆ.. ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಗ್ಯಾರಂಟಿ!
- Lifestyle ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಖ್ಯಾತ ನಟ ಚಂದ್ರಮೋಹನ್ ಅವರಿಗೆ ಹೃದಯಾಘಾತ
ದಕ್ಷಿಣದ ಹೆಸರಾಂತ ನಟ ಚಂದ್ರ ಮೋಹನ್ ಅವರು ಗುರುವಾರ (ಫೆ.19) ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಕೂಡಲೆ ಅವರ ಕುಟುಂಬಿಕರು ಅವರನ್ನು ಹೈದರಾಬಾದ್ ಜೂಬ್ಲಿ ಹಿಲ್ಸ್ ನ ಅಪೊಲೋ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಂದ್ರ ಮೋಹನ್ ಅವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸದ್ಯಕ್ಕೆ ಅವರನ್ನು ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ತೆಲುಗು, ತಮಿಳು ಚಿತ್ರಗಳಲ್ಲಿ ಪೋಷಕನಟರಾಗಿ ಗುರುತಿಸಿಕೊಂಡಿರುವ ಚಂದ್ರ ಮೋಹನ್ ಅವರ ಪೂರ್ಣ ಹೆಸರು ಮಲ್ಲಂಪಲ್ಲಿ ಚಂದ್ರಶೇಖರ ರಾವ್.
1966ರಲ್ಲಿ 'ರಂಗುಲ ರಾಟ್ನಂ' ಚಿತ್ರದ ಮೂಲಕ ಬೆಳ್ಳಿಪರದೆಗೆ ಅಡಿಯಿಟ್ಟ ಚಂದ್ರ ಮೋಹನ್ ಅವರು ಸಹ ನಟ, ನಾಯಕನಟ, ಪೋಷಕ ನಟ ಹಾಗೂ ಹಾಸ್ಯನಟನಾಗಿ ವೈವಿಧ್ಯಮಯ ಪಾತ್ರಗಳನ್ನು ಪೋಷಿಸಿದ್ದಾರೆ. ಮುಖ್ಯವಾಗಿ ಹಾಸ್ಯ ಪ್ರಧಾನ ಚಿತ್ರಗಳಲ್ಲಿ ಹೆಚ್ಚಾಗಿ ಗುರುತಿಸಿಕೊಂಡವರು.
ಚಂದ್ರ ಮೋಹನ್ ಅವರು ಟಾಲಿವುಡ್ ನ ಹೊಸ ಹೀರೋಗಳಿಗೆ ಲಕ್ಕಿ ಸ್ಟಾರ್ ಇದ್ದಂತೆ ಎಂಬ ಮಾತು ಚಾಲ್ತಿಯಲ್ಲಿದೆ. ಜಯಪ್ರದಾ, ಶ್ರೀದೇವಿ ಜೊತೆಗೂ ಅಭಿನಯಿಸಿದ್ದಾರೆ. ಮಾಲಾಶ್ರೀ ಜೊತೆಗಿನ ಚಿತ್ರದಲ್ಲಿ ಕನ್ನಡದಲ್ಲೂ ಪೋಷಕ ಪಾತ್ರದಲ್ಲಿ ಚಂದ್ರ ಮೋಹನ್ ಕಾಣಿಸಿಕೊಂಡಿದ್ದಾರೆ.
ಫಿಲಂಫೇರ್ ಪ್ರಶಸ್ತಿ, ಆಂಧ್ರದ ಪ್ರತಿಷ್ಠಿತ ನಂದಿ ಪ್ರಶಸ್ತಿಗೆ ಚಂದ್ರ ಮೋಹನ್ ಭಾಜನರಾಗಿದ್ದಾರೆ. "ಒಂದು ವೇಳೆ ಚಂದ್ರ ಮೋಹನ್ ಏನಾದರೂ ಒಂದು ಅಡಿ ಉದ್ದ ಇದ್ದಿದ್ದರೆ ಇಷ್ಟೊತ್ತಿಗೆ ಸೂಪರ್ ಸ್ಟಾರ್ ಆಗಿ ಮೆರೆಯಬೇಕಾಗಿತ್ತು" ಎಂಬ ಮಾತು ಆಂಧ್ರ ಸಿನಿಪ್ರಿಯ ಬಾಯಲ್ಲಿ ಆಗಾಗ ಕೇಳಿಸುತ್ತಿರುತ್ತದೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸೋಣ.