Don't Miss!
- Sports ಕಮಿನ್ಸ್ ಟೆನ್ಷನ್ ಹೆಚ್ಚಿಸಿದ ಸ್ಟಾರ್ ಪ್ಲೇಯರ್ ನಿರ್ಧಾರ: ಎಸ್ಆರ್ಎಚ್ ತಂಡಕ್ಕೆ ಆರಂಭದಲ್ಲೇ ಪೆಟ್ಟು
- Lifestyle ಪಳ ಪಳ ಹೊಳೆಯುವ ಕೆಂಪು ನಾಗರ ನೋಡಿದ್ದೀರಾ..? ವೈರಲ್ ಆಗ್ತಿದೆ ವಿಡಿಯೋ..!
- Technology ಬಹುನಿರೀಕ್ಷಿತ ರಿಯಲ್ಮಿ ನಾರ್ಜೋ 70 ಪ್ರೊ 5G ಲಾಂಚ್!..ಇಯರ್ಬಡ್ಸ್ ಉಚಿತ!
- News ಜಗದೀಶ್ ಶೆಟ್ಟರ್ಗೆ ಬೆಳಗಾವಿ ಸ್ಪರ್ಧೆ ಮತ್ತಷ್ಟು ಜಟೀಲ: ಗೋಬ್ಯಾಕ್ ಅಭಿಯಾನ ಯಶಸ್ವಿ ಆಯ್ತಾ?
- Automobiles ನಟ ವಿಜಯ್ ನೋಡಲು ಬಂದ ಜನಸಾಗರ: ಅಭಿಮಾನಿಗಳಿಂದ ನಟನ ಕಾರಿಗೆ ಹಾನಿ!
- Finance ಬೆಂಗಳೂರಿನ ಮೇಘನಾ ಫುಡ್ಸ್ ಹೋಟೆಲ್ ಮಳಿಗೆಗಳ ಮೇಲೆ ಐಟಿ ದಾಳಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಾಲಿಪೋಲಿಲು 200; ಸಚಿವ ಖಾದರ್ ಜೊತೆ ಸಂಭ್ರಮ
ಜಯಕಿರಣ ಫಿಲ್ಮ್ ಬ್ಯಾನರ್ ನಡಿ ತೆರೆ ಕಂಡಿರುವ ತುಳು ಹಾಸ್ಯಚಿತ್ರ ಚಾಲಿಪೊಲೀಲು ಇತ್ತೀಚೆಗೆ ಯಶಸ್ವಿಯಾಗಿ 200 ದಿನ ಪೂರೈಸಿದೆ. ತುಳು ಸಿನಿಮಾ ರಂಗದ 43 ವರ್ಷಗಳ ಇತಿಹಾಸದಲ್ಲಿ 52ನೇ ಸಿನಿಮಾ ಆಗಿ ಹೊರಬಂದಿರುವ ಈ ಚಿತ್ರ ಡಬ್ಬಲ್ ಸೆಂಚುರಿ ಸಂಭ್ರಮವನ್ನು ಮಂಗಳೂರಿನ 92.2ಬಿಗ್ ಎಫ್ಎಂ ಕಚೇರಿಯಲ್ಲಿ ಆಚರಿಸಿಕೊಂಡಿತು.
ಕೇಕ್ ಕತ್ತರಿಸುವ ಮೂಲಕ ಸಮಾರಂಭದಲ್ಲಿ ಮಾತನಾಡಿದ ಕುಟುಂಬ ಮತ್ತು ಆರೋಗ್ಯ ಇಲಾಖೆ ಸಚಿವ ಯು.ಟಿ.ಖಾದರ್, ತುಳು ಬರಹಗಾರರು, ನಾಟಕಕಾರರ ಸತತ ಶ್ರಮದಿಂದ ತುಳು ಭಾಷೆಯ ಜೀವಂತಿಕೆ ಹೆಚ್ಚಿದೆ. ತುಳು ಸಿನಿಮಾರಂಗದಲ್ಲಿ ಚಾಲಿಪೋಲಿಲು ಸಿನಿಮಾ 200 ದಿನಗಳನ್ನು ಪೂರೈಸಿ ದಾಖಲೆ ನಿರ್ಮಿಸಿದೆ ಎಂದರು.
ಭಾಷೆ ತಿಳಿದಿಲ್ಲದವರೂ ಚಿತ್ರನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ತುಳು ಭಾಷೆ ಹೆಗ್ಗಳಿಕೆ ಪಡೆದುಕೊಂಡಿರುವುದರ ಸಂಕೇತ. ಕರಾವಳಿಗೆ ಸೀಮಿತವಾಗದೆ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲೂ ಸಿನಿಮಾದ ಜನಪ್ರಿಯತೆ ಪಸರಿಸುತ್ತಿರುವ ಮೂಲಕ ತುಳುವಿಗೆ ಉತ್ತಮ ವೇದಿಕೆ ಸಜ್ಜಾಗುತ್ತಿದೆ ಎನ್ನುವ ಸಂದೇಶ ನೀಡಿದೆ ಎಂದು ಅಭಿಪ್ರಾಯಪಟ್ಟರು.
ಕಡಿಮೆ ವೆಚ್ಚದಲ್ಲಿ ತಯಾರಿ ಭರ್ಜರಿ ಲಾಭ
ಚಾಲಿಪೋಲಿಲು ಸಿನಿಮಾ ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ ತಯಾರಾಗಿದ್ದು 50 ದಿನದ ಪ್ರದರ್ಶನದ ವೇಳೆಗೆ 1.66 ಕೋಟಿ ರೂ.ಗೂ ಹೆಚ್ಚು ಗಳಿಕೆಯನ್ನು ಸಂಪಾದಿಸಿತ್ತು. ಮುಂಬೈ, ದೆಹಲಿ ಮತ್ತು ವಿದೇಶದಲ್ಲೂ ಸಿನಿಮಾ ಪ್ರದರ್ಶನಗೊಂಡಿದೆ.
ಸಚಿವ ಖಾದರ್ ರಿಂದ ಶುಭ ಹಾರೈಕೆ
ಚಾಲಿಪೋಲಿಲು ಚಿತ್ರತಂಡದ ಜೊತೆಗೆ ಬಿಗ್ ಎಫ್ ಎಂ ಕಚೇರಿಯಲ್ಲಿ ಕೇಕ್ ಕತ್ತರಿ ಸಂಭ್ರಮ ಹಂಚಿಕೊಂಡ ಸಚಿವ ಯುಟಿ ಖಾದರ್ ಅವರು ನಂತರ ಆರ್ ಜೆಗಳ ಜೊತೆ ಕುಳಿತು ಚಿತ್ರದ ಬಗ್ಗೆ ಮಾತನಾಡಿದರು.
ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಮಾತನಾಡಿ
ಚಿತ್ರ ಎಲ್ಲಾ ಭಾಷೆಯ ಜನರಿಗೂ ಮೆಚ್ಚುಗೆಯಾಗಿದ್ದು ಬಹುದೊಡ್ಡ ಸಂಗತಿ. ನಿರೀಕ್ಷೆಗೂ ಮೀರಿ ಹೊಸ ದಾಖಲೆಯತ್ತ ಮುನ್ನುಗ್ಗುತ್ತಿರುವುದು ತುಳು ಕಲಾಭಿಮಾನಿಗಳಿಂದ ಸಾಧ್ಯವಾಗಿದೆ ಎಂದರು.
ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಮಾತನಾಡಿ,
ಮೇ22ರಿಂದ ಪ್ರಭಾತ್ ಚಿತ್ರಮಂದಿರ ಹಾಗೂ ಮೇ27ರಂದು ಬಹರೈನ್ ನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 5 ಸಿನಿಮಾ ಮಂದಿರಗಳಲ್ಲಿ ಚಿತ್ರ ಕೇಜ್ ಮುಂದುವರೆದಿದೆ. ಮಂಗಳೂರಿನ ಜ್ಯೋತಿ, ಬಿಗ್ ಸಿನಿಮಾ, ಪಿವಿಆರ್, ಬಿ.ಸಿ. ರೋಡಿನ ನಕ್ಷತ್ರ ಮತ್ತು ಉಡುಪಿಯ ಕಲ್ಪನಾ ಥಿಯೇಟರ್ ಗಳಲ್ಲಿ ಉತ್ತಮ ಕಲೆಕ್ಷನ್ ಬಂದಿದೆ ಎಂದರು.
ಬಿಗ್ಎಫ್ಎಂನ ಸಿಬ್ಬಂದಿಗಳು ಅಚ್ಚರಿ
ಚಾಲಿಪೋಲಿಲು ತುಳು ಚಿತ್ರವಾದರೂ ಎಲ್ಲಾ ಬಗೆಯ ಪ್ರೇಕ್ಷಕ ವರ್ಗಕ್ಕೆ ಇಷ್ಟವಾದ ಕಾರಣ ಈ ಮಟ್ಟದ ದೊಡ್ದ ಯಶಸ್ಸು ಸಿಕ್ಕಿದೆ ಎಂದು ಆರ್ ಜೆ ರಾಕೇಶ್ ಅಭಿಪ್ರಾಯ್ಪಟ್ಟರು. ಬಿಗ್ಎಫ್ಎಂನ ಸಿಬ್ಬಂದಿಗಳಾದ ಶಿಲ್ಪ, ಜೋಯೆಲ್, ರಾಕೇಶ್, ಕಿರಣ್ ಉಪಸ್ಥಿತರಿದ್ದರು.