Don't Miss!
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- News ಹಿರಿಯೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋ ಪಲ್ಟಿ: NHAIನ ಆ ಒಂದು ಯಡವಟ್ಟಿನ ವಿರುದ್ಧ ಭುಗಿಲೆದ್ದ ಆಕ್ರೋಶ
- Technology Poco: ಹೊಸದಾಗಿ ಲಾಂಚ್ ಆದ ಪೊಕೊ X6 ಪ್ರೊ 5G ಸ್ಮಾರ್ಟ್ಫೋನ್ಗೆ 17% ರಿಯಾಯಿತಿ!8 GB RAM
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಚಂಡಿ ಕೋರಿ' ತುಳು ಚಿತ್ರದ ಹಾಡು ಕೇಳಲು ಸಜ್ಜಾಗಿ
ಕರಾವಳಿಗರಿಗೆ ಸೆಪ್ಟಂಬರ್ ತಿಂಗಳು ಧಮಾಕೇದರ್ ತಿಂಗಳಾಗಲಿದೆ ಯಾಕಂತೀರಾ, ಯಾಕಂದ್ರೆ 'ತೆಲಿಕೆದ ಬೊಳ್ಳಿ' ದೇವದಾಸ್ ಕಾಪಿಕಾಡ್ ಅವರು ತುಳು ಚಿತ್ರರಂಗದಲ್ಲಿ ಮತ್ತೊಂದು ಅದ್ಭುತ ತೋರಿಸಲು ರೆಡಿಯಾಗಿದ್ದಾರೆ.
250 ದಿನಗಳನ್ನು ಪೂರೈಸಿ ತುಳು ಚಿತ್ರರಂಗದಲ್ಲಿ ಕಮಾಲ್ ಮಾಡಿದ ದೇವದಾಸ್ ಕಾಪಿಕಾಡ್ ಅವರ 'ಚಾಲಿಪೋಲಿಲು' ಚಿತ್ರದ ನಂತರ 'ತೆಲಿಕೆದ ಬೊಳ್ಳಿ' ದೇವದಾಸ್ ಕಾಪಿಕಾಡ್ ಅವರು 'ಚಂಡಿ ಕೋರಿ' ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಸೌಂಡ್ ಮಾಡಲಿದ್ದಾರೆ.[ಮನ ಗೆದ್ದ ತುಳು ಚಿತ್ರ ಮದಿಮೆ ಮರಾಠಿಗೆ ರೀಮೇಕ್ ]
ಇದೀಗ 'ಬೊಳ್ಳಿ ಮೂವೀಸ್' ಲಾಂಛನದಡಿ ಮೂಡಿಬರುತ್ತಿರುವ 'ಚಂಡಿ ಕೋರಿ' ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಗೆ ತಯಾರಾಗಿ ನಿಂತಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಕರಾವಳಿ ಜಿಲ್ಲೆಯಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಅಂದ ಹಾಗೆ 'ಚಂಡಿ ಕೋರಿ' ಚಿತ್ರದ ಹಾಡಿನ ಸಿಡಿ ಬಿಡುಗಡೆ ಕಾರ್ಯಕ್ರಮ ಆಗಸ್ಟ್ 20 ರಂದು ಮಂಗಳೂರಿನ ಓಶಿಯನ್ ಪರ್ಲ್ಸ್ ನಲ್ಲಿ ಜರುಗಲಿದೆ.[ಆಗಸ್ಟ್ 14ರಿಂದ ಕರಾವಳಿ ಜಿಲ್ಲೆಗೆ ಬರಲಿದ್ದಾನೆ "ಸೂಪರ್ ಮರ್ಮಯೆ" ]
ಮಣಿಕಾಂತ್ ಕದ್ರಿ ಅವರ ಹಿನ್ನಲೆ ಸಂಗೀತದಲ್ಲಿ ಇದೇ ಮೊದಲ ಬಾರಿಗೆ ದೇವದಾಸ್ ಕಾಪಿಕಾಡ್ ಅವರು ನಿರ್ದೇಶನದ ಜೊತೆಗೆ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಕೂಡ ಮಾಡಿರುವುದು ಈ ಚಿತ್ರದ ವಿಶೇಷ. ಅಲ್ಲದೇ ತಂದೆ-ಮಗ ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ.
'ಕಣ್ಣಿಗೆ ಕಾಣುವ ದೇವರೆಂದರೆ ಹೆತ್ತವರು, ಅವರನ್ನು ಗೌರವಿಸುವುದು ಎಲ್ಲರ ಕರ್ತವ್ಯ ಎಂಬ ಸಂದೇಶ ಹೊಂದಿರುವ 'ಚಂಡಿ ಕೋರಿ' ಚಿತ್ರದಲ್ಲಿ ತಾಳ್ಮೆಯ ಮಹತ್ವವನ್ನು ತಿಳಿಸಲಾಗಿದೆ,
ಶರ್ಮಿಳಾ.ಡಿ ಕಾಪಿಕಾಡ್ ಹಾಗೂ ಸಚಿನ್ ಎ.ಎಸ್ ಉಪ್ಪಿನಂಗಡಿ ಅವರು ಬಂಡವಾಳ ಹಾಕಿರುವ ಹಾಸ್ಯ-ಮನೋರಂಜನೆಯಿಂದ ಕೂಡಿರುವ 'ಚಂಡಿ ಕೋರಿ' ಚಿತ್ರದಲ್ಲಿ ದೇವದಾಸ್ ಕಾಪಿಕಾಡ್ ಅವರ ಮಗ ಅರ್ಜುನ್ ಕಾಪಿಕಾಡ್ ಹಾಗೂ ಕರಿಷ್ಮಾ ಅಮಿನ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.[ತುಳು ಪರ್ಬ' ಚಿತ್ರದ ಸಖತ್ ಫೀಲಿಂಗ್ಸ್ ನೋಡಿ ]
ಇನ್ನುಳಿದಂತೆ ನವೀನ್ ಡಿ.ಪಡೀಲ್, ಭೋಜರಾಜ್ ವಾಮಂಜೂರ್, ಅರವಿಂದ ಬೋಳಾರ್, ಗೋಪಿನಾಥ್ ಭಟ್, ಚೇತನ್ ರೈ ಮಾಣಿ, ಶರ್ಮಿಳಾ ಕಾಪಿಕಾಡ್, ಸರೋಜಿನಿ ಶೆಟ್ಟಿ, ಮುಂತಾದವರ ತಾರಾಗಣ ಈ ಚಿತ್ರಕ್ಕಿರುವುದರಿಂದ ಪ್ರೇಕ್ಷಕರಿಗೆ ಪಕ್ಕಾ ಮನೋರಂಜನೆ ಗ್ಯಾರಂಟಿ.[ಅದ್ಭುತ ದಾಖಲೆ ಬರೆದ ತುಳು ಸಿನೆಮಾ 'ಚಾಲಿಪೋಲಿಲು']
ಒಟ್ನಲ್ಲಿ ಕರಾವಳಿ ಪ್ರದೇಶದ ಜನರಿಗೆ ಮತ್ತೊಮ್ಮೆ ನಗೆಹಬ್ಬದ ಸುರಿಮಳೆ ಪ್ರಾರಂಭವಾಗಲಿದ್ದು, ಚಿತ್ರ ನೋಡಲು ಈಗಿನಿಂದಲೇ ತಯಾರಿ ನಡೆಸಿ.