Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಮ್ರತಾ ತುಳು ಚಿತ್ರದ ಶೀರ್ಷಿಕೆ ವಿವಾದಕ್ಕೆ ಫುಲ್ ಸ್ಟಾಪ್
ಕೊನೆಗೂ ಪ್ರತಿಭಟನಾಕಾರರಿಗೆ ಜಯ ದೊರಕಿದೆ. 'ರಾಂಪ' ಹೆಸರಿನ ಚಿತ್ರವೀಗ ಟೈಟಲ್ ಬದಲಿಸಿಕೊಂಡು 'ಸೋಂಪ' ಆಗಿದೆ. ಈ ಮೂಲಕ ಎದ್ದಿದ್ದ ಗಲಾಟೆಗೆ ಮುಕ್ತಿ ಸಿಕ್ಕಿ ತಣ್ಣಗಾಗಿದೆ. ಹಿನ್ನೆಲೆ ಪ್ರಕಾರ, ರಾಂಪ ಅಲಿಯಾಸ್ ರಾಂಪಣ್ಣ ಎಂದರೆ ರಾಮಪ್ಪ ಪೂಜಾರಿ. ಈ ರಾಮಪ್ಪ ಪೂಜಾರಿ ಎಂದರೆ ಮಂಗಳೂರಿನ ಕಡೆ ಭಾರಿ ಜನಪ್ರಿಯ. ಈ ರಾಮಪ್ಪ ಪೂಜಾರಿ (ರಾಂಪಣ್ಣ) ದೊಡ್ಡ ಹೊಟೇಲ್ ಉದ್ಯಮಿ ಹಾಗೂ 'ಕಂಬಳ' ಪ್ರೇಮಿಯಾಗಿ ಸಾಕಷ್ಟು ಹೆಸರುವಾಸಿ.
ಇಂಥ ರಾಂಪಣ್ಣ ಸಾಮಾನ್ಯ ಮನುಷ್ಯರೇನಲ್ಲ. ಹೊಟೇಲ್ ಉದ್ಯಮದ ಜೊತೆಗೆ ಸಾಮಾಜಿಕ ಹಾಗೂ ಧಾರ್ಮಿಕ ಕಳಕಳಿ ಮೆರೆದು ಅಲ್ಲಿಯೂ ಬಹಳಷ್ಟು ಸಾಧನೆ ಮಾಡಿದವರು. ಅವರಿಂದು ಬದುಕಿಲ್ಲವಾದರೂ ಅವರ ಕುಟುಂಬಸ್ಥರು ಈಗಲೂ ಇದ್ದಾರೆ. ಅವರ ಹೆಸರಿನ ಹೊಟೇಲ್ ಈಗಲೂ ಜನಪ್ರಿಯವಾಗಿದೆ.
ಬದಲಾವಣೆಗೆ ತಗಲುವ ವೆಚ್ಚವನ್ನು ತಾವೇ ಭರಿಸಿ ಹೆಸರನ್ನು ಬದಲಾಯಿಸಲು ನೇರವಾಗಿ ಕಾರಣರಾಗಿದ್ದು ಅದೇ ರಾಂಪಣ್ಣ ಕುಟುಂಬಸ್ಥರು. "ಹಾಸ್ಯ ಚಿತ್ರದ ಈ ಹೆಸರಿನ ಮೂಲಕ ತಮ್ಮ ಕುಟುಂಬದ ಹೆಸರೂ ಹಾಸ್ಯಾಸ್ಪದಕ್ಕೆ ಎಡೆಯಾಗುತ್ತದೆ. ನಾವು ಅನಾವಶ್ಯಕ ಮುಜುಗರ ಅನುಭವಿಸಲು ಸಿದ್ಧರಿಲ್ಲ" ಎಂಬ ರಾಂಪಣ್ಣ ಕುಟುಂಬಸ್ಥರ ಹೇಳಿಕೆಗೆ ತಲೆಬಾಗಿ ಈಗ ಹೆಸರು ಬದಲಾಯಿಸಿ 'ಸೋಂಪ' ಮಾಡಲಾಗಿದೆ.
ಬಾಲಿವುಡ್ನ ಸಂಗೀತ ನಿರ್ದೇಶಕ ಇಸ್ಮಾಯಿಲ್ ದರ್ಬಾರ್ ಸಹೋದರ ಇಕ್ಬಾಲ್ ದರ್ಬಾರ್ ಸಂಗೀತ ಈ ಚಿತ್ರಕ್ಕಿದೆ. ಬಾಲಿವುಡ್ ಪ್ರೇಕ್ಷಕರನ್ನು ಸೆಳೆಯಲು ಇದರಲ್ಲಿ ಒಂದು ಹಿಂದಿ ಹಾಡು ಸೇರಿಸಿರುವುದು ವಿಶೇಷ ಎನ್ನಲಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ 'ಸೋಂಪ' ಸದ್ಯದಲ್ಲೇ ಬಿಡುಗಡೆಯಾಗಲಿದೆ. ನಂತರ ಮುಂಬೈ ಹಾಗೂ ವಿದೇಶಗಳಲ್ಲೂ ಬಿಡುಗಡೆ ಮಾಡುವುದಾಗಿ ನಟಿ, ನಿರ್ಮಾಪಕಿ ನಮ್ರತಾ ಹೆಗಡೆ ಹೇಳಿದ್ದಾರೆ.
ಸೋಂಪ ಚಿತ್ರವನ್ನು ನಿರ್ಮಿಸಿ, ಜೊತೆಗೆ ನಾಯಕಿಯೂ ಆಗಿ ನಟಿಸಿದ್ದಾರೆ ನಮ್ರತಾ ಹೆಗ್ಡೆ. ರಾಜನ್ ಲೈಲಾಪುರಿ ನಿರ್ದೇಶನದ ಈ ಚಿತ್ರದಲ್ಲಿ ತುಳು ರಂಗಭೂಮಿಯ ಜನಪ್ರಿಯ ನಟ ಅರವಿಂದ ಬೋಳಾರರು 'ಸೋಂಪನ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ, ರವಿ ಸುರತ್ಕಲ್, ಸದಾಶಿವ ಅಮರಪುರ್ಕಾರ್, ಪ್ರಭಾಕರ ಶೆಟ್ಟಿ, ಚಂದ್ರಾವತಿ, ಶಶಿರಾಜ್ ಕಾವೂರು, ಶೋಭಾ ಶೆಟ್ಟಿ ಮುಂತಾದವರಿದ್ದಾರೆ. (ಒನ್ ಇಂಡಿಯಾ ಕನ್ನಡ)