Don't Miss!
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕಿರಿಕ್' ಕೀರ್ತಿ ಮೇಲೆ ಕಿಡಿಗೇಡಿಗಳಿಂದ ಹಲ್ಲೆ.! ಅಷ್ಟಕ್ಕೂ 'ಆ' ರಾತ್ರಿ ನಡೆದದ್ದು ಏನು.?
'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ 'ರನ್ನರ್ ಅಪ್' ಅಗಿ ಕರ್ನಾಟಕದ ಮೂಲೆ ಮೂಲೆಯಲ್ಲೂ ಜನಪ್ರಿಯತೆ ಗಳಿಸಿರುವ 'ಕಿರಿಕ್' ಕೀರ್ತಿ ಈಗ ಮತ್ತೆ 'ಕಿರಿಕ್'ನಿಂದಲೇ ಸದ್ದು ಮಾಡಿದ್ದಾರೆ.
ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿ ಶುಕ್ರವಾರ ತಡರಾತ್ರಿ 'ಕಿರಿಕ್' ಕೀರ್ತಿ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಸಾಲದಕ್ಕೆ ಕೀರ್ತಿ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟಕ್ಕೂ, ಶುಕ್ರವಾರ ರಾತ್ರಿ ನಡೆದದ್ದು ಏನು ಎಂಬುದರ ಸಂಪೂರ್ಣ ಚಿತ್ರಣ ಇಲ್ಲಿದೆ. ಓದಿರಿ....
'ಕಿರಿಕ್' ಆಗಲು ಕಾರಣ ಏನು.?
ಅದು ಶುಕ್ರವಾರ ರಾತ್ರಿ ಸುಮಾರು 10 ಗಂಟೆ 15 ನಿಮಿಷ... 'ಕಿರಿಕ್' ಕೀರ್ತಿ ಹಾಗೂ ಅವರ ಗೆಳೆಯ ಮಂಜು ಮೈಸೂರಿನಿಂದ ವಾಪಸ್ ಕಾರಿನಲ್ಲಿ ಬರ್ತಿದ್ರು. ಬೆಂಗಳೂರು ವಿಶ್ವವಿದ್ಯಾನಿಲಯ (ಜ್ಞಾನಭಾರತಿ) ಆವರಣದೊಳಗೆ ಎಂಟ್ರಿಕೊಡುತ್ತಿದ್ದಂತೆಯೇ, ಇಬ್ಬರು ಯುವಕರು ರೋಡಲ್ಲಿ ಬೈಕ್ ನಿಲ್ಲಿಸಿಕೊಂಡು ಮಾತನಾಡುತ್ತಿದ್ದರಂತೆ. ಆಗ 'ಜಾಗ ಬಿಡಿ' ಎಂಬುದನ್ನು ಸೂಚಿಸಲು 'ಕಿರಿಕ್' ಕೀರ್ತಿ ಹಾರನ್ ಮಾಡಿದ್ದಾರೆ. ಅಷ್ಟಕ್ಕೆ 'ಕಿರಿಕ್' ಶುರು ಆಗಿದೆ.
ಹಾರನ್ ಮಾಡಿದ್ದಷ್ಟೇ...
ಹಾರನ್ ಮಾಡಿದ್ದಕ್ಕೆ ಆ ಇಬ್ಬರು ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಾಲದಕ್ಕೆ ಕಾರಿನ ಎರಡೂ ಬದಿಗೆ ಬಂದು ಕಿಟಕಿ ಗಾಜಿಗೆ ಕಲ್ಲು ತೂರಿ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ.
ಕೀರ್ತಿ ಮೇಲೆ ಹಲ್ಲೆ
ಇದನ್ನೆಲ್ಲ ಸಹಿಸದ 'ಕಿರಿಕ್' ಕೀರ್ತಿ ಮತ್ತು ಮಂಜು ಕಾರಿನಿಂದ ಕೆಳಗೆ ಇಳಿದಿದ್ದಾರೆ. ಆಗ ಆ ಇಬ್ಬರು ಹುಡುಗರು ಮಂಜು ರವರ ಬಟ್ಟೆ ಹರಿದು ಹೋಗುವಂತೆ ಥಳಿಸಿದ್ದಾರೆ. ಜೊತೆಗೆ ಕೀರ್ತಿ ಮೇಲೂ ಹಲ್ಲೆ ಮಾಡಿದ್ದಾರೆ.
ಯುವಕರ ಮೇಲೆ ಕಂಪ್ಲೇಂಟ್ ದಾಖಲು
ಗಲಾಟೆ ಜೋರಾಗುತ್ತಿದ್ದಂತೆಯೇ ಸಹಜವಾಗಿ ಜನ ಸುತ್ತುವರಿದ್ದಿದ್ದಾರೆ. ಆದ್ರೆ, ಪಾನಮತ್ತರಾಗಿದ್ದ ಆ ಇಬ್ಬರು ಹುಡುಗರು ಎಲ್ಲರಿಗೂ ಅವಾಚ್ಯ ಶಬ್ದಗಳ ಪ್ರಯೋಗ ಮಾಡಲು ಆರಂಭಿಸಿದರು. ಆಗ ರೊಚ್ಚಿಗೆದ್ದ ಜನರು ಆ ಇಬ್ಬರು ಯುವಕರಿಗೆ ಗೂಸಾ ಕೊಟ್ಟರು. ಜನರ ಸಹಾಯದಿಂದಲೇ ಆ ಇಬ್ಬರು ಯುವಕರನ್ನ ಪೊಲೀಸ್ ಠಾಣೆಗೆ ಕರೆದೊಯ್ದು 'ಕಿರಿಕ್' ಕೀರ್ತಿ ಕಂಪ್ಲೇಂಟ್ ಕೊಟ್ಟಿದ್ದಾರೆ.
'ಕಿರಿಕ್' ಕೀರ್ತಿ ಹೇಳುವುದೇನು.?
''ರಾತ್ರಿಯಾದರೆ ಜ್ಞಾನಭಾರತಿ ಒಳಗೆ ಹೋಗೋಕೆ ಜನ ಯಾಕೆ ಹೆದರ್ತಾರೆ ಅಂತ ಈಗ ಅರ್ಥವಾಗ್ತಿದೆ. ಹೀಗೆ ಕಂಠಪೂರ್ತಿ ಕುಡಿದು ರಾತ್ರಿ ಅಷ್ಟು ಹೊತ್ತಲ್ಲಿ ಮಧ್ಯ ರಸ್ತೆಯಲ್ಲಿ ಬೈಕ್ ನಿಲ್ಲಿಸಿಕೊಳ್ಳೋ ಉದ್ದೇಶ ಏನು.? ತಕ್ಷಣ ಅವರನ್ನು ಪೊಲೀಸ್ ಸ್ಟೇಷನ್ ಗೆ ಕರೆದೊಯ್ದು ಕೇಸ್ ದಾಖಲಿಸಿ ಬಂದಿದ್ದೇನೆ. ನನಗಾದ ಅನುಭವ ಯಾರಾದರೂ ಮಹಿಳೆಯರಿಗಾಗಿದ್ರೆ.? ಕುಟುಂಬದ ಜೊತೆಗೆ ಹೋಗುತ್ತಿರುವವರಿಗೆ ಆಗಿದ್ರೆ.? ಆ ಜನರಹಿತ ಪ್ರದೇಶದಲ್ಲಿ ಯಾರ ಗಮನಕ್ಕೂ ಬರುತ್ತಲೇ ಇರಲಿಲ್ಲವೇನೋ.! ಆ ಯುವಕರ ತಪ್ಪಿಗೆ ಕಾನೂನು ರೀತಿಯಲ್ಲೇ ಶಿಕ್ಷೆ ಅನುಭವಿಸಲೇಬೇಕು'' ಎನ್ನುತ್ತಾರೆ 'ಕಿರಿಕ್' ಕೀರ್ತಿ