Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಮಿಳು, ಮಲಯಾಳಂಗೆ ಉಳಿದವರು ಕಂಡಂತೆ
ಉಳಿದವರು ಕಂಡಂತೆ ಚಿತ್ರ ನಾನಾ ಕಾರಣಗಳಿಗಾಗಿ ಈ ವರ್ಷ ಸದ್ದು ಮಾಡಿದಂತಹ ಚಿತ್ರ. ಈ ಚಿತ್ರ ಗೊಂದಲ ಮೂಡಿಸುತ್ತದೆ ಎಂಬುದು ಕೆಲವರ ವಾದವಾದರೆ, ಅದ್ಭುತ ದೃಶ್ಯಕಾವ್ಯ ಎಂದು ಕೆಲವರು ಕೊಂಡಾಡಿದ್ದರು. ಒಟ್ಟಾರೆ ಮಿಶ್ರ ಪ್ರತಿಕ್ರಿಯೆಗೆ ಪಾತ್ರವಾದಂತಹ ಚಿತ್ರ.
ಇದೀಗ
ಈ
ಚಿತ್ರ
ತಮಿಳು
ಹಾಗೂ
ಮಲಯಾಳಂ
ಭಾಷೆಗೆ
ರೀಮೇಕ್
ಆಗಲು
ಹೊರಡುತ್ತಿದೆ.
ಈಗಾಗಲೆ
ಮಾತುಕತೆ
ನಡೆದಿದ್ದು
ಶೀಘ್ರದಲ್ಲೇ
ಅಂತಿಮವಾಗಲಿದೆ
ಎಂದಿದ್ದಾರೆ
ಸ್ವತಃ
ರಕ್ಷಿತ್
ಶೆಟ್ಟಿ.
ಬಹಳ
ದಿನಗಳಿಗೆ
ಕನ್ನಡ
ಚಿತ್ರಗಳ
ಜನಪ್ರಿಯತೆ
ಗಡಿದಾಟುತ್ತಿರುವುದು
ನಿಜಕ್ಕೂ
ಮೆಚ್ಚಬೇಕಾದ
ಸಂಗತಿ.
[ವಿಮರ್ಶೆ:
ಪತ್ರಿಕೆಗಳು
ಕಂಡಂತೆ
'ಉಳಿದವರು
ಕಂಡಂತೆ']
ಈ ಚಿತ್ರವನ್ನು ರೀಮೇಕ್ ಮಾಡುತ್ತಿರುವವರು ಗಂಡುಗಲಿ ಕೆ ಮಂಜು. ಎರಡೂ ಭಾಷೆಗಳಲ್ಲಿ ಅವರೇ ರೀಮೇಕ್ ಸಾರಥ್ಯ ವಹಿಸಿರುವುದು ವಿಶೇಷ. ತಮಿಳಿನಲ್ಲಿ ಸ್ಟಾರ್ ನಟರೊಬ್ಬರು ಬಣ್ಣ ಹಚ್ಚಲಿದ್ದಾರೆ ಎಂಬುದು ಸದ್ಯದ ಮಾಹಿತಿ.
ಇನ್ನು ರಕ್ಷಿತ್ ಶೆಟ್ಟಿ ಅವರು ರಿಕ್ಕಿ ಚಿತ್ರದಲ್ಲಿ ಬಿಜಿಯಾಗಿದ್ದು ಅದಾದ ಬಳಿಕ 'ಯಕ್ಕ ರಾಜ ರಾಣಿ' ಚಿತ್ರದಲ್ಲಿ ತೊಡಗಿಕೊಳ್ಳಲಿದ್ದಾರೆ. ಬಳಿಕ ಸಿದ್ಲಿಂಗು ನಿರ್ದೇಶಕ ವಿಜಯ್ ಪ್ರಕಾಶ್ ಅವರ ಚಿತ್ರ ಸೆಟ್ಟೇರಲಿದೆ. ಇದರ ಜೊತೆಗೆ ಸುದೀಪ್ ಅವರಿಗಾಗಿ 'ಥಗ್ಸ್ ಆಫ್ ಮಾಲ್ಗುಡೀಸ್' ಎಂಬ ಚಿತ್ರ ನಿರ್ದೇಶಿಸಲಿದ್ದಾರೆ.
ಉಳಿದವರು ಕಂಡಂತೆ ಚಿತ್ರದ ವಿಶೇಷ ಎಂದರೆ ಈ ಚಿತ್ರಕ್ಕೆ ಎರಡು ತರಹದ ವಿಮರ್ಶೆಗಳು ವ್ಯಕ್ತವಾದವು. ಆರಂಭದಲ್ಲಿ ಉಳಿದವರು ಎಳೆದಂತೆ ಎಂಬ ಟೀಕೆಗೆ ಪಾತ್ರವಾದ ಚಿತ್ರ ಬಳಿಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಈ ಚಿತ್ರದ ಹೆಗ್ಗಳಿಕೆ.