Don't Miss!
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವರ್ಮಾ ವಿರುದ್ಧ ಕೇಸ್: 'ಕಿಲ್ಲಿಂಗ್ ವೀರಪ್ಪನ್'ಗೆ ಮತ್ತೊಂದು ಕಂಟಕ
ಸದಾ ವಿವಾದಗಳನ್ನೇ ಮೈ ಮೇಲೆ ಎಳೆದುಕೊಳ್ಳುವ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾಗೆ ಬಿಡುಗಡೆ ಭಾಗ್ಯ ಯಾಕೋ ದೊರಕುವಂತೆ ಕಾಣುತ್ತಿಲ್ಲ. ಜೊತೆಗೆ ಒಂದರ ಮೇಲೆ ಒಂದು ಕಂಟಕಗಳು ಎದುರಾಗುತ್ತಲೇ ಇವೆ.
ಮೊನ್ನೆ ಮೊನ್ನೆ ವೀರಪ್ಪನ್ ಪತ್ನಿ ಮುತ್ತು ಲಕ್ಷ್ಮಿ ಅವರು ಸಿನಿಮಾ ಬಿಡುಗಡೆಗೆ ಕಂಟಕ ಆಗ್ತಾರ? ಅನ್ನೋವಷ್ಟರಲ್ಲಿ, ಚಿತ್ರತಂಡ ಹೇಗೋ ಆ ಸಮಸ್ಯೆಯಿಂದ ಪಾರಾಗಿತ್ತು. ಆದರೆ ಇದೀಗ ಮತ್ತೊಂದು ಸಮಸ್ಯೆ ಎದುರಾಗಿದೆ.[ಪೊಲೀಸ್ ಇಲಾಖೆಗೆ 'ಕಿಲ್ಲಿಂಗ್ ವೀರಪ್ಪನ್' ಸ್ಪೆಶಲ್ ಶೋ]
ಈ ಬಾರಿ ಮಾದಪ್ಪ ಅನ್ನೋ ವ್ಯಕ್ತಿ ಚಿತ್ರದ ಮೇಲೆ ಕೇಸ್ ಹಾಕುವ ಮೂಲಕ ವೀರಪ್ಪನ್ ಬಿಡುಗಡೆಗೆ ಅಡ್ಡಗಾಲು ಹಾಕಿದ್ದಾರೆ. ತಮಿಳುನಾಡಿನ ಮಾದಪ್ಪ ಎಂಬುವವರು ಸಿಟಿ ಸಿವಿಲ್ ಕೋರ್ಟ್ ನಲ್ಲಿ ಚಿತ್ರದ ವಿರುದ್ಧ ದಾವೆ ಹೂಡಿದ್ದಾರೆ.
ದಾವೆಯಲ್ಲಿ ಚಿತ್ರದ ನಿರ್ಮಾಣ ಸಂಸ್ಥೆಯಾದ ಜಿ ಆರ್ ಫಿಲಂಸ್ ನ ಬಿ.ವಿ.ಮಂಜುನಾಥ್, ಬಿ.ವಿ ಸತೀಂದ್ರ, ಶಿವಪ್ರಕಾಶ್ ಫಿಲಂಸ್ ಮುಖ್ಯಸ್ಥ ರಘು ಆಚಾರ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಹೆಸರಿಸಲಾಗಿದೆ.[ಮುತ್ತುಲಕ್ಷ್ಮಿಯೊಂದಿಗೆ ಸಂಧಾನ: ಡಿ.11 ಕ್ಕೆ 'ಕಿಲ್ಲಿಂಗ್ ವೀರಪ್ಪನ್' ತೆರೆಗೆ?]
ಪ್ರಕರಣದ ದೂರನ್ನು ತುರ್ತಾಗಿ ವಿಚಾರಣೆ ಮಾಡುವಂತೆ ಮಾದಪ್ಪ ಪರ ವಹಿಸಿದ ವಕೀಲ ಎಸ್ ಉಮೇಶ್ ಮಾಡಿದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಪ್ರತಿವಾದಿಗೆ ತುರ್ತು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಡಿಸೆಂಬರ್ 29ಕ್ಕೆ ನಿಗದಿಪಡಿಸಿದೆ.
ವೀರಪ್ಪನ್ ಕಾರ್ಯಾಚರಣೆಯಲ್ಲಿ ಮಾದಪ್ಪ ಅವರು ಎಸ್ ಟಿ ಎಫ್ ಗೆ ಮಾಹಿತಿ ನೀಡುತ್ತಿದ್ದರು. ವೀರಪ್ಪನ್ ಚಲನವಲನಗಳ ಬಗ್ಗೆ ಅವರು ಕೊಟ್ಟ ಮಾಹಿತಿ ಕಾರ್ಯಾಚರಣೆಯಲ್ಲಿ ಬಹಳ ಸಹಾಯಕವಾಗಿದ್ದವು. ಇದೀಗ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾದಲ್ಲು ಮಾದಪ್ಪನನ್ನು ಹೋಲುವ ಪಾತ್ರವೊಂದನ್ನು ಸೃಷ್ಟಿಸಲಾಗಿದೆ.[ಮುತ್ತುಲಕ್ಷ್ಮಿ ಹೊಸ ವರಸೆ, ಮತ್ತೆ ವರ್ಮಾ, ವೀರಪ್ಪನ್ ಗೆ ಕಂಟಕ.! ]
ಆದರೆ ಇದರ ಬಗ್ಗೆ ಮಾದಪ್ಪ ಅವರ ಅನುಮತಿ ಪಡೆದಿಲ್ಲ. ಅಲ್ಲದೇ ಈ ಪಾತ್ರ ಹೇಗೆ ನಿರೂಪಿಸಿದ್ದಾರೋ ಗೊತ್ತಿಲ್ಲ. ಭವಿಷ್ಯದಲ್ಲಿ ಇದರಿಂದ ತನಗೆ ಪ್ರಾಣಾಪಾಯ ಒದಗಬಹುದು ಅನ್ನೋದು ಮಾದಪ್ಪ ಅವರ ಆತಂಕ.
ಒಟ್ನಲ್ಲಿ ಜನವರಿ 1 ಕ್ಕೆ ಸಿನಿಮಾ ಬಿಡುಗಡೆ ಎಂದು ಡೇಟ್ ಘೋಷಣೆ ಮಾಡಿರುವ ಚಿತ್ರತಂಡ ಇನ್ನೇನು ಮಾಡುತ್ತದೆ ಗೊತ್ತಿಲ್ಲ. ಆದರೆ 29ನೇ ತಾರೀಖು ವಿಚಾರಣೆ ಇರುವುದರಿಂದ ಆ ನಂತರ ಬಿಡುಗಡೆಯ ಕುರಿತು ಪಕ್ಕಾ ಮಾಹಿತಿ ಸಿಗಲಿದೆ.