Don't Miss!
- News Mysuru Zoo: ಬೇಸಿಗೆಯಲ್ಲೂ ಮೈಸೂರು ಮೃಗಾಲಯ ಕೂಲ್.. ಕೂಲ್! ಹೇಗೆ ಗೊತ್ತಾ?
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಾಹುಬಲಿ-2' ಕಟ್ಟಪ್ಪನ ವಿರುದ್ಧ ಕನ್ನಡಿಗರ ರಣಕಹಳೆ.!
ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಚಿತ್ರ ದೇಶಾದ್ಯಂತ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದೆ. ಏಪ್ರಿಲ್ ನಲ್ಲಿ ತೆರೆ ಕಾಣುವ 'ಬಾಹುಬಲಿ-2' ಚಿತ್ರವನ್ನ ಕಣ್ತುಂಬಿಕೊಳ್ಳಲು ಸಿನಿ ಪ್ರಿಯರು ತುದಿಗಾಲಿನಲ್ಲಿ ನಿಂತಿದ್ದಾರೆ.
ಹೀಗಿರುವಾಗಲೇ, ಕರ್ನಾಟಕದಲ್ಲಿ 'ಬಾಹುಬಲಿ-2' ಚಿತ್ರ ಪ್ರದರ್ಶನಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಕಾವೇರಿ ವಿವಾದದ ಸಮಯದಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ಕಟ್ಟಪ್ಪ ಆಡಿದ ಲಘು ಮಾತುಗಳು ಈಗ 'ಬಾಹುಬಲಿ-2' ಚಿತ್ರಕ್ಕೆ ಕರ್ನಾಟಕದಲ್ಲಿ ಕಂಟಕ ಎದುರಾಗಿದೆ.['ಬಾಹುಬಲಿ-2' ಚಿತ್ರದಲ್ಲಿ ಸುದೀಪ್ ನಟಿಸಿದ್ದಾರಾ? ಅವರೇ ಕೊಟ್ಟ ಉತ್ತರ..]
''ಬಾಹುಬಲಿ-2' ಚಿತ್ರವನ್ನ ಕರ್ನಾಟಕದಲ್ಲಿ ನಿಷೇಧಿಸುವುದಾದರೆ ಖಂಡಿತ ಒಗ್ಗಟ್ಟಿನ ಹೋರಾಟಕ್ಕಿಳಿಯೋಣ'' ಅಂತ ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ತಮ್ಮ ಫೇಸ್ ಬುಕ್ ಪುಟದ ಮೂಲಕ ಕರೆ ನೀಡಿದ್ದಾರೆ.
ಫೇಸ್ ಬುಕ್ ನಲ್ಲಿ ವೀರಕಪುತ್ರ ಶ್ರೀನಿವಾಸ್ ಬರೆದಿರುವುದೇನು.?
''ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ಅದ್ಯಾರೋ ಕಟ್ಟಪ್ಪನೋ, ಕೆಟ್ಟಪ್ಪನೋ, ಹುಚ್ಚಪ್ಪನೋ ಅಥವಾ ಅಪ್ರಬುದ್ಧನೋ ಆಡಿದ ಲಘು ಮಾತುಗಳ ಹಿನ್ನಲೆಯಲ್ಲಿ 'ಬಾಹುಬಲಿ-2' ಚಿತ್ರವನ್ನು ಇಲ್ಲಿ ನಿಷೇಧಿಸುವುದಾದರೆ ಖಂಡಿತ ಒಗ್ಗಟ್ಟಿನ ಹೋರಾಟಕ್ಕಿಳಿಯೋಣ'' - ವೀರಕಪುತ್ರ ಶ್ರೀನಿವಾಸ್ [ಬಿಡುಗಡೆಗೂ ಮುನ್ನ ಕೋಟಿ ಕೋಟಿ ಲೂಟಿ ಮಾಡಿದ 'ಬಾಹುಬಲಿ-2']
ಕನ್ನಡಿಗರ ಶಕ್ತಿ ಪ್ರದರ್ಶನ ಆಗಲಿ
''ಅವರು ಜಲ್ಲಿಕಟ್ಟುಗೆ ಹೋರಾಡಿದ ರೀತಿಯೇ ನಾವು ಕಟ್ಟಪ್ಪನ ತೆರೆ ದರ್ಶನ ನಿಷೇಧಕ್ಕೆ ಯತ್ನಿಸೋಣ. ಆಗುವುದಾದರೆ ಕನ್ನಡಿಗರ ಶಕ್ತಿಪ್ರದರ್ಶನವಾಗಲಿ'' - ವೀರಕಪುತ್ರ ಶ್ರೀನಿವಾಸ್
ಕನ್ನಡಿಗರ ಮಾನ ಹರಾಜಾಗುವುದು ಬೇಡ
''ಆದರೆ ಇತ್ತ ಕನ್ನಡಿಗರನ್ನು ಮುಂದೆಬಿಟ್ಟು, ಹೋರಾಟದ ಕಾವನ್ನು ಹೆಚ್ಚಿಸಿ, ಅತ್ತ ಡಿಸ್ಟ್ರಿಬ್ಯೂಟರ್/ನಿರ್ಮಾಪಕನ ಜೊತೆ ವ್ಯಾಪಾರಕ್ಕಿಳಿಯಬೇಡಿ. ಯಾರದೋ ಸ್ವಾರ್ಥ ಮತ್ತು ಪ್ರಚಾರಕ್ಕೆ ಕನ್ನಡಿಗರ ಮಾನ ಹರಾಜಾಗುವುದು ಬೇಡ'' - ವೀರಕಪುತ್ರ ಶ್ರೀನಿವಾಸ್
ಹೋರಾಟ ನಗೆಪಾಟಲಿಗೆ ಈಡಾಗದಿರಲಿ
''ಕಾನೂನು ಸಹ ನಿರ್ಮಾಪಕರ ಪರವಾಗುವ ಸಾಧ್ಯತೆಗಳಿರುವುದರಿಂದ ಮತ್ತು ಬೆಳಗಿನ ಜಾವ 4 ಗಂಟೆ ಪ್ರದರ್ಶನಕ್ಕೆ ನಮ್ಮ ಚಿತ್ರರಂಗದ ಗಣ್ಯರೇ ಕಾದು ಕುಳಿತಿರುವುದರಿಂದ ನಮ್ಮ ಹೋರಾಟ ನಗೆಪಾಟಲಿಗೆ ಈಡಾಗದಿರಲಿ ಎಂಬ ಕಾಳಜಿ ನನ್ನದು'' - ವೀರಕಪುತ್ರ ಶ್ರೀನಿವಾಸ್
'ಬಾಹುಬಲಿ-2' ತೆರೆಕಂಡರೆ.?
''ಸುಮ್ಮನೆ ಯೋಚಿಸಿ, ಒಂದು ವೇಳೆ ಕನ್ನಡಿಗರು ವಿರೋಧಿಸಿದ ಮೇಲೂ 'ಬಾಹುಬಲಿ-2' ಇಲ್ಲಿ ತೆರೆಕಂಡರೆ ಅದೆಂಥಾ ಅವಮಾನ ಎದುರಿಸಬೇಕಾದೀತು? ಆಗ ಕಟ್ಟಪ್ಪನಾಡಿದ ಲಘುಮಾತುಗಳಿಗಿಂತ ಮತ್ತಷ್ಟು ಲಘುವಾಗಿ ಕನ್ನಡಿಗರು ಹೊರರಾಜ್ಯದವರಿಗೆ ಕಾಣುವುದಿಲ್ಲವೇ? ಸಂಬಂಧಪಟ್ಟವರು ಯೋಚಿಸಿ! ನಿರ್ಧರಿಸಿ!!'' - ವೀರಕಪುತ್ರ ಶ್ರೀನಿವಾಸ