Don't Miss!
- News Big Offer for Bengaluru Voters: ಮತದಾರರಿಗೆ ಗುಡ್ ನ್ಯೂಸ್.. ರಿಯಾಯಿತಿ ದರದಲ್ಲಿ ತಿಂಡಿ ವ್ಯವಸ್ಥೆ
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಎರಡು ಕನಸು' ಚಿತ್ರದ ನಿರ್ದೇಶಕ ಮದನ್ ಬಂಧನ
'ಎರಡು ಕನಸು' ಚಿತ್ರದ ಪ್ರಮೋಷನ್ ವಿಚಾರಕ್ಕೆ ಸಂಬಂಧ ಪಟ್ಟಂತೆ ಪರಮೇಶ್ವರ್ ಎಂಬುವವರನ್ನು ನಿರ್ದೇಶಕ ಮದನ್ ರವರು ಕಿಡ್ನಾಪ್ ಮಾಡಿಸಿದ್ದಾರೆ ಎಂಬ ಆರೋಪದಡಿ ಮಾಗಡಿ ಪೊಲೀಸರು ಬಂಧಿಸಿದ್ದಾರೆ.
ನಟ ವಿಜಯ ರಾಘವೇಂದ್ರ ಮತ್ತು ಕಾರುಣ್ಯ ರಾಮ್ ಅಭಿನಯದ 'ಎರಡು ಕನಸು' ಚಿತ್ರ ಕಳೆದ ಎರಡು ತಿಂಗಳ ಹಿಂದೆ ಬಿಡುಗಡೆ ಆಗಿತ್ತು. ಈ ಚಿತ್ರದ ಪ್ರಚಾರಕ್ಕಾಗಿ ಜಾಹೀರಾತು ನೀಡಲು ಪರಮೇಶ್ವರ್ ಎಂಬುವವರಿಗೆ ನಿರ್ದೇಶಕ ಮದನ್ 16.3 ಲಕ್ಷ ಹಣ ನೀಡಿದ್ದರು. ಆದರೆ ಚಿತ್ರದ ಪ್ರಚಾರ ಸರಿಯಾಗಿ ಆಗಿಲ್ಲ ಎಂದು ನಿರ್ದೇಶಕ ಮದನ್ 8 ಲಕ್ಷ ವಾಪಸ್ಸು ನೀಡುವಂತೆ ಪರಮೇಶ್ವರ್ ರಲ್ಲಿ ಬೇಡಿಕೆ ಇಟ್ಟಿದ್ದರು. ಇದನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಮದನ್ ತಮ್ಮ ಸ್ನೇಹಿತರ ಸಹಾಯದಿಂದ ನಾಲ್ಕು ದಿನಗಳ ಹಿಂದೆ ಪರಮೇಶ್ವರ್ ರನ್ನು ಕಿಡ್ನಾಪ್ ಮಾಡಿಸಿದ್ದರು ಎಂಬ ಆರೋಪದಡಿಯಲ್ಲಿ ಮದನ್ ರನ್ನು ಮಾಗಡಿ ಪೊಲೀಸರು ದೇವನಹಳ್ಳಿ ಬಳಿ ಬಂಧಿಸಿದ್ದಾರೆ.
ಮಾಗಡಿ ಪೊಲೀಸ್ ಠಾಣೆಗೆ ಪರಮೇಶ್ವರ್ ಅವರ ತಂದೆ-ತಾಯಿ ಮೂರು ದಿನಗಳಿಂದ ತಮ್ಮ ಮಗ ಮನೆಗೆ ಬರದ ಕಾರಣ ದೂರು ನೀಡಿದ್ದರು ಎಂದು ತಿಳಿಯಲಾಗಿದೆ.
ಅಂದಹಾಗೆ 'ಎರಡು ಕನಸು' ಚಿತ್ರದ ನಿರ್ದೇಶಕ ಮದನ್ ತಮ್ಮ ಮೊದಲ ಚಿತ್ರವೇ ಫ್ಲಾಪ್ ಆದ ಕಾರಣ ಖಿನ್ನತೆಗೆ ಒಳಗಾಗಿದ್ದರು. ಡಿಪ್ರೆಷನ್ ನಿಂದ ಸಿಕ್ಕ ಸಿಕ್ಕವರ ಜೊತೆ ಜಗಳವಾಡುತ್ತಿದ್ದರು ಎಂದು ವರದಿಯಾಗಿದೆ.