Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಂಡ್ಯ' ದಿಂದ 'ಮುಂಬೈ' ಹೊರಟ 'ಮಂಡ್ಯ' ಹೈಕಳು
'ಜೋಶ್', 'ಅಯೋಧ್ಯಪುರಂ', ಚಿತ್ರದ ಬಳಿಕ ಹೇಳ ಹೆಸರಿಲ್ಲದಂತೆ ಮಾಯವಾಗಿದ್ದ ರಾಕೇಶ್ ಅಡಿಗ ಇದೀಗ ಮತ್ತೆ ಗಾಂಧಿನಗರದಲ್ಲಿ ಪತ್ತೆಯಾಗಿದ್ದಾರೆ. 'ಮನಸಾಲಜಿ' 'ಪರಿ' 'ಮಂದಹಾಸ' ಮುಂತಾದ ಚಿತ್ರಗಳು ಮಕಾಡೆ ಮಲಗಿದ ನಂತರ ಇದೀಗ ಹೊಸ ಚಿತ್ರ 'ಮಂಡ್ಯ ಟು ಮುಂಬೈ' ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಹೌದು ನಿರ್ದೇಶಕ ವಾರ್ಧಿಕ್ ಜೋಸೆಫ್ ಆಕ್ಷನ್-ಕಟ್ ಹೇಳಿರುವ 'ಮಂಡ್ಯ ಟು ಮುಂಬೈ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಖತ್ ಮಾಸ್ ಲುಕ್ ನಲ್ಲಿ ಮೂಡಿಬಂದಿದೆ.
ಬಿಡುಗಡೆಯಾಗಿರುವ 'ಮಂಡ್ಯ ಟು ಮುಂಬೈ' ಚಿತ್ರದ ಟ್ರೈಲರ್ ನೀವೇ ನೋಡಿ...
'ಮಂಡ್ಯ ಹುಡುಗರು, ಭಯ ಅನ್ನೋದೇ ಇಲ್ಲ, ಕಣ್ಣ್ಮುಚ್ಚಿ ಕಣ್ಣು ತೆಗೆಯೋವಷ್ಟರಲ್ಲಿ ದೇಹ ಇರತ್ತೆ. ಜೀವ ಇರೋದಿಲ್ಲಾ' ಅಂತ ಕಿಚ್ಚ ಸುದೀಪ್ ವಾಯ್ಸ್ ನಲ್ಲಿ 'ಮಂಡ್ಯ ಟು ಮುಂಬೈ' ಚಿತ್ರದ ಪಾತ್ರ ಪರಿಚಯಿಸುವ ಭಾಗದ ಡೈಲಾಗ್ ಗಳು ಮಾಸ್ ಲುಕ್ ನಲ್ಲಿ ಬಂದಿದೆ.
ಆಕ್ಷನ್-ಥ್ರಿಲ್ಲರ್, ರೋಮ್ಯಾನ್ಸ್, ಹಾಗೇನೆ ಕಾಮಿಡಿಯಾಗಿರುವ ಚಿತ್ರದಲ್ಲಿ ಸಖತ್ ಕ್ಯೂಟ್ ಹಾಗೂ ಹಾರ್ಟ್ ಗೆ ಕಚಗುಳಿಯಿಡುವ ಹಾಡುಗಳು ಪ್ರೇಕ್ಷಕರ ಮನಸೂರೆಗೊಳ್ಳುತ್ತವೆ. 'ಮಂಡ್ಯ ಟು ಮುಂಬೈ' ಚಿತ್ರದಲ್ಲಿ ಸಂಜನಾ, ರಾಕೇಶ್ ಜೊತೆ ಡ್ಯುಯೆಟ್ ಹಾಡಲಿದ್ದಾರೆ.
ಚಿತ್ರಕ್ಕೆ ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಎಂದಿನಂತೆ ಸಾಧುಕೋಕಿಲ ಕಾಮಿಡಿ ಪ್ರೀಯರಿಗೆ ಮನೋರಂಜನೆ ನೀಡಲಿದ್ದಾರೆ. 'ಮಂಡ್ಯ ಟು ಮುಂಬೈ' ಚಿತ್ರದ ಮೂಲಕ ಇನ್ನಾದರೂ ರಾಕೇಶ್ ಅದೃಷ್ಟ ಖುಲಾಯಿಸುತ್ತಾ ಅನ್ನೋದನ್ನ ಚಿತ್ರ ತೆರೆಗೆ ಬಂದ ಮೇಲೆ ನೋಡಬೇಕಿದೆ.