Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಲ್ಲಿಗೆ ಹಲ್ಲು, ಕಣ್ಣಿಗೆ ಕಣ್ಣು, ರಕ್ತಕ್ಕೆ ರಕ್ತ - ರಿಕ್ಕಿ ಟ್ರೈಲರ್ ನೋಡಿ
ಸ್ಯಾಂಡಲ್ ವುಡ್ ನಟ ಕಮ್ ನಿರ್ದೇಶಕ ರಕ್ಷಿತ್ ಶೆಟ್ಟಿ ಹಾಗು ಹರಿಪ್ರಿಯಾ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ 'ರಿಕ್ಕಿ' ಚಿತ್ರದ ಭರ್ಜರಿ ಟ್ರೈಲರ್ ಇಂದು ಬಿಡುಗಡೆಯಾಗಿದೆ.
ಇಂದು (ಅಕ್ಟೋಬರ್ 1) ಸಂಜೆ 5 ಘಂಟೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು 'ರಿಕ್ಕಿ' ಚಿತ್ರದ ಟ್ರೈಲರ್ ನ್ನು ಬಿಡುಗಡೆ ಮಾಡಿದ್ದಾರೆ. ಸುಮಾರು 3 ನಿಮಿಷ 15 ಸೆಕೆಂಡುಗಳಿರುವ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಆಕ್ಷನ್-ಕಟ್ ಹೇಳಿರುವ ರಿಕ್ಕಿ ಟ್ರೈಲರ್ ಸಖತ್ ಆಗಿ ಮೂಡಿಬಂದಿದೆ. ರಿಕ್ಕಿ ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ..
ಎಸ್ ವಿ ಪ್ರೊಡಕ್ಷನ್ಸ್ ಅರ್ಪಿಸುವ ಚಿತ್ರದ ಟ್ರೈಲರ್ ನಲ್ಲಿ "ಬರಡಾದ ಆಗಸಕೆ ಕಾಡಿರುವುದು ಒಂದು ನೆನಪು, ಹುಡುಕಾಟದ ನೆಪದಲ್ಲಿ ಭುವಿಗೆ ಬಂದಿಳಿದು" ಹೀಗೆ ಸುಂದರವಾಗಿರುವ ಕವನದ ಸಾಲುಗಳಿವೆ.
ಜೊತೆಗೆ ನಟ ರಕ್ಷಿತ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿರುವ 'ರಿಕ್ಕಿ' ಚಿತ್ರದ ಟ್ರೈಲರ್ ನೋಡುತ್ತಿದ್ದರೆ, ಚಿತ್ರ ಬದುಕಿನ ವಿಭಿನ್ನ ಜಾಡು ಹಿಡಿದು ಹೋಗುವುದರ ಜೊತೆಗೆ ಕಾಡಿನಲ್ಲಿರುವ ನಕ್ಸಲೈಟ್ ಜನರ ಬದುಕು-ಬವಣೆಯ ಕಥೆಯನ್ನು ಹೇಳ ಹೊರಟಿರಬಹುದು ಎಂಬ ಅನಿಸಿಕೆ ಮೂಡುತ್ತದೆ.
ಒಂದು ಬದುಕಿನ ದುರಂತ, ಒಂದು ಬದುಕಿನ ಸಂಘರ್ಷ ಹಾಗು ಒಂದು ಅಂತಿಮ ಸಮರಗಳ ನಡುವೆ ನಡೆಯುವ ರಿಕ್ಕಿ ಚಿತ್ರದ ಟ್ರೈಲರ್ ಸಖತ್ ಕಲರ್ ಫುಲ್ ಆಗಿದ್ದು, ತುಂಬಾ ರೆಸ್ಪಾನ್ಸ್ ಗಳಿಸುತ್ತಿದೆ.
"ನೆತ್ತರ ಹನಿ ಮಣ್ಣಿಗೆ ಬಿದ್ದು ಆಕಾಶ ಕೆಂಪಾಗಿ ನೋವಿಗೆ ಹೊಸ ಅರ್ಥ ಬಂದು ಮನದಲ್ಲಿ ಈಗ ಕ್ರಾಂತಿಯ ಬೆಂಕಿ, ಸೂರಿನ ಸುಖವಿಲ್ಲ, ನಿದ್ದೆಯ ಕನಸಿಲ್ಲ, ಭಾಷಾತೀ ಈಗ ಗುರಿಯೊಂದೇ ಹಲ್ಲಿಗೆ ಹಲ್ಲು, ಕಣ್ಣಿಗೆ ಕಣ್ಣು, ರಕ್ತಕ್ಕೆ ರಕ್ತ". ಅಂತ ಕಿಚ್ಚ ಸುದೀಪ್ ಅವರ ಧ್ವನಿಯಲ್ಲಿ ಸಖತ್ ಆಗಿರೋ ಡೈಲಾಗ್ ಗಳು ಟ್ರೈಲರ್ ನಲ್ಲಿ ಮೂಡಿಬಂದಿದ್ದು, ಚಿತ್ರ ಭಾರಿ ನಿರೀಕ್ಷೆ ಹುಟ್ಟಿಸುತ್ತಿದೆ.
"ಶನಿನಾ ಲೆಟರ್ ಹಾಕಿ ಕರೆಸೋದು ಅಲ್ಲದೇ, ಮೆರವಣಿಗೆ ಮಾಡಿ ಹೆಗಲ ಮೇಲೆ ಕೂರಿಸಿದ್ದೀರಾ?, ತಕ್ಕಡಿಯಲ್ಲಿ ಹಾಕಿ ತೂಗೋದು ಬಿಟ್ಟು ಹೆಗಲ ಮೇಲಿರುವ ಭಾರ ಹೋರೋಕೆ ಜನ ಎಷ್ಟು ಬೇಕು ಅಂತ ಲೆಕ್ಕ ಹಾಕಿ' -ಈ ಕಾಡೇನು ನಿಮ್ಮ ಅಪ್ಪನ ಮನೆಯ ಆಸ್ತಿನಾ?. ಹೀಗೆ ರಕ್ಷಿತ್ ಶೆಟ್ಟಿಯವರು ಹೊಡೆಯೋ ಡೈಲಾಗ್ ಟ್ರೈಲರ್ ನಲ್ಲಿ ಸಖತ್ ಹೈಲೈಟ್ ಆಗುತ್ತಿದೆ.
ಒಟ್ನಲ್ಲಿ 'ಉಳಿದವರು ಕಂಡಂತೆ' ಚಿತ್ರದ ನಂತರ ಡಿಫರೆಂಟ್ ಕಥಾಹಂದರವನ್ನು ಒಳಗೊಂಡಿರುವ 'ರಿಕ್ಕಿ' ಚಿತ್ರದ ಮೂಲಕ ರಕ್ಷಿತ್ ಶೆಟ್ಟಿ ಅವರು ಮತ್ತೆ ಗಾಂಧಿನಗರಕ್ಕೆ ವಾಪಸಾಗುತ್ತಿದ್ದು, ಅಭಿಮಾನಿಗಳಿಗೆ ಮತ್ತೆ ಭರ್ಜರಿ ಮನೋರಂಜನೆ ಗ್ಯಾರಂಟಿ.