Don't Miss!
- Finance Tumakuru namma metro: ಮಾದಾವರದಿಂದ ತುಮಕೂರು ಮೆಟ್ರೋ ಕಾರಿಡಾರ್ ಅಪಡೇಟ್
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಮಾಜ ಬದಲಾಗಲು ಕೊಬ್ರಿ ಮಂಜು ಸಿನಿಮಾ ಮಾಡಲ್ವಂತೆ.!
ಕೇಳ್ರಪ್ಪೋ...ಕೇಳಿ....ಸಮಾಜವನ್ನ ಬದಲಾವಣೆ ಮಾಡಲು ನಿರ್ಮಾಪಕ ಕೆ.ಮಂಜು ಸಿನಿಮಾ ಮಾಡಲ್ವಂತೆ. ದುಡ್ಡು ಮಾಡೋಕೆ ರೌಡಿಸಂ ಸಿನಿಮಾ ಮಾತ್ರ ಮಾಡ್ತಾರಂತೆ.!
ತಗೊಳಪ್ಪಾ...ಬ್ರೇಕಿಂಗ್ ನ್ಯೂಸ್ ಅಂತ ಹುಬ್ಬೇರಿಸುವ ಮುನ್ನ ಇದು ರೀಲ್ ಸುದ್ದಿ ಎಂಬುದನ್ನು ಮರೆಯಬೇಡಿ.
'ಜಿಗರ್ ಥಂಡ' ಚಿತ್ರದಲ್ಲಿ 'ತಾವಾಗಿಯೇ' ಅಂದ್ರೆ ಚಿತ್ರ ನಿರ್ಮಾಪಕನಾಗಿಯೇ ಅಭಿನಯಿಸಿರುವ ಕೆ.ಮಂಜು ''ಸಮಾಜ ಬದಲಾಗೋಕೆ ನಾನು ಸಿನಿಮಾ ಮಾಡೋಕೆ ಆಗಲ್ಲ. ನನಗೊಂದು ಆಕ್ಷನ್-ರೌಡಿಸಂ ಸಿನಿಮಾ ಬೇಕು'' ಅಂತ ಡೈಲಾಗ್ ಹೊಡೆಯುತ್ತಾರೆ. [ಫೋಟೋ ಆಲ್ಬಂ; 'ಜಿಗರ್ ಥಂಡ' ಆಡಿಯೋ ರಿಲೀಸ್ ನಲ್ಲಿ ತಾರೆಗಳ ಸಂಗಮ]
ಇದೀಗಷ್ಟೇ ಬಿಡುಗಡೆ ಆಗಿರುವ 'ಜಿಗರ್ ಥಂಡ' ಟ್ರೈಲರ್ ನಲ್ಲಿ ಕೆ.ಮಂಜು ಹೊಡೆಯುವ ಈ ಒಂದೇ ಒಂದು ಡೈಲಾಗ್ ನಿಂದ ಏನೆಲ್ಲಾ ಆಗುತ್ತೆ ಅಂತ ಒಮ್ಮೆ ನೋಡ್ಕೊಂಡ್ ಬನ್ನಿ....
ತಮಿಳಿನ 'ಜಿಗರ್ ಥಂಡ' ಚಿತ್ರದ ಕನ್ನಡ ಅವತರಣಿಕೆ ಆಗಿರುವ ಈ ಸಿನಿಮಾದಲ್ಲಿ ನಿರ್ದೇಶಕನಾಗುವ ದೊಡ್ಡ ಕನಸು ಕಾಣುತ್ತಾ, ರೌಡಿಸಂ ಹುತ್ತಕ್ಕೆ ಕೈ ಹಾಕುವ ಸಹಾಯಕ ನಿರ್ದೇಶಕನ ಪಾತ್ರದಲ್ಲಿ ರಾಹುಲ್ ಮಿಂಚಿದ್ದಾರೆ. ಇನ್ನೂ ಖತರ್ನಾಕ್ ರೌಡಿ ಪಾತ್ರದಲ್ಲಿ ರವಿಶಂಕರ್ ಅಬ್ಬರಿಸಿದ್ದಾರೆ. [50ರ ಗಡಿ ತಲುಪಿದ ಸಂಭ್ರಮದಲ್ಲಿ 'ಆರ್ಮುಗಂ' ರವಿಶಂಕರ್]
ಸಿನಿಮಾದೊಳಗಿನ ಸಿನಿಮಾ ಮೇಕಿಂಗ್ ಕುರಿತ ಕಥೆ ಆಗಿರುವ 'ಜಿಗರ್ ಥಂಡ' ಚಿತ್ರಕ್ಕೆ ಶಿವಗಣೇಶ್ ನಿರ್ದೇಶನ, ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ. ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ 'ಜಿಗರ್ ಥಂಡ' ಚಿತ್ರಕ್ಕೆ ಎಸ್.ಆರ್.ವಿ.ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ. [ಮುಂದಿನ ವಾರ ಚಿತ್ರಮಂದಿರಗಳಲ್ಲಿ 'ಜಿಗರ್ ಥಂಡ' ಹವಾ]
ರಾಹುಲ್, ಸಂಯುಕ್ತ ಬೆಳವಾಡಿ, ದತ್ತಣ್ಣ, ಅವಿನಾಶ್, ಚಿಕ್ಕಣ್ಣ 'ಜಿಗರ್ ಥಂಡ' ಚಿತ್ರದ ಪ್ರಮುಖ ಪಾತ್ರಧಾರಿಗಳು. ಮುಂದಿನ ವಾರ (ಜೂನ್ 24) 'ಜಿಗರ್ ಥಂಡ' ಬಿಡುಗಡೆ ಆಗಲಿದೆ.