Don't Miss!
- Sports PBKS vs MI: ಐಪಿಎಲ್ನಲ್ಲಿ ಈ ಇತಿಹಾಸ ನಿರ್ಮಿಸಿದ 2ನೇ ಆಟಗಾರ ರೋಹಿತ್ ಶರ್ಮಾ
- News ಸಿಎಂ ಸಿದ್ದರಾಮಯ್ಯಗೆ ಡಾ.ಕೆ.ಸುಧಾಕರ್ ಸವಾಲು!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Lifestyle ಊಟದ ರುಚಿ ಹೆಚ್ಚಿಸುತ್ತೆ ಚೌಳಿಕಾಯಿ ಪಲ್ಯ..! ಹೀಗೆ ಮಾಡಿ
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರೆಬಲ್ ಸ್ಟಾರ್ ಅಂಬಿ ಇಲ್ಲಿಲ್ಲ, ರಮ್ಯಾ ಕಥೆ ಗೊತ್ತಿಲ್ಲ
ರೆಬಲ್ ಸ್ಟಾರ್ ಅಂಬರೀಶ್ ಸಿಂಗಾಪುರದಲ್ಲಿದ್ರೂ ಮನಸ್ಸು ಮಾತ್ರ ಬೆಂಗಳೂರು, ರಾಜಕೀಯ, ರೇಸ್ಕೋರ್ಸ್, ಸಿನಿಮಾ ಬಗ್ಗೇನೇ ಯೋಚಿಸ್ತಿರುತ್ತೆ. ನಾನು ಬೇಗ ಬರ್ತೀನಿ ಅಂತ ಅಂಬರೀಶ್ ಹೇಳಿದ್ದೂ ಆಗಿದೆ. ಆದರೆ ಅಂಬರೀಶ್ ಈ ಸಾರಿ ಚುನಾವಣೆ ಪ್ರಚಾರ ಅಂತ ಪಾಲ್ಗೊಳ್ಳದಿದ್ರೆ ಕಾಂಗ್ರೆಸ್ ಗೆ ಲಾಸ್ ಆಗುತ್ತೋ ಇಲ್ವೋ ಆದ್ರೆ ಒಬ್ಬರಿಗಂತು ಖಂಡಿತಾ ಲಾಸು.
ಅದು ಮೋಹಕತಾರೆ ರಮ್ಯಾಗೆ. ಅಂಬರೀಶ್ ಅಂಕಲ್ ಅಂತ ಪ್ರೀತಿಯಿಂದ ಕರೆದು ಅಂಬರೀಶ್ ರ ಪ್ರೀತಿ ಗಳಿಸಿಕೊಂಡು ಮಂಡ್ಯದ ಜನರ ಪ್ರೀತಿಯನ್ನೂ ಗಿಟ್ಟಿಸಿಕೊಂಡಿದ್ರು. ಆದರೆ ಕಳೆದಬಾರಿ ವಿಧಾನಸಭಾ ಚುನಾವಣೆಯಲ್ಲಿ ಅಂಬಿ ಹಾಗೂ ಎಸ್.ಎಂ. ಕೃಷ್ಣ ಜಟಾಪಟಿಯಿಂದ ಅಂಬರೀಶ್ ಬೆಂಬಲಿಗರು ರಮ್ಯಾರನ್ನ ಬೆಂಬಲಿಸಲು ಹಿಂದೆ ಮುಂದೆ ನೋಡಿದರು. [ಸದ್ಯಕ್ಕೆ ರಮ್ಯಾ 'ಆರ್ಯನ್'ಗೆ ಬಿಡುಗಡೆ ಭಾಗ್ಯವಿಲ್ಲ]
ಇದೆಲ್ಲಕ್ಕಿಂತ ಮುಖ್ಯವಾಗಿ ಬರ್ರಲಾ...ಪಾಪ ಎಳೆ ಹುಡ್ಗಿ ಕಲೀತಾ ಐತೆ ರಾಜಕೀಯನ ಅಂತ ತನ್ನ ಬೆಂಬಲಿಗರಿಗೆ ಬುದ್ಧಿ ಹೇಳೋಕೆ ಸ್ವತಃ ಅಂಬೀನೇ ಇಲ್ಲಿಲ್ಲ. ಕರ್ನಾಟಕದ ಇಂಡಿಯಾ ಮಂಡ್ಯದಲ್ಲಿ ರಮ್ಯಾ ಕಥೆ ಏನಾಗುತ್ತೋ ಗೊತ್ತಿಲ್ಲ.