twitter
    For Quick Alerts
    ALLOW NOTIFICATIONS  
    For Daily Alerts

    ರೆಬಲ್ ಸ್ಟಾರ್ ಅಂಬಿ ಇಲ್ಲಿಲ್ಲ, ರಮ್ಯಾ ಕಥೆ ಗೊತ್ತಿಲ್ಲ

    By ಜೀವನರಸಿಕ
    |

    ರೆಬಲ್ ಸ್ಟಾರ್ ಅಂಬರೀಶ್ ಸಿಂಗಾಪುರದಲ್ಲಿದ್ರೂ ಮನಸ್ಸು ಮಾತ್ರ ಬೆಂಗಳೂರು, ರಾಜಕೀಯ, ರೇಸ್ಕೋರ್ಸ್, ಸಿನಿಮಾ ಬಗ್ಗೇನೇ ಯೋಚಿಸ್ತಿರುತ್ತೆ. ನಾನು ಬೇಗ ಬರ್ತೀನಿ ಅಂತ ಅಂಬರೀಶ್ ಹೇಳಿದ್ದೂ ಆಗಿದೆ. ಆದರೆ ಅಂಬರೀಶ್ ಈ ಸಾರಿ ಚುನಾವಣೆ ಪ್ರಚಾರ ಅಂತ ಪಾಲ್ಗೊಳ್ಳದಿದ್ರೆ ಕಾಂಗ್ರೆಸ್ ಗೆ ಲಾಸ್ ಆಗುತ್ತೋ ಇಲ್ವೋ ಆದ್ರೆ ಒಬ್ಬರಿಗಂತು ಖಂಡಿತಾ ಲಾಸು.

    ಅದು ಮೋಹಕತಾರೆ ರಮ್ಯಾಗೆ. ಅಂಬರೀಶ್ ಅಂಕಲ್ ಅಂತ ಪ್ರೀತಿಯಿಂದ ಕರೆದು ಅಂಬರೀಶ್ ರ ಪ್ರೀತಿ ಗಳಿಸಿಕೊಂಡು ಮಂಡ್ಯದ ಜನರ ಪ್ರೀತಿಯನ್ನೂ ಗಿಟ್ಟಿಸಿಕೊಂಡಿದ್ರು. ಆದರೆ ಕಳೆದಬಾರಿ ವಿಧಾನಸಭಾ ಚುನಾವಣೆಯಲ್ಲಿ ಅಂಬಿ ಹಾಗೂ ಎಸ್.ಎಂ. ಕೃಷ್ಣ ಜಟಾಪಟಿಯಿಂದ ಅಂಬರೀಶ್ ಬೆಂಬಲಿಗರು ರಮ್ಯಾರನ್ನ ಬೆಂಬಲಿಸಲು ಹಿಂದೆ ಮುಂದೆ ನೋಡಿದರು. [ಸದ್ಯಕ್ಕೆ ರಮ್ಯಾ 'ಆರ್ಯನ್'ಗೆ ಬಿಡುಗಡೆ ಭಾಗ್ಯವಿಲ್ಲ]

    Actress Ramya
    ಈ ಬಾರಿ ಅಂಬಿ ಅಭಿಮಾನಿಗಳು ರಮ್ಯಾಗೆ ಚುನಾವಣೆಯಲ್ಲಿ ಬೆಂಬಲ ನೀಡೋ ವಿಷಯದಲ್ಲಿ ಯೋಚಿಸ್ತಿದ್ದಾರೆ. ಇತ್ತೀಚೆಗೆ ರಮ್ಯಾ ಅಂಬರೀಶ್ ಬೆಂಬಲಿಗರನ್ನ ಗಣನೆಗೆ ತೆಗೆದುಕೊಳ್ತಿಲ್ಲ ಅಂತ ವಿರೋಧಿಸಿದ್ದೂ ಆಗಿದೆ.

    ಇದೆಲ್ಲಕ್ಕಿಂತ ಮುಖ್ಯವಾಗಿ ಬರ್ರಲಾ...ಪಾಪ ಎಳೆ ಹುಡ್ಗಿ ಕಲೀತಾ ಐತೆ ರಾಜಕೀಯನ ಅಂತ ತನ್ನ ಬೆಂಬಲಿಗರಿಗೆ ಬುದ್ಧಿ ಹೇಳೋಕೆ ಸ್ವತಃ ಅಂಬೀನೇ ಇಲ್ಲಿಲ್ಲ. ಕರ್ನಾಟಕದ ಇಂಡಿಯಾ ಮಂಡ್ಯದಲ್ಲಿ ರಮ್ಯಾ ಕಥೆ ಏನಾಗುತ್ತೋ ಗೊತ್ತಿಲ್ಲ.

    English summary
    What happens in Mandya lok sabha elections 2014 in the absence of Ambareesh, Congress will once again field actor-turned-politician from Mandya Lok Sabha constituency for the forthcoming General Elections slated in few months from now.
    Friday, March 21, 2014, 14:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X