Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವರ್ಷ ಓಡಿದ್ರೂ ಲೈಫಲ್ಲಿ ಕೆಂಡಸಂಪಿಗೆ ನೋಡಲ್ಲ ಅಂದೋರು ಯಾರು?
"ನೀನು ಮಾಡಿರೋ 'ಕೆಂಡಸಂಪಿಗೆ' 25 ದಿನ ಅಲ್ಲ 25 ವಾರ ಓಡಿದ್ರೂ ನಾನು ನೋಡಲ್ಲ, ಯಾಕೋ ನೋಡಲ್ಲ, ಯಾಕೆ ಅಂದ್ರೆ ನನಗೆ ಇಷ್ಟ ಇಲ್ಲ ನೋಡೋದಿಕ್ಕೆ. 'ದುನಿಯಾ' ಅಂತ ಒಂದೊಳ್ಳೆ ಸಿನಿಮಾ ನನಗೆ ಮಾಡಿ ಯಾರೋ ಹೊಸಬರಿಗೆ ಎಲ್ಲಾ ನೀವು ಒಳ್ಳೊಳ್ಳೆ ಸಿನಿಮಾ ಮಾಡ್ತಾ ಇದ್ರೆ ನನಗೂ ಹೊಟ್ಟೆ ಉರಿಯಲ್ವಾ"?.
'ನನಗೂ ಹೊಟ್ಟೆ ಉರಿಯುತ್ತೆ ಜೊತೆಗೆ ನೋಡಬಾರದು ಅನ್ನೋ ಆಸೆ ತುಂಬಾನೇ ಜಾಸ್ತಿ ಇದೆ. ಈ ಸಿನಿಮಾ ಒಂದು ವರ್ಷ ಓಡಿದ್ರೂನೂ ನನ್ನ ಲೈಫಲ್ಲಿ ನನ್ನ ಮಕ್ಕಳಿಗೂ ಕರ್ಕೊಂಡು ಹೋಗಿ ಈ ಸಿನಿಮಾ ನಾನು ತೋರಿಸಲ್ಲ'.
ನಿನ್ಗೆ ಇವಾಗ ಏನಾಗಬೇಕು?, ನನ್ಗೂ ಒಂದು ಸಿನಿಮಾ ಮಾಡು, ನಿನ್ನ ಎಲ್ಲಾ ಇಡೀ ಆಲ್ ಓವರ್ ವರ್ಲ್ಡ್ ಲ್ಲಿ ರಿಲೀಸ್ ಮಾಡ್ತಾ ಇದ್ದೀಯಾ, ಅದೇನೋ ಆಸ್ಟ್ರೇಲಿಯಾಕ್ಕೂ ಕಳಿಸ್ತಾ ಇದ್ದೀಯಾ, ಅಯ್ಯಯ್ಯೋ ಅದನ್ನೆಲ್ಲ ನೋಡಿ ನನ್ಗೂ ಅನ್ನಿಸುತ್ತೆ 'ದುನಿಯಾ' ಮಾಡಿದವ್ರು ನಾವು ಮತ್ತೊಂದು ಸಿನಿಮಾ ಯಾಕಾಗ್ತಾ ಇಲ್ಲ ಅಂತ.
ನನಗೆ ಪರ್ಸನಲಿ ನೋಡೋಕೆ ಇಷ್ಟ ಇಲ್ಲ, ನಾನು ನೋಡೋದು ಇಲ್ಲ. ಆದಷ್ಟು ಜಲ್ದಿ ನನಗೆ ಸಿನಿಮಾ ಮಾಡಿದ್ರೆ ಮಾತ್ರ, ಆವಾಗ ನೀನು ಮಾಡಿದ ಸಿನಿಮಾ ಮಿಕ್ಕಿದ್ದು ಎಲ್ಲಾ ನಾನು ನೋಡ್ತಿನಿ. ಇಲ್ಲಾಂದ್ರೆ ಅಲ್ಲಿಯವರೆಗೂ ನನಗೆ ನಿನ್ನ ಯಾವುದೇ ಸಿನಿಮಾ ನೋಡೋಕೆ ನನ್ಗೆ ಇಷ್ಟ ಇಲ್ಲ.
ಹೋ ನಿನಗೆ ನಾನು ಸಿನಿಮಾ ಮಾಡಿದ್ರೆ ನನ್ನ ಸಿನಿಮಾ ನೋಡ್ತೀಯಾ?, ಹಡ್ರೆಂಡ್ ಪರ್ಸೆಂಟ್ ನೋಡ್ತಿನಿ. ಯಾಕಂದ್ರೆ ನನಗೆ ಕೇಳೋ ಅಧಿಕಾರ ಇದೆ ನೀನು ಮಾಡ್ಲೇ ಬೇಕು.
ಸರಿ ಮಾಡ್ತೀನಿ. ಆದಷ್ಟು ಜಲ್ದಿ ಶುರು ಮಾಡು
ಇಷ್ಟೆಲ್ಲಾ ಮಾತಾಡಿರೋದು ಯಾರು?. ಈ ಸಂಭಾಷಣೆ ಯಾರ ನಡುವೆ ನಡೆದಿದೆ ಅಂತ ನೋಡೋ ಕುತೂಹಲ ಇದ್ರೆ ಈ ವಿಡಿಯೋ ನೋಡಿ..
ಕೆಂಡ ಸಂಪಿಗೆ ಸಿನಿಮಾ 25 ವಾರ ಓಡಿದ್ರೂ ದುನಿಯಾ ವಿಜಿ ನೋಡಲ್ವಂತೆ !#kannada #kannadamovies Duniya Vijay Duniya Suri Manvitha Harish Yograj Bhat
Posted by Kannada Filmibeat on Saturday, October 3, 2015
ಹೌದು ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್, ಬಾಕ್ಸಾಫೀಸ್ ನಲ್ಲಿ ಉತ್ತಮ ಗಳಿಕೆ ಮಾಡುತ್ತಿರುವ 'ಕೆಂಡಸಂಪಿಗೆ' ನಿರ್ದೇಶಕ ದುನಿಯಾ ಸೂರಿ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಅವರೊಂದಿಗೆ ನಡೆದಿರುವ ಸಂಭಾಷಣೆಯ ಒಂದು ಫನ್ನಿ ವಿಡಿಯೋ ನೋಡಿ ಎಂಜಾಯ್ ಮಾಡಿದ್ರಲ್ವಾ ನೀವು.
ಅಂದಹಾಗೆ 'ದುನಿಯಾ' ಚಿತ್ರದ ಮೂಲಕ ಹೀರೋ ಆಗಿ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಕಾಲಿಟ್ಟ ದುನಿಯಾ ವಿಜಯ್ ಅವರಿಗಿರುವ ನಟನಾ ಕೌಶಲ್ಯವನ್ನು ಕನ್ನಡ ಚಿತ್ರರಂಗಕ್ಕೆ ತೋರಿಸಿಕೊಟ್ಟ ನಿರ್ದೇಶಕ ದುನಿಯಾ ಸೂರಿ ಅವರು ರೀಸೆಂಟ್ ಹಿಟ್ 'ಕೆಂಡಸಂಪಿಗೆ'ಯಲ್ಲೂ ಹೊಸಬರನ್ನೇ ಪರಿಚಯಿಸಿದ್ದಾರೆ.
ಇದೀಗ ಈ ವಿಡಿಯೋ ದಲ್ಲಿ ದುನಿಯಾ ವಿಜಯ್ ಅವರು ಚಿತ್ರದ ಬಗ್ಗೆ ಪಾಸಿಟಿವ್ ರೆಸ್ಪಾನ್ಸ್ ಕೊಟ್ಟಿದ್ದು, ಉತ್ತಮ ಬೆಳವಣಿಗೆ, ಜೊತೆಗೆ ಇಲ್ಲಿ ದುನಿಯಾ ವಿಜಿ ಅವರು ಚಿತ್ರವನ್ನು ಒಳ್ಳೆ ಸಿನಿಮಾ ಎಂದಿದ್ದಾರೆ. ಒಟ್ನಲ್ಲಿ ಇವರಿಬ್ಬರ ಜುಗಲ್ ಬಂದಿಯಲ್ಲಿ ಮತ್ತೊಮ್ಮೆ ಒಂದೊಳ್ಳೆ ಸಿನಿಮಾ ಬಂದ್ರೂ ಬರಬಹುದು ಕಾದು ನೋಡೋಣ.