Don't Miss!
- News Heavy Rain: ರಣಭೀಕರ ಮಳೆಗೆ ರಾಷ್ಟ್ರೀಯ ಹೆದ್ದಾರಿ ಇಬ್ಭಾಗ: ಭೂಕುಸಿತದಿಂದ ರಸ್ತೆ ಸಂಪರ್ಕ ಬಂದ್-ಎಲ್ಲಿ?
- Lifestyle ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದುನಿಯಾ ವಿಜಯ್ ಪ್ರತ್ಯಂಗಿರಾ ಹೋಮ ಮಾಡಿಸಿದ್ದೇಕೆ?
ನಟ ದುನಿಯಾ ವಿಜಯ್ ಅವರು ಮಂಗಳವಾರ (ಆ.7) ಮಾಗಡಿ ರಸ್ತೆಯ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ಪ್ರತ್ಯಂಗಿರಾ ಹೋಮವನ್ನು ಮಾಡಿಸಿದ್ದಾರೆ. ಈ ಹೋಮ ಮಾಡಿಸಲು ಕಾರಣ ಏನು ಎಂಬ ಪ್ರಶ್ನೆಗೆ ಅವರೇ ಒಂದಷ್ಟು ವಿವರಗಳನ್ನೂ ನೀಡಿದ್ದಾರೆ.
ಒಬ್ಬ ಮನುಷ್ಯ ಎತ್ತರಕ್ಕೆ ಬೆಳೆದಂತೆಲ್ಲಾ ಅವನಿಗೆ ಶತ್ರುಗಳೂ ಹೆಚ್ಚಾಗುತ್ತಾರೆ. ತಾವು ಈ ಹೋಮವನ್ನು ನನಗೂ ಒಳ್ಳೆಯದಾಗಲಿ ಹಾಗೆಯೇ ನನ್ನ ಶತ್ರುಗಳಿಗೂ ಒಳ್ಳೆಯದಾಗಲಿ ಎಂದು ಮಾಡಿಸುತ್ತಿದ್ದೇನೆ ಎಂದಿದ್ದಾರೆ. ಭೀಮನ ಅಮಾವಾಸ್ಯೆ ದಿನ ಸಂಜೆ 6ಕ್ಕೆ ಆರಂಭವಾದ ಹೋಮ ರಾತ್ರಿ 9 ಗಂಟೆಗೆ ಮುಗಿದಿದೆ.
ಆದರೆ ದುನಿಯಾ ವಿಜಯ್ ಮಾತ್ರ ತಾನು 'ಜಯಮ್ಮನ ಮಗ' ಚಿತ್ರದಲ್ಲಿ ಕಾಳಿ ಪಾತ್ರವನ್ನು ಪೋಷಿಸಿದ್ದೇನೆ. ಅದಕ್ಕಾಗಿ ಶಾಂತಿ ಮಾಡಿಸಲು ಈ ಹೋಮ ಎಂದಿದ್ದಾರೆ. ಹಿರಣ್ಯಕಶಿಪುವನ್ನು ಉಗ್ರನರಸಿಂಹ ಸಂಹರಿಸಿದ ಮೇಲೆ ಆತನನ್ನು ಶಾಂತಗೊಳಿಸಲು ಶಿವನ ಮೂರನೇ ಕಣ್ಣಿನಿಂದ ಪ್ರತ್ಯಂಗಿರಾ ದೇವಿ ಹೊರಹೊಮ್ಮುತ್ತಾಳೆ.
ದುನಿಯಾ ವಿಜಯ್ ನಿರ್ಮಿಸಿ ನಟಿಸಿರುವ 'ಜಯಮ್ಮನ ಮಗ' ಚಿತ್ರದ ಸಕ್ಸಸ್ ಗಾಗಿ ಹಾಗೂ ಕುಟುಂಬ ಕಲಹಗಳಿಂದ ಧೃತಿಗೆಟ್ಟಿರುವ ವಿಜಯ್ ಈ ಹೋಮ ಮಾಡಿಸಿರಬಹುದು ಎಂಬುದು ಮೇಲ್ನೋಟಕ್ಕೆ ಗೊತ್ತಾಗುವ ಸಂಗತಿ.