Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುಂಗಾರುಮಳೆ 2 ಡಿ.29ಕ್ಕೆ ಬರಬೇಕು, ಯಾಕೆ ಗೊತ್ತಾ?
'ಮುಂಗಾರುಮಳೆ2' ಡಿಸೆಂಬರ್ 29ಕ್ಕೆ ಬಂದರೆ ಚೆನ್ನಾಗಿರುತ್ತೆ ಅಂತ ಯಾಕೆ ಹೇಳ್ತಿದ್ದೀವಿ ಗೊತ್ತಾ? ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ, ರಕ್ತಸಿಕ್ತ ಚಿತ್ರಗಳ ಚಿಂದಿ ಚಿಂದಿ ಸೋಲುಗಳನ್ನು ಆಯುತ್ತಿದ್ದ ಚಂದನವನದಲ್ಲಿ ಹೊಸ ಪಥವನ್ನೇ ಹುಟ್ಟುಹಾಕಿದ 'ಮುಂಗಾರುಮಳೆ' ಅನ್ನೋ ಅಮರ ಪ್ರೇಮಕಾವ್ಯ ತೆರೆಗೆ ಬಂದು ಅಂದಿಗೆ ಭರ್ತಿ 10 ವರ್ಷಗಳಾಗಲಿವೆ. ಆ ಸಂದರ್ಭವೇ ಮುಂಗಾರುಮಳೆ 2ಕ್ಕೆ ಸೂಕ್ತ ಅಲ್ಲವಾ?
ಕಾಮಿಡಿ ಟೈಂ ಗಣೇಶ್ ಅನ್ನೋ ಸಾಮಾನ್ಯ ಕಾಮಿಡಿ ಕಲಾವಿದ, ಹೆಸರೇ ಗೊತ್ತಿಲ್ಲದ ಪಂಜಾಬಿನ ಹುಡುಗಿ ಪೂಜಾ ಗಾಂಧಿ ರಾತ್ರೋ ರಾತ್ರಿ ಸ್ಟಾರ್ಗಳನ್ನಾಗಿ ಮಾಡಿದ ಸಿನಿಮಾ ಅದು. ಯೋಗರಾಜ್ ಭಟ್ ಅನ್ನೋ ಮಾಂತ್ರಿಕ ನಿರ್ದೇಶಕ ಕನ್ನಡ ಚಿತ್ರರಂಗದಲ್ಲಿ ಹುಟ್ಟುಪಡೆದ ದಿನ. 70 ಲಕ್ಷ ಬಜೆಟ್ನಲ್ಲಿ 70 ಕೋಟಿ ಗಳಿಸಿತು ಎನ್ನುವ ಸುದ್ದಿಯೇ ನಮ್ಮ ಕಿವಿಗೆ ಎಂತಹಾ ರೋಮಾಂಚನ ಉಂಟು ಮಾಡುತ್ತೆ ಅಲ್ಲವಾ? ಹತ್ತು ವರ್ಷಗಳಾದರೂ ಮತ್ತೆ ಅಂತಹಾ ಪ್ರೇಮಕಾವ್ಯ ಕನ್ನಡ ಚಿತ್ರರಂಗದಲ್ಲಿ ಮರುಕಳಿಸಿಲ್ಲ. [ಮುಂಗಾರುಮಳೆ ಹುಡುಗನ ವಯಸ್ಸೆಷ್ಟು? ಏನು ವಿಶೇಷ?]
ಆದರೆ ಈಗ ಅದೇ ಟೈಟಲ್ನ ಮುಂದುವರಿದ ಭಾಗ (ಕಥೆ ಮುಂದುವರಿದ ಭಾಗವಲ್ಲ) ಮತ್ತೊಂದು ಚಿತ್ರವಾಗಿ ನಿಮ್ಮ ಮುಂದೆ ಬರುತ್ತಿದೆ. ಸೋ, ಆ ಚಿತ್ರ ಕೂಡ ಸರಿಯಾಗಿ 10 ವರ್ಷದ ನಂತರ ತೆರೆಗೆ ಬಂದರೆ ನೋಡೋಕೆ ಮತ್ತೊಂದು ಕಾರಣವೂ ಸಿಗುತ್ತಲ್ಲ? ಅಂತಹದ್ದೇ ಮತ್ತೊಂದು ಮ್ಯಾಜಿಕ್ ನಡೆಯಲಿ. ಕನ್ನಡ ಚಿತ್ರರಂಗ ಗೆಲುವಿನಿಂದ ತೇಲಾಡುವಂತಹಾ ಮತ್ತೊಂದು ಮುಂಗಾರುಮಳೆ ನಮ್ಮ ಮುಂದೆ ಬರಲಿ ಅನ್ನುವುದು ಪ್ರತಿಯೊಬ್ಬ ಕನ್ನಡ ಸಿನಿಪ್ರೇಮಿಯ ಕನಸು ಅಲ್ಲವಾ?
ಆದರೆ ಗೋಲ್ಡನ್ ಸ್ಟಾರ್ ಗಣೇಶ್ ಅಂತಹಾ ಸೆಂಟಿಮೆಂಟ್ ಇಟ್ಟುಕೊಂಡಿಲ್ಲವಂತೆ. ಸಿನಿಮಾ ಯಾವಾಗ ತೆರೆಗೆ ಬಂದರೂ ಓಕೆ ಅಂತಾರೆ. ಚಿತ್ರತಂಡ ಈಗಾಗಲೇ ಟೀಸರ್ ರಿಲೀಸ್ ಮಾಡಿದೆ. ಜುಲೈನ ಜೋರಾದ ಮಳೆಗಾಲದಲ್ಲಿ, ಇಲ್ಲದಿದ್ದರೆ ಆಗಸ್ಟ್ ವೇಳೆಗೆ ಜೂಮ್ ನಂತರ ಮುಂಗಾರುಮಳೆ 2 ತೆರೆಗೆ ಬರೋದು ಖಚಿತ ಎನ್ನುತ್ತಿದೆ ನಿರ್ಮಾಪಕ ಗಂಗಾಧರ್ ಮೂಲ. ಮುಂಗಾರು ಮಳೆಯ ಜೊತೆಗೆ ಬಂದಿದ್ದ 'ಮೊಗ್ಗಿನ ಮನಸು' ನಿರ್ದೇಶಕ ಶಶಾಂಕ್ ಮನದಲ್ಲಿ ಏನೇನಿದೆಯೋ ಬಲ್ಲವರಾರು? [ಮುಂಗಾರು ಮಳೆಯಲ್ಲಿ ಗಣೇಶ್ ಜೊತೆಯಾದ ಕುಡ್ಲದ ಬಾಲೆ]