Don't Miss!
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಕಿಂಗ್ ರಾಮಾಚಾರಿ ಹುಟ್ಟುಹಬ್ಬಕ್ಕೆ ಬೆಳ್ಳಿ ಕಿರೀಟ, ಗದೆ ಗಿಫ್ಟ್!
ಸ್ಯಾಂಡಲ್ ವುಡ್ ಸುಲ್ತಾನ್...ರಾಕಿಂಗ್ ಸ್ಟಾರ್ ಯಶ್ ಗಿಂದು ಹುಟ್ಟುಹಬ್ಬದ ಸಂಭ್ರಮ. 30ನೇ ವಸಂತಕ್ಕೆ ಕಾಲಿಟ್ಟಿರುವ ಯಶ್, ಇವತ್ತು ತಮ್ಮ ಹೊಸಕೆರೆಹಳ್ಳಿ ನಿವಾಸದಲ್ಲಿ ಅಭಿಮಾನಿಗಳ ಜೊತೆ ಬರ್ತಡೆ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ.
ಯಶ್ ಹುಟ್ಟುಹಬ್ಬದ ಪ್ರಯುಕ್ತ 2 ಕೆ.ಜಿ ತೂಕದ ಬೆಳ್ಳಿ ಗದೆಯನ್ನ ಉಡುಗೊರೆಯಾಗಿ ನೀಡಿದ್ದಾರೆ ನಿರ್ಮಾಪಕ ಜಯಣ್ಣ. ಇನ್ನೂ 'ಮಾರುತಿ 800' ಚಿತ್ರದ ಪ್ರೊಡ್ಯೂಸರ್ ರಮೇಶ್ ಕೂಡ ಕೋಲ್ಕತ್ತಾದಲ್ಲಿ ತಯಾರಿಸಿರುವ 1.5 ಕೆ.ಜಿ ತೂಕದ ಬೆಳ್ಳಿ ಕಿರೀಟವನ್ನ ಯಶ್ ಗೆ ಗಿಫ್ಟ್ ಮಾಡಿದ್ದಾರೆ. [ಯಶ್ ಬಗ್ಗೆ ಫೇಸ್ ಬುಕ್ ನಲ್ಲಿ ರಾಧಿಕಾ ಪಂಡಿತ್ ಹೇಳಿದ್ದೇನು?]
ಸರ್ಪ್ರೈಸ್ ಆಗಿ ಬಂದ ಬೆಳ್ಳಿ ಕಿರೀಟ ಮತ್ತು ಗದೆ ಹಿಡಿದು ನಟ ಯಶ್ ಸಂಭ್ರಮಿಸಿದರು. ಇದೇ ವೇಳೆ ತಮ್ಮ ನಿವಾಸದ ಸಮೀಪದಲ್ಲೇ ಇರುವ ನಟಸಾರ್ವಭೌಮ ಡಾ.ರಾಜ್ ಪುತ್ಥಳಿಗೆ ಯಶ್ ಮಾಲಾರ್ಪಣೆ ಮಾಡಿದರು. [ನಟ ಯಶ್ ಹೃದಯವಂತಿಕೆ ಎಂಥದ್ದು ಅಂತೀರಾ?]
ಇಂದು ಇಡೀ ದಿನ ಅಭಿಮಾನಿಗಳಿಗಾಗಿಯೇ ಮೀಸಲಿಟ್ಟಿರುವ ಯಶ್ ಖುಷಿ ಖುಷಿಯಾಗಿ ಮಾಧ್ಯಮಗಳ ಜೊತೆಗೂ ಮಾತಿಗಿಳಿದರು. ''ಮಾಸ್ಟರ್ ಪೀಸ್' ಯಶಸ್ವಿಯಾಗಿರುವುದರಿಂದ ಈ ವರ್ಷದ ಹುಟ್ಟುಹಬ್ಬ ಸಖತ್ ಸ್ಪೆಷಲ್'' ಎಂದರು. [ರಾಕಿಂಗ್ ಸ್ಟಾರ್ ಯಶ್ ಗೆಲುವಿನ ರಹಸ್ಯ ಮಂತ್ರ]
'ಯಶ'ಸ್ಸಿನ ಎಣಿಯಲ್ಲಿ ಎತ್ತರೆತ್ತರಕ್ಕೆ ಏರುತ್ತಿರುವ ಯಶ್ ಪಯಣ ಹೀಗೆ ಇರಲಿ ಅನ್ನೋದು ಅಭಿಮಾನಿಗಳ ಹಾರೈಕೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಯಶ್ ಗೆ ನೀವೂ ವಿಶ್ ಮಾಡಿಬಿಡಿ....