Don't Miss!
- Sports ಟಿ20 ವಿಶ್ವಕಪ್ಗಾಗಿ ಭಾರತದ ಟಾಪ್ 3 ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ವಿರಾಟ್ ಕೊಹ್ಲಿ ಸ್ಥಾನವೇನು?
- News ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನ ಇಳಿಸಲು ಕಾಯುತ್ತಿದ್ದಾರೆ: ಕಾರಣ ಬಿಚ್ಚಿಟ್ಟ ಜನಾರ್ದನ ರೆಡ್ಡಿ
- Finance April 24 Gold Rate: ಚಿನ್ನದ ಬೆಲೆ ಇಳಿಕೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Technology Infinix: ನಾಳೆ ಇನ್ಫಿನಿಕ್ಸ್ ನೋಟ್ 40 ಪ್ರೊ+ 5G ಫೋನ್ ಖರೀದಿಗೆ ಲಭ್ಯ..108ಎಂಪಿ ಕ್ಯಾಮೆರಾ!
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Lifestyle ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಧಿಕಾ ಪಂಡಿತ್ - ಯಶ್ ಮದುವೆ: ಸೂಪರ್ ಸ್ಪೆಷಾಲಿಟಿಗಳು ಏನೇನು.?
ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ರವರ ವಿವಾಹ ಮಹೋತ್ಸವ ಡಿಸೆಂಬರ್ 9, 10, 11 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ.
ಹೇಳಿ ಕೇಳಿ, ಇದು ಸ್ಯಾಂಡಲ್ ವುಡ್ ನ 'ಸ್ಟಾರ್ ನಟ-ನಟಿ' ವಿವಾಹ. ಅಂದ್ಮೇಲೆ ಸೂಪರ್ ಸ್ಪೆಷಾಲಿಟಿಗಳು ಇರಲೇಬೇಕಲ್ವಾ? ಯಶ್-ರಾಧಿಕಾ ಪಂಡಿತ್ ಮದುವೆಯಲ್ಲಿ ಏನೆಲ್ಲ ವಿಶೇಷತೆಗಳು ಇರಲಿವೆ ಎಂಬುದರ ಕುರಿತ ಸಂಪೂರ್ಣ ವರದಿ ಇಲ್ಲಿದೆ ಓದಿರಿ....
ಅರಮನೆ ಮೈದಾನದಲ್ಲಿ ಬೇಲೂರು, ಹಳೇಬೀಡು.!
ಯಶ್ - ರಾಧಿಕಾ ಪಂಡಿತ್ ಮದುವೆಗಾಗಿ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಬೇಲೂರು, ಹಳೇಬೀಡು ದೇವಸ್ಥಾನದ ಸೆಟ್ ರೆಡಿ ಆಗುತ್ತಿದೆ. [ಸ್ಯಾಂಡಲ್ ವುಡ್ ದಿಗ್ಗಜರಿಗೆ ಯಶ್ 'ಮದುವೆಯ ಮಮತೆಯ ಕರೆಯೋಲೆ']
ರೆಡಿ ಮಾಡುತ್ತಿರುವವರು ಯಾರು?
ಯಶ್ ಹಾಗೂ ರಾಧಿಕಾ ಪಂಡಿತ್ ರವರ ಮದುವೆಗೆ ವಿಶೇಷ ಸೆಟ್ ತಯಾರಿ ಮಾಡುತ್ತಿರುವವರು ಅರುಣ್ ಸಾಗರ್. [ಯಶ್-ರಾಧಿಕಾ ಲಗ್ನಪತ್ರಿಕೆ ಹೇಗಿದೆ? ಯಾರೂ ಗಮನಿಸದ ವಿಶೇಷತೆಗಳೇನು.?]
ಶಿವ-ಪಾರ್ವತಿ ಥೀಮ್.!
ಯಶ್-ರಾಧಿಕಾ ಪಂಡಿತ್ ಧಾರೆಗೆ 'ಶಿವ-ಪಾರ್ವತಿ' ಥೀಮ್ ಹಾಗೂ ರಿಸೆಪ್ಷನ್ ಗೆ 'ರಾಯಲ್' ಸೆಟ್ ಇರಲಿದೆ. [ವಿಡಿಯೋ: 'ಯಶ್-ರಾಧಿಕಾ ಪಂಡಿತ್' ನಿಶ್ಚಿತಾರ್ಥದ ಝಲಕ್]
ಕಾಸ್ಟ್ಯೂಮ್ ಡಿಸೈನರ್ ಯಾರು ಗೊತ್ತಾ?
ಯಶ್ ರವರ ಉಡುಪುಗಳನ್ನ ಬಾಲಿವುಡ್ ನ ಖ್ಯಾತ ಡಿಸೈನರ್ ಮನೀಷ್ ಮಲ್ಹೋತ್ರ ಡಿಸೈನ್ ಮಾಡುತ್ತಿದ್ದಾರೆ. ರಾಧಿಕಾ ಉಡುಪುಗಳಿಗೆ ಸಭ್ಯಸಾಚಿ ವಿನ್ಯಾಸ ಹೊಂದಿದೆ.
ಗೌಡ-ಕೊಂಕಣಿ ಸಂಪ್ರದಾಯ
ಯಶ್ ರವರು ಒಕ್ಕಲಿಗ ಗೌಡ. ರಾಧಿಕಾ ಪಂಡಿತ್ ಕೊಂಕಣಿ. ಹೀಗಾಗಿ ಎರಡೂ ಸಂಸ್ಕೃತಿ, ಸಂಪ್ರದಾಯದಂತೆ ಮದುವೆ ನಡೆಯಲಿದೆ.
ಮೂರು ದಿನ ಮದುವೆ.!
ಡಿಸೆಂಬರ್ 9 ರಂದು ಧಾರೆ, ಮುಹೂರ್ತ. 10 ರಂದು ಚಿತ್ರರಂಗದ ಗಣ್ಯರಿಗೆ, ಆತ್ಮೀಯರಿಗೆ ರಿಸೆಪ್ಷನ್. 11 ರಂದು ಅಭಿಮಾನಿಗಳಿಗೆ ಮತ್ತು ಚಿತ್ರರಂಗದ ಎಲ್ಲ ಕಾರ್ಮಿಕರ ಒಕ್ಕೂಟಕ್ಕೆ ಔತಣ ಕೂಟ ಏರ್ಪಡಿಸಲಾಗಿದೆ.