Don't Miss!
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯೋಗಿ ಅಣ್ಣ ಮಹೇಶ್ ಭಾಗ್ಯರಾಜ್ ಆಗಿ ಎಂಟ್ರಿ
ಟಿ.ಸಿದ್ಧರಾಜು ಭಾಗ್ಯರಾಜ್ ಸಿನಿಮಾದ ನಿರ್ಮಾಣದ ಜವಾಬ್ದಾರಿ ಜೊತೆಗೆ ಮತ್ತೊಬ್ಬ ಮಗನನ್ನು ಬೆಳ್ಳಿ ತೆರೆಗೆ ತರುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮಹೇಶ್ ನಾಯಕನಾಗಿರುವ ಭಾಗ್ಯರಾಜ್, ಜೂನ್ ತಿಂಗಳಿನಲ್ಲಿ ಸೆಟ್ಟೇರಲಿದೆ. ಯೋಗೇಶ್ ಈಗಾಗಲೇ ಚಿತ್ರರಸಿಕರ ಮನ ಗೆದ್ದಿದ್ದಾರೆ. ಸದ್ಯ ಅವರ ಅಣ್ಣ ಮಹೇಶ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಭಾಗ್ಯರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ದೀಪಕ್ ಮಧುವನಹಳ್ಳಿ. ಉಪೇಂದ್ರ ಸೇರಿದಂತೆ ಅನೇಕ ನಿರ್ದೇಶಕರ ಜೊತೆ ಸಹಾಯಕರಾಗಿ ಕೆಲಸ ಮಾಡಿರುವ ದೀಪಕ್ ಭಾಗ್ಯಾರಾಜ್ ಮೂಲಕ ನಿರ್ದೇಶಕರ ಪಟ್ಟ ಅಲಂಕರಿಸುತ್ತಿದ್ದಾರೆ. ಕಥೆ ಮತ್ತು ಚಿತ್ರಕಥೆ ಬರೆಯುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.
ನಕಲು ಮಾಡಬೇಡಿ ಎಂಬುದು ಭಾಗ್ಯರಾಜ್ ಚಿತ್ರದ ಟ್ಯಾಗ್ ಲೈನ್. ಚಿತ್ರದ ಕಥೆ ಏನೆಂಬುದು ಸದ್ಯಕ್ಕೆ ಗೌಪ್ಯ. ಅನೂಪ್ ಸೀಳಿನ್ ಸಂಗೀತ, ಮಹೇಂದ್ರ ಸಿಂಹ ಛಾಯಾಗ್ರಹಣ ಚಿತ್ರಕ್ಕಿದೆ. ಉಳಿದ ತಂತ್ರಜ್ಞಾರು ಯಾರು ಎಂಬುದು ತಿಳಿದು ಬಂದಿಲ್ಲ.
ಭಾಗ್ಯರಾಜ್ ಚಿತ್ರಕ್ಕೆ ಜಾಹ್ನವಿ ಕಾಮತ್ ನಾಯಕಿ. ಈಗಾಗಲೇ ಜಾಹ್ನವಿ ನಟಿಸಿರುವ ಪರಾರಿ ಚಿತ್ರ ಪರದೆಗೆ ಬರಲು ತಯಾರಾಗಿದೆ. ಅಷ್ಟರಲ್ಲೇ ಮತ್ತೊಂದು ಚಿತ್ರಕ್ಕೆ ಜಾಹ್ನವಿ ಆಯ್ಕೆಯಾಗಿದ್ದಾಳೆ. ಭಾಗ್ಯರಾಜ್ ಚಿತ್ರವನ್ನು ಯಕ್ಷ ನಂತರ ಟಿ.ಸಿದ್ಧರಾಜು ತಮ್ಮ ಹೋಂ ಬ್ಯಾನರ್ ಮೂಲಕ ನಿರ್ಮಿಸುತ್ತಿದ್ದಾರೆ ಎಂಬುದು ವಿಶೇಷ.
ಯಕ್ಷ ಸೇರಿದಂತೆ ಅನೇಕ ಯೋಗಿಯ ಅನೇಕ ಚಿತ್ರಗಳಲ್ಲಿ ಮಹೇಶ್ ಮುಖದರ್ಶನ ಮಾಡಿಸಿದ್ದಾರೆ. ಆದರೆ ಪರಿಪೂರ್ಣ ನಾಯಕನಾಗಿ ತೆರೆ ಮೇಲೆ ಬರುತ್ತಿರುವುದು ಇದೇ ಮೊದಲು. ಚಿತ್ರದ ಫೋಟೋ ಶೂಟ್ ಭರ್ಜರಿಯಾಗಿಯೇ ಮುಕ್ತಾಯಗೊಂಡಿದೆ.
ಮೇ ನಲ್ಲಿ ಮಹೇಶ್ ವಿವಾಹವಾಗಲಿದ್ದಾರೆ. ಮದುವೆಯ ಶುಭಾಶಯಗೊಳೊಂದಿಗೆ ಹೊಸ ಚಿತ್ರಕ್ಕೂ ಆಲ್ ದಿ ಬೆಸ್ಟ್ ಹೇಳಿ. ಹೊಸಬರ ಪ್ರಯತ್ನಕ್ಕೆ ನೀವು ಶುಭ ಹಾರೈಸಿ.