Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತುಂಡ್ ಹೈಕ್ಲ ಭಾರಿ ನಿರೀಕ್ಷೆಯಲ್ಲಿ ಭಟ್ಟರ ಡ್ರಾಮಾ
'ಪರಮಾತ್ಮ' ಚಿತ್ರದ ಬಳಿಕ ನಿರ್ದೇಶಕ, ಗೀತಸಾಹಿತಿ ಕಮ್ ನಿರ್ಮಾಪಕ ಯೋಗರಾಜ್ ಭಟ್ ಅವರಿಗೆ ಆತ್ಮ ಮತ್ತು ಪರಮಾತ್ಮನ ನಡುವಿನ ಅಂತರ ಗೊತ್ತಾದಂತಿದೆ. ಈ ಬಾರಿ ಅವರು 'ಡ್ರಾಮಾ' (ನ.23 ಬಿಡುಗಡೆ) ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಸಾಗರ್, ವೀರೇಶ್, ಉಮಾ, ಮಾರುತಿ, ರಾಜಮುರಳಿ ಇತ್ಯಾದಿ ರೆಗ್ಯುಲರ್ ಸಿಂಗರ್ ಸ್ಕ್ರೀನ್ ಚಿತ್ರಮಂದಿರಗಳು ಸೇರಿದಂತೆ ಐನಾಕ್ಸ್, ಗೋಪಾಲನ್ ಸಿನಿಮಾಸ್, ಸಿನೆಪೊಲೀಸ್, ಫನ್, ಫ್ರೇಮ್ ಸಿನಿಮಾಸ್, ಸಿನೆಮ್ಯಾಕ್ಸ್ ಮಲ್ಟಿಫ್ಲೆಕ್ಸ್ ಗಳಲ್ಲೂಚಿತ್ರ ತೆರೆಕಾಣುತ್ತಿದೆ.
ಅದಕ್ಕೇ ಇರಬೇಕು ಭಟ್ಟರ ಲೇಖನಿ ಈ ಬಾರಿ "ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೆ ನಮ್ಗೆ ನಿಮ್ಗೆ ಯಾಕೆ ಟೆನ್ಸನ್ನು...." ಎಂದು ಆಧ್ಯಾತ್ಮಿಕ ಚಿಂತನೆಗೆ ಹೊರಳಿದೆ. ವಿ ಹರಿಕೃಷ್ಣ ಅವರ ಸಂಗೀತದ ಝಲಕ್ ಈಗಾಗಲೆ ತುಂಡ್ ಹೈಕ್ಲ ನಿದ್ದೆಕೆಡಿಸಿದೆ.
ರೆಬೆಲ್ ಸ್ಟಾರ್ ಅಂಬರೀಶ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಕೆಮಿಸ್ಟ್ರಿ ಎಷ್ಟರ ಮಟ್ಟಿಗೆ ವರ್ಕ್ ಔಟ್ ಆಗಿದೆ ಎಂಬುದು ನ.23ರ ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಗೊತ್ತಾಗಲಿದೆ. ನಿಮ್ಮ ನೆಚ್ಚಿನ ಅಂತರ್ಜಾಲ ತಾಣ 'ಒನ್ಇಂಡಿಯಾ ಕನ್ನಡ'ದಲ್ಲಿ ಚಿತ್ರ ವಿಮರ್ಶೆಗೆ ನಿರೀಕ್ಷಿಸಿ. (ಒನ್ಇಂಡಿಯಾ ಕನ್ನಡ)