Don't Miss!
- Lifestyle ಹೋಳಿ ದಿನ ಸ್ಕೂಟಿಯಲ್ಲಿ ಟೈಟಾನಿಕ್ ಪೋಸ್ ನೀಡಿ ದೊಪ್ಪೆಂದು ಬಿದ್ದ ಹುಡುಗಿಗೆ ಬಿತ್ತು ದುಬಾರಿ ಫೈನ್
- News ಮಳೆ ಬರದೇ ಇದ್ದರೆ ಮುಗೀತು ಕಥೆ!
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ತಿಥಿ' ಕನ್ನಡ ಚಿತ್ರರಂಗಕ್ಕೆ ಸಿಕ್ಕ ರಾಗಿಮುದ್ದೆ, ಹೊಟ್ಟೆಗೆ ಮೋಸವಿಲ್ಲ.!
ಇಲ್ಲಿ ಅಬ್ಬರದ ಡೈಲಾಗ್ ಗಳಿಲ್ಲ, ನಾಯಕನ ಮೆರೆದಾಟವಿಲ್ಲ, ಐಟಂ ಸಾಂಗ್ ಇಲ್ಲ, ಗ್ಲಾಮರ್ ಮೊದಲೇ ಇಲ್ಲ. ಹೊಡೆದಾಟದ ದೃಶ್ಯಗಳನ್ನು ಕೇಳಲೇ ಬೇಡಿ...ಕಿವಿಯನ್ನು ಅಟ್ಟುವ ಸಂಗೀತವಿಲ್ಲ...ಯಾವ ಹೆಸರಾಂತ ಸ್ಟಾರ್ ನಟರಿಲ್ಲ..ಆದರೂ ಸಿನಿಮಾ ಇಷ್ಟವಾಗುತ್ತದೆ. ಮನಕ್ಕೆ ಹತ್ತಿರವಾಗುತ್ತದೆ.
ತಿಥಿಯ ನಿರೂಪಣೆಯೇ ಅಂಥದ್ದು. ಮೂರು ಪೀಳಿಗೆಗಳ ಕಥಾ ಹಂದರವನ್ನು ನಿರ್ದೇಶಕ ರಾಮ್ ರೆಡ್ಡಿ ಕಾಲಕ್ಕೆ ಹೊಂದುವಂತೆ ಕಟ್ಟಿಕೊಡುತ್ತಾ ಸಾಗುತ್ತಾರೆ. ಆಸ್ತಿ, ಮನೆ ಏನೂ ಬೇಡ ಎನ್ನುವ ಗಡ್ಡಪ್ಪ, ಹಣ ಬೇಕು ಅದಕ್ಕಾಗಿ ಬದುಕಿರುವ ಅಪ್ಪನನ್ನು ಸಾಯಿಸಲು ಹಿಂಜರಿಯದ ಮಗ. ತಮ್ಮಣ್ಣ, ಅಮಲು, ಜೂಜು, ಅಪ್ಪುಗೆ, ವಾಂಛೆ, ಎಲ್ಲ ಅರಿಷಡ್ವರ್ಗಗಳು ಬೇಕೆನ್ನುವ ಮೊಮ್ಮಗ ಅಭಿ. ['ಫಿಲ್ಮಿಬೀಟ್ ಕನ್ನಡ ವಿಶೇಷ'; 'ಅತ್ಯುತ್ತಮ ಪೋಷಕ ನಟಿ' ಪೂಜಾ ಸಂದರ್ಶನ]
ಸೆಂಚುರಿ ಗೌಡರ ಕಾಮೆಂಟರಿ ಚಿತ್ರಕ್ಕೆ ನೀಡುವ ಆರಂಭವೇ ಪ್ರೇಕ್ಷಕರ ಮೇಲೆ ಪ್ರಭುತ್ವ ಸಾಧಿಸಿಬಿಡುತ್ತದೆ. ಗೌಡರ ಸಾವು ಮತ್ತು ಅವರ ತಿಥಿಯ ನಡುವಿನ ಕಥೆಯೇ ತಿಥಿ.
ಮಂಡ್ಯದ ಹಳ್ಳಿ ಸೊಗಡು, ಬೈಕ್ ಮೇಲೆ ನಾಲ್ಕು ಜನ ಹೋಗುವುದು, ಕೆಟ್ಟು ಹೋಗುವ ವಾಟರ್ ಪಂಪ್, ಜೂಜಾಟ, ಸಾರಾಯಿ ಗಮ್ಮತ್ತು, ಪುಡಿಗಾಸಿಗಾಗಿ ಮರಳು ಗಣಿಗಾರಿಕೆ, ನದಿಯ ಒಡಲು ಬರಿದು, ಮರ ಕಳ್ಳಸಾಗಾಟ, ಕಳ್ಳತನ, ಬಡತನ, ಮೀಟರ್ ಬಡ್ಡಿ ದಂಧೆ, ಮಳೆ ಕೊರತೆ, ಧಾರ್ಮಿಕ ಕಟ್ಟುಪಾಡಿಗೆ ಸಾಲ, ಸರ್ಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರ, ಹಣ ನೀಡಿದರೆ ಯಾವುದೆ ಪ್ರಮಾಣ ಪತ್ರ ಸಾಧ್ಯ ಎಂಬ ವಾಸ್ತವ, ಉಳ್ಳವರಿಗೆ ಮಾರಾಟವಾಗುತ್ತಿರುವ ರೈತರ ಭೂಮಿ, ಗ್ರಾಮೀಣ ಭಾಗದಲ್ಲಿ ಹೆಚ್ಚಿಕೊಂಡ ಮದ್ಯದ ಅಂಗಡಿಗಳು [ವಿಶ್ವದಾದ್ಯಂತ ಹವಾ ಎಬ್ಬಿಸಿರುವ 'ತಿಥಿ'ಯ ಚಿತ್ರವಿಮರ್ಶೆ]
ಇಷ್ಟೊಂದು ವಿಷಯಗಳನ್ನು ಎಲ್ಲಿಯೂ ಅಡಚಣೆ ಬಾರದಂತೆ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಕತೆ ಹಣೆದ ಈರೇಗೌಡರಿಗೊಂದು ಸಲಾಂ...!
ತನ್ನ ಜೀವನ ಮತ್ತು ಮದುವೆ ಕತೆಯನ್ನು ಗಡ್ಡಪ್ಪ ವಾಚನ ಮಾಡುವಾಗ ಚಿತ್ರಮಂದಿರದಲ್ಲಿ ನಿಶಬ್ಧ ಆವರಿಸುತ್ತದೆ. ಅಪ್ಪ ಮಗನ ಮಾತುಗಳು ವ್ಯಂಗ್ಯದ ಮುಖಾಂತರ ನಗೆ ಹರಿಸಿದರು ನಮ್ಮ ಜೀವನಕ್ಕೂ ಹತ್ತಿರ ಅಲ್ಲವೇ? ಎಂದನಿಸುತ್ತದೆ.
ಆರ್ಭಟಗಳಿಲ್ಲದೇ ಸಾಗುವ ಸಿನಿಮಾದ ಮಧ್ಯಂತರ ಬಂದಿದ್ದೆ ಗೊತ್ತಾಗುವುದಿಲ್ಲ. ಪ್ರೇಕ್ಷಕ ಪ್ರಭುವಿಗೆ ಇದು ನಮ್ಮ ಬದುಕಿನಲ್ಲಿ ಕಂಡ ಪಾತ್ರಗಳೆ, ನಾವು ಇದರಲ್ಲಿ ಯಾವ ಪಾತ್ರ ಎಂಬ ಅರಿಕೆ ಮತ್ತು ಪ್ರಶ್ನೆ ಏಕಕಾಲಕ್ಕೆ ಮೂಡುತ್ತದೆ.
ರೀಮೇಕ್, ಹೀರೋಯಿಸಂ, ಸ್ವಂತ ಕತೆಗಳಿಲ್ಲದೆ ಒದ್ದಾಡುತ್ತಿದ್ದ ಕನ್ನಡ ಚಿತ್ರರಂಗದಲ್ಲಿನ ಪ್ರಯತ್ನ ಸದಭಿರುಚಿಯ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ.
ತಿಥಿ ಒಂಥರಾ ರಾಗಿ ಮುದ್ದೆ ಇದ್ದಂಗೆ. ಮಸಾಲೆಗಳಿಲ್ಲ, ಅಲಂಕಾರವಿಲ್ಲ. ಆದರೆ ಆರೋಗ್ಯಕ್ಕೆ ಉತ್ತಮ. ಮಂದಿರಕ್ಕೆ ಕಾಲಿಟ್ಟರೆ ಹೊಟ್ಟೆ ತುಂಬಿಸಿಕೊಳ್ಳಲು ಯಾವ ಮೋಸವಿಲ್ಲ. ಕಡಿಮೆ ಹಣದಲ್ಲಿ ಆರೋಗ್ಯಯುಕ್ತ ಊಟ.