Don't Miss!
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬ್ಲ್ಯಾಕ್ ಮನಿ ಹಗರಣದಲ್ಲಿ ನಟ ಸೂರ್ಯ ಹೆಸರು
ಕಪ್ಪುಹಣವನ್ನು ವೈಟ್ ಆಗಿ ಬದಲಾಯಿಸುತ್ತಿರುವ (Money laundering) ಒಂದು ಗ್ಯಾಂಗ್ ನ ಗುಟ್ಟುರಟ್ಟು ಮಾಡಲು ತೆಲುಗು ನ್ಯೂಸ್ ಚಾನಲ್ ಎಬಿಎನ್ ಕುಟುಕು ಕಾರ್ಯಾಚರಣೆ ನಡೆಸಿತು. ಈ ಸ್ಟಿಂಗ್ ಆಪರೇಷನ್ ನಲ್ಲಿ ನಟ ಸೂರ್ಯ ಹೆಸರು ಕೇಳಿಬಂದಿದ್ದು ಅಚ್ಚರಿ ಮೂಡಿಸಿದೆ.
ಬ್ಲ್ಯಾಕ್ ಮನಿಯನು ವೈಟ್ ಮಾಡುತ್ತಿರುವ ಗ್ಯಾಂಗ್ ನ ಸದಸ್ಯನೊಬ್ಬ ಟಿವಿ ಚಾನಲ್ ಜೊತೆ ಮಾತನಾಡುತ್ತಾ, "ನಟ ಸೂರ್ಯ ತಮಗೆ ರೆಗ್ಯುಲರ್ ಕಸ್ಟಮರ್. ಅವರು ಭಾರಿ ಮೊತ್ತದಲ್ಲಿ ಆಗಾಗ ರು.50 ರಿಂದ ರು.100 ಕೋಟಿ ಕಪ್ಪುಹಣವನ್ನು ಬಿಳಿಹಣವನ್ನಾಗಿ ಬದಲಾಯಿಸಿಕೊಂಡಿದ್ದಾರೆ" ಎಂದಿದ್ದಾನೆ.
"ತಮ್ಮ ಗ್ರಾಹಕರ ಪಟ್ಟಿಯಲ್ಲಿ ಟಿಆರ್ಎಸ್ ಮುಖಂಡ ಕೆಟಿಆರ್ ಸಹ ಇದ್ದಾರೆ" ಎಂದು ಹೇಳಿರುವುದು ಗಮನಾರ್ಹ ಸಂಗತಿ. ಆದರೆ ಈ ಗ್ಯಾಂಗ್ ಸದಸ್ಯರು ಸಿನಿಮಾ, ರಾಜಕೀಯ ಮುಖಂಡರ ಹೆಸರುಗಳನ್ನು ಬಳಸಿಕೊಂಡು ಬ್ಲ್ಯಾಕ್ ಮನಿ ದಂಧೆ ನಡೆಸುತ್ತಿದ್ದಾರಾ? ಅಥವಾ ನಿಜವಾಗಿಯೂ ಅವರ ಹಸ್ತ ಇದರಲ್ಲಿ ಇದೆಯೇ ಎಂಬ ಗೊಂದಲಗಳು ಇವೆ.
ನಟ ಸೂರ್ಯ ಅವರ ಹೆಸರು ಈ ಹಗರಣದಲ್ಲಿ ಕೇಳಿಬಂದಿರುವ ಕಾರಣ ಅವರ ಅಭಿಮಾನಿಗಳು ಶಾಕ್ ಗೆ ಗುರಿಯಾಗಿದ್ದಾರೆ. ಚಾನಲ್ ನಿರ್ವಹಿಸಿದ ಸ್ಟಿಂಗ್ ಆಪರೇಷನ್ ನ್ ಬಗ್ಗೆ ಸರ್ಕಾರಿ ತನಿಖಾ ಸಂಸ್ಥೆಗಳೂ ದೃಷ್ಟಿ ಹರಿಸಿವೆ. ಕಾನೂನು ಪ್ರಕಾರ ವಿಚಾರಣೆ ನಡೆದರೆ ಈ ಹಗರಣದ ಸತ್ಯಾಸತ್ಯತೆಗಳು ಬಯಲಾಗಬಹುದು. ಕಪ್ಪುಹಣ ಹಗರಣದಲ್ಲಿ ತನ್ನ ಹೆಸರು ಕೇಳಿಬಂದಿರುವ ಬಗ್ಗೆ ನಟ ಸೂರ್ಯ ಇನ್ನೂ ಪ್ರತಿಕ್ರಿಯಿಸಿಲ್ಲ.