Don't Miss!
- Automobiles ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- News Bengaluru Rain: ಸುದೀರ್ಘ ಕಾಯುವಿಕೆ ಅಂತ್ಯ: ಬೆಂಗಳೂರಿಗೆ ಎಂಟ್ರಿ ಕೊಟ್ಟ ಮಳೆ; ವಿಡಿಯೋ ನೋಡಿ
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಈಗ' ಚಿತ್ರವಿಮರ್ಶೆ: ಕಿಚ್ಚ ಸುದೀಪ್ ಒನ್ ಮ್ಯಾನ್ ಶೋ
ಸಾಮಾನ್ಯವಾಗಿ ಕನ್ನಡ ಚಿತ್ರಗಳಲ್ಲಿ ಹಿಂದಿ, ತಮಿಳು, ತೆಲುಗು ಇತರ ಭಾಷೆಗಳನ್ನು ಬಳಸುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ತೆಲುಗು ಚಿತ್ರದಲ್ಲಿ ಕನ್ನಡ ಪದ ಬಳಕೆ ಮಾಡಿಕೊಂಡಿರುವ ಉದಾಹರಣೆ ಎಲ್ಲೋ ಅಪರೂಪ. ಶುಕ್ರವಾರ ( ಜು 6) ಬಿಡುಗಡೆಗೊಂಡ 'ಈಗ' ಚಿತ್ರದಲ್ಲಿ ಸುದೀಪ್ ಕನ್ನಡದಲ್ಲಿ ಕೆಲ ಡೈಲಾಗ್ ಗಳನ್ನು ಹೇಳಿ ಕನ್ನಡತನ ಮೆರೆದಿದ್ದಾರೆ.
ಈಗ ಚಿತ್ರದ ಕಥೆ ಹೇಳಿದ್ದರೂ ಎರಡು ತಾಸು ಸೀಟಿನಲ್ಲಿ ಕೂರುವಂತೆ ಮಾಡಿದ್ದಾರೆ ಚಿತ್ರದ ನಿರ್ದೇಶಕ ಎಸ್ ಎಸ್ ರಾಜಮೌಳಿ. ಇಬ್ಬರು ಪ್ರೇಮಿಗಳ ನಡುವೆ (ನಾಣಿ, ಸಮಂತಾ) ಖಳನಾಯಕ (ಸುದೀಪ್) ಎಂಟ್ರಿ ಕೊಡುತ್ತಾರೆ. ಮೊದಲಿಗೆ ಮೈಂಡ್ ಗೇಮ್ ನಿಂದ ಆಟವಾಡುವ ಸುದೀಪ್, ನಂತರ ಹುಡುಗನನ್ನು ಕೊಲ್ಲುತ್ತಾನೆ. ಹುಡುಗ ನೊಣವಾಗಿ ಹುಟ್ಟಿಬಂದು ವಿಲನ್ ಮೇಲೆ ಸೇಡು ತೀರಿಸಿಕೊಳ್ಳುತ್ತಾನೆ. ಇದು ಚಿತ್ರದ ಸ್ಟೋರಿ.
ಚಿತ್ರ ಆರಂಭವಾದ 20 ನಿಮಿಷದಲ್ಲೇ ಪ್ರೇಮಿಗಳ ಪ್ರೇಮಕಥೆ ಅಂತ್ಯಗೊಳ್ಳುತ್ತದೆ. ಅದರ ನಡುವೆಯೂ ಸುದೀಪ್ ಬರುತ್ತಾರೆ. ಸುದೀಪ್ ನಾಯಕನನ್ನು ಕೊಂದ ನಂತರ ಚಿತ್ರ ಮತ್ತಷ್ಟು ಇಂಟರೆಸ್ಟಿಂಗ್ ಆಗಿ ಸಾಗುತ್ತದೆ. ನಾಯಕ ಸತ್ತ ನಂತರ ಆತನ ಆತ್ಮ ನೊಣದ ರೂಪದಲ್ಲಿ ಬಂದು ಸುದೀಪ್ ರನ್ನು ಇನ್ನಿಲ್ಲದಂತೆ ಕಾಡತೊಡಗುತ್ತದೆ. ಕೊನಗೆ ಸುದೀಪ್ ರನ್ನು ಕೊಂದು ಸೇಡು ತೀರಿಸಿಕೊಳ್ಳುತ್ತದೆ.
ನೊಣವನ್ನು ಇಟ್ಟುಕೊಂಡು ಇಂಥ ಅಪರೂಪದ ಚಿತ್ರವನ್ನು ನಿರ್ಮಿಸಿದ ನಿರ್ದೇಶಕ ರಾಜಮೌಳಿ ಅವರಿಗೆ ಹ್ಯಾಟ್ಸಾಫ್ ಹೇಳಲೇಬೇಕು. ಚಿತ್ರದ ಕಥೆ ಮೊದಲೇ ಗೊತ್ತಿದ್ದರೂ ಸೀಟಿನ ಎಡ್ಜ್ ನಲ್ಲಿ ಕೂರುವಂತೆ ಮಾಡಿದ್ದಾರೆ ನಿರ್ದೇಶಕರು.
ಚಿತ್ರದಲ್ಲಿರುವ ಎರಡು ಹಾಡುಗಳು ಮನ ಮುಟ್ಟುವಂತಿದೆ. ಹಿನ್ನಲೆ ಸಂಗೀತದಲ್ಲಿ ಕೀರವಾಣಿ ಕೆಲಸ ಜೋರಾಗಿದೆ. ಸುದೀಪ್ ಮತ್ತು ನೊಣ ಚಿತ್ರದ ಹೀರೋಗಳೆಂದರೆ ತಪ್ಪಾಗುವುದಿಲ್ಲ. ಅಷ್ಟರ ಮಟ್ಟಿಗೆ ಸುದೀಪ್ ಮತ್ತು ನೊಣ ಚಿತ್ರವನ್ನು ಆವರಿಸಿಕೊಂಡಿದ್ದಾರೆ.
ನಾಯಕ ನಾಣಿ ಪಾತ್ರ ಚಿಕ್ಕದಾದರೂ ಚೊಕ್ಕದಾಗಿದೆ. ನಾಯಕಿ ಸುಮಂತಾ ನಟನೆ ತಂಪಾದ ಗಾಳಿಯಂತೆ ಮುದ ನೀಡುತ್ತದೆ. ಸುಮಾರು ಮೂವತ್ತು ಕೋಟಿ ರೂಪಾಯಿ ವೆಚ್ಚದ ಈ ಚಿತ್ರದ ಗ್ರಾಫಿಕ್ಸ್ ಕೆಲಸವೂ ಮಿಳಿತ ಗೊಂಡಿರುವುದರಿಂದ ಚಿತ್ರ ಅದ್ದೂರಿಯಾಗಿದೆ.
ಸುದೀಪ್ ಒನ್ ಮ್ಯಾನ್ ಶೋ ಎಂದು ಹೇಳಬಹುದಾದ ಚಿತ್ರದಲ್ಲಿನ ಸುದೀಪ್ ನಟನೆ ಸೂಪರ್. ಚಿತ್ರದಲ್ಲಿನ ಅವರ ನೋಟ, ಡೈಲಾಗ್ ಡೆಲಿವರಿ, ಬಾಡಿ ಲಾಂಗ್ವೇಜ್ ಮೂಲಕ ಅವರ ಅಮೋಘ ಅಭಿನಯವನ್ನು ನೋಡಿದರೆ, ಆ ಜಾಗದಲ್ಲಿ ಸುದೀಪ್ ಹೊರತಾಗಿ ಬೇರೊಬ್ಬರನ್ನು ಕಲ್ಪಿಸಿ ಕೊಳ್ಳಲಾಗದಷ್ಟು ಅವರು ಪಾತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸುದೀಪ್ ಈ ಪಾತ್ರದಲ್ಲಿ ನಟಿಸಲು ಒಪ್ಪದಿದ್ದರೆ ಚಿತ್ರವನ್ನೇ ಕೈಬಿಡಲು ನಿರ್ಧರಿಸಿದ್ದ ರಾಜಮೌಳಿ ಅವರ ಬೆಟ್ಟದಷ್ಟು ನಿರೀಕ್ಷೆಗೆ ಮೀರಿ ಅಭಿನಯಿಸಿದ ಸುದೀಪ್ ನಿರ್ದೇಶಕರಿಗೆ ಒಳ್ಳೆ ಸಾಥ್ ನೀಡಿದ್ದಾರೆ. ಚಿತ್ರದಲ್ಲಿ ಬಹಳಷ್ಟು ದೃಶ್ಯಗಳಲ್ಲಿ ಸುದೀಪ್ ಕನ್ನಡದಲ್ಲೇ ಗೊಣಗುವ ದೃಶ್ಯಗಳಿವೆ.