Don't Miss!
- News ಹಾಸನ ಪೆನ್ಡ್ರೈವ್ ಪ್ರಕರಣ: ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಮಹಿಳಾ ಆಯೋಗ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೀರಿಯಲ್ ಸ್ಟಾರ್ 'ರಾಧಾ ಕಲ್ಯಾಣ' ಚಂದನ್ ಸಂದರ್ಶನ
ಕಾರಣ, ಚಂದನ್ ಈಗಾಗಲೇ ಕಿರುತೆರೆಯ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು. ಜೊತೆಗೆ ಈಗಾಗಲೇ ಕೆಲವು ಸಿನಿಮಾಗಳಲ್ಲೂ ಮುಖ ತೋರಿಸಿರುವ ಸಿನಿಪ್ರೇಕ್ಷಕರಿಗೂ ಪರಿಚಯವಿರುವ ನಟ. ಅಷ್ಟೇ ಅಲ್ಲ, ಈ ಚಂದನ್, ಹೆಸರಿಗೆ ತಕ್ಕಂತೆ ತುಂಬಾ 'ಚಂದದ ಹುಡುಗ'.
'ಪ್ಯಾಟೆ ಮಂದಿ ಕಾಡಿಗೆ ಹೋದ್ರು' ರಿಯಾಲಿಟಿ ಶೋ ಮೂಲಕವೂ ಎಲ್ಲರಿಗೂ ಚಿರಪರಿಚಿತರಾದವರು ಈ ಚಂದನ್. ಇದೀಗ ಸತತ 300 ಸಂಚಿಕೆಗಳನ್ನು ಪೂರೈಸಿ ಮುನ್ನುಗ್ಗುತ್ತಿರುವ' ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ 'ರಾಧಾ ಕಲ್ಯಾಣ'ದ ನಾಯಕ ಕೃಷ್ಣ ಪಾತ್ರಧಾರಿ ಈ ಚಂದನ್.
ಅಚ್ಚರಿಯ ವಿಷಯವೆಂದರೆ, ಸಾಮಾನ್ಯವಾಗಿ ಎಲ್ಲ ಧಾರಾವಾಹಿಗಳ ಮೂಲಕ ನಾಯಕಿಯರು ಪ್ರಖ್ಯಾತರಾದರೆ ಮಹಾ ಅಚ್ಚರಿ, ಅಪವಾದವೆಂಬಂತೆ ಈ ಧಾರಾವಾಹಿಯ ನಾಯಕ ನಟ ಚಂದನ್, ಎಲ್ಲರಿಗಿಂತ ಹೆಚ್ಚು ಜನಪ್ರಿಯ.
ಚಂದನ್ ಈಗ ಎಲ್ಲೇ ಹೋಗಲಿ, ಬರಲಿ.. ಜನ ಅವರನ್ನು ಸುತ್ತುವರಿದು ನಿಂತುಬಿಡುತ್ತಾರೆ. ಇತ್ತೀಚಿಗೆ ಉಡುಪಿ ಹಾಗೂ ಶಿವಮೊಗ್ಗದಲ್ಲಿ ನಡೆದ 'ರಾಧಾ ಕಲ್ಯಾಣ' ಧಾರಾವಾಹಿಯ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಚಂದನ್ ಅವರಿಗೆ ಭಾರಿ ಜನಪ್ರಿಯತೆಯ ಅರಿವಾಗಿದೆ. ಹೊರಗಡೆ ಓಡಾಡುವುದು ಕಷ್ಟ... ಕಷ್ಟ ಎನ್ನುವ ಅರಿವು ಈಗ ಸ್ವತಃ ಚಂದನ್ ಅವರಿಗೂ ಬಂದಿದೆಯಂತೆ.
ಇಷ್ಟು ದಿನ 'ಸೀರಿಯಲ್ ಲೋಕ'ದಲ್ಲಿ ಮಿಂಚುತ್ತಿದ್ದ ನಟ ಚಂದನ್, ಇದೀಗ ಸಿನಿಮಾ ನಟನಾಗುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅವರದೇ ಕಥೆ, ಚಿತ್ರಕಥೆ ಹೊಂದಿರುವ 'ರಂಗ ಶಂಕರ' ಹೆಸರಿನ ಚಿತ್ರದಲ್ಲಿ ಸದ್ಯವೇ ನಟಿಸಲಿರುವ ಚಂದನ್, 'ಒನ್ ಇಂಡಿಯಾ ಕನ್ನಡ'ದ ಶ್ರೀರಾಮ್ ಭಟ್ ಜೊತೆ ನಡೆಸಿದ ಮಾತುಕತೆ ಇಲ್ಲಿದೆ, ಓದಿ...
*ನಿಮ್ಮ ಊರು, ವಿದ್ಯಾಭ್ಯಾಸದ ಬಗ್ಗೆ ಹೇಳಿ...
ಹುಟ್ಟಿದ್ದು ಮಂಡ್ಯದಲ್ಲ್ಲಿ. ನಮ್ಮಪ್ಪ ವೇಣುಗೋಪಾಲ್ ಹಾಗೂ ಅಮ್ಮ ಸಾವಿತ್ರಮ್ಮ. ನಾನು ಹುಟ್ಟಿದ್ದು ಮಂಡ್ಯದಲ್ಲಾದರೂ ನಾನು ಚಿಕ್ಕವನಿರುವಾಗಲೇ ಮಂಡ್ಯದಿಂದ ನಮ್ಮ ಕುಟುಂಬ ಮೈಸೂರಿಗೆ ಹೋಗಿ ನೆಲೆಸಿದ್ದರಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆವರೆಗೆ ನಾನು ಓದಿದ್ದು ಮೈಸೂರಿನಲ್ಲಿ. ಮುಂದಿನ ವಿದ್ಯಾಭ್ಯಾಸ ಅಂದರೆ, ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದ್ದು ಮಂಡ್ಯದಲ್ಲಿ. ಮುಂದಿನ ಪುಟ ನೋಡಿ...