Don't Miss!
- Sports Hardik Pandya: ಹಾರ್ದಿಕ್ ಪಾಂಡ್ಯರಲ್ಲಿನ ನಾಯಕತ್ವದ ಗುಣಗಳು ಕಾಣೆಯಾಗಿವೆಯಾ?
- Finance ಕಳೆದ 5 ವರ್ಷಗಳಲ್ಲಿ ಸಂಸದ ಡಿಕೆ ಸುರೇಶ್ ಅವರ ಆಸ್ತಿ 75% ರಷ್ಟು ಹೆಚ್ಚಳ, ವಿವರ
- Technology ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್ ದರದಲ್ಲಿ ಹೊಸ ಪ್ಲ್ಯಾನ್ ಲಾಂಚ್!
- News Gold Price: ಇಂದು ಮತ್ತಷ್ಟು ಹೆಚ್ಚಾದ ಬಂಗಾರದ ಬೆಲೆ: ಬೆಳ್ಳಿಯೂ ಬಲು ದುಬಾರಿ
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಮೀರ್ ಮುಂದಿಟ್ಟುಕೊಂಡು ಕನ್ನಡಿಗರ ಟೀಕಿಸಿದ ಠಾಕ್ರೆ
ಅವರು ಶಿವಸೇನೆ ಮುಖಂಡ 86 ವರ್ಷದ ಬಾಳಾ ಠಾಕ್ರೆ. ತಮ್ಮ ಸಾಮ್ನಾ ಪತ್ರಿಕೆಯಲ್ಲಿ ಅಮೀರ್ ಖಾನ್ ಅವರ ರಿಯಾಲಿಟಿ ಶೋ 'ಸತ್ಯಮೇವ ಜಯತೆ' ಕಾರ್ಯಕ್ರಮವನ್ನು ಕನ್ನಡದಲ್ಲಿ ಡಬ್ ಮಾಡಿ ಕನ್ನಡಿಗರಿಗೆ ದೊರೆಯುವಂತಾಗಬೇಕು ಎಂದು ವಾದಿಸಿದ್ದಾರೆ. ಭಾರತದಲ್ಲಿರುವ ಜನರ ಸಮಸ್ಯೆಗಳ ಭಂಡಾರವನ್ನು ತೆರೆದಿಡುವ ಈ ಕಾರ್ಯಕ್ರಮ ಸ್ಟಾರ್ ಪ್ಲಸ್ ಚಾನಲ್ನಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ 11ರಿಂದ 12ರವರೆಗೆ ಪ್ರಸಾರವಾಗುತ್ತದೆ.
ಬಾಳಾ ಠಾಕ್ರೆ ಅವರು ಮಂಡಿಸಿರುವ ವಾದದಲ್ಲಿ, ಕನ್ನಡಪರ ಧೋರಣೆಗಿಂತ ಬಾಲಿವುಡ್ ನಟ ಅಮೀರ್ ಖಾನ್ ಅವರ ಕಾರ್ಯಕ್ರಮ ಜನರಿಗೆ ದೊರೆಯಬೇಕು ಎಂಬ ಅಂಶಕ್ಕೆ ಒತ್ತು ನೀಡಲಾಗಿದೆ. ಜೊತೆಗೆ ಡಬ್ಬಿಂಗ್ ವಿರೋಧಿಸುತ್ತಿರುವ ಸಿನೆಮಾ ಇಂಡಸ್ಟ್ರಿಯ ಜನರನ್ನು ಠಾಕ್ರೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಮೀರ್ ಖಾನ್ ಅವರ ಚಿತ್ರ ಮತ್ತು ಕಾರ್ಯಕ್ರಮಗಳಲ್ಲಿ ದೇಶಭಕ್ತಿ ಮತ್ತು ದೇಶದ ಬಗ್ಗೆ ಪ್ರೀತಿ ಮೆರೆದಾಡುತ್ತಿರುತ್ತದೆ ಎಂದು ಹಾಡಿ ಹೊಗಳಿರುವ ಠಾಕ್ರೆ, ದೇಶಪ್ರೇಮವನ್ನು ಬದಿಗಿಟ್ಟು ಡಬ್ಬಿಂಗ್ ವಿರೋಧಿಸುತ್ತಿರುವ ಕನ್ನಡ ಚಿತ್ರರಂಗದವರು ಸ್ವಾರ್ಥ ಸಾಧಿಸುತ್ತಿದ್ದಾರೆ ಎಂದು ತೆಗಳಿದ್ದಾರೆ. ಡಬ್ಬಿಂಗ್ ವಿರೋಧದ ಕಾರಣ ಮುಂದಿಟ್ಟುಕೊಂಡು ಠಾಕ್ರೆ ಅವರು ಕರ್ನಾಟಕದ ಧೋರಣೆಯನ್ನು ತೀಕ್ಷ್ಣವಾಗಿ ಟೀಕಿಸಿದ್ದಾರೆ.