Don't Miss!
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- News ಬೆಂಗಳೂರಿನಲ್ಲಿ ಮೋದಿ ಮತಬೇಟೆ; ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಡಾ.ಜಿ ಪರಮೇಶ್ವರ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್' ಮನೆಯಲ್ಲಿ ಒಮ್ಮೆಲೆ 3 ವೈಲ್ಡ್ ಕಾರ್ಡ್ ಎಂಟ್ರಿ.!
'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ 55 ದಿನಗಳು ಕಳೆದ ಬಳಿಕ, 'ವೈಲ್ಡ್ ಕಾರ್ಡ್' ಎಂಟ್ರಿ ಮೂಲಕ ಮೂವರು ಸ್ಪರ್ಧಿಗಳು 'ಬಿಗ್ ಬಾಸ್' ಮನೆ ಗೃಹಪ್ರವೇಶ ಮಾಡಿದ್ದಾರೆ.
'ಬಿಗ್ ಬಾಸ್' ಮನೆಯಲ್ಲಿ 'ತುರ್ತು ಪರಿಸ್ಥಿತಿ' ಜಾರಿಯಲ್ಲಿರುವಾಗಲೇ, ಮೂವರು ಸ್ಪರ್ಧಿಗಳು 'ದೊಡ್ಮನೆ'ಗೆ ಕಾಲಿಟ್ಟಿದ್ದಾರೆ.
ವೈಲ್ಡ್ ಕಾರ್ಡ್ ಎಂಟ್ರಿ ನಂಬರ್ 1 - ಸುಕೃತಾ ವಾಗ್ಲೆ
'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ 'ಲಾರ್ಡ್ ಪ್ರಥಮ್ ಸರ್' ವಿರುದ್ಧ ಮೋಹನ್ ಮತ್ತು ಗ್ಯಾಂಗ್ ದಂಗೆ ಎದ್ದಾಗ, ಸರ್ವಾಧಿಕಾರಿಗೆ ಬೆಂಗಾವಲಾಗಿ ನಿಲ್ಲಲು ಕಮಾಂಡೋ ಆಗಿ ಎಂಟ್ರಿಕೊಟ್ಟವರು ನಟಿ ಸುಕೃತಾ ವಾಗ್ಲೆ. ['ದಂಡನಾಯಕ' ಪ್ರಥಮ್ ವಿರುದ್ಧ ದಂಗೆ ಎದ್ದ ಕೀರ್ತಿ-ಮೋಹನ್ ಗ್ಯಾಂಗ್.!]
ಸುಕೃತಾ ವಾಗ್ಲೆ ಕುರಿತು....
'ಬಹುಪರಾಕ್', 'ಜಟ್ಟ', 'ಕಿರುಗೂರಿನ ಗಯ್ಯಾಳಿಗಳು' ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಸುಕೃತಾ ವಾಗ್ಲೆ.
ನಟಿ ಕಾರುಣ್ಯ ರಾಮ್ ಗೆ ಸೆಕೆಂಡ್ ಚಾನ್ಸ್.!
ಕಳೆದ ಎರಡು ವಾರಗಳ ಹಿಂದೆ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಿಂದ ಔಟ್ ಆಗಿದ್ದ ನಟಿ ಕಾರುಣ್ಯ ರಾಮ್ ಗೆ ಸೆಕೆಂಡ್ ಚಾನ್ಸ್ ಲಭಿಸಿದೆ. 'ವೈಲ್ಡ್ ಕಾರ್ಡ್ ಎಂಟ್ರಿ' ಮೂಲಕ ಮತ್ತೆ 'ಬಿಗ್ ಬಾಸ್' ಮನೆಯೊಳಗೆ ಕಾರುಣ್ಯ ರಾಮ್ ಕಾಲಿಟ್ಟಿದ್ದಾರೆ. ['ಬಿಗ್ ಬಾಸ್' ಮನೆಯ ಆಟದ ರಹಸ್ಯ ತೆರೆದಿಟ್ಟ ಕಾರುಣ್ಯ ರಾಮ್]
ಮೊದಲನೇ ಬಾರಿ ನಾಮಿನೇಟ್ ಆಗಿದ್ದ ಕಾರುಣ್ಯ.!
ಆರು ವಾರಗಳಲ್ಲಿ ಮೊದಲ ಬಾರಿ ನಾಮಿನೇಟ್ ಆಗಿದ್ದ ಕಾರುಣ್ಯ, ಅದೇ ವಾರ ಎಲಿಮಿನೇಟ್ ಆಗ್ಬಿಟ್ಟರು. ಹೀಗಾಗಿ ಸಿಕ್ಕಾಪಟ್ಟೆ ಬೇಸರಗೊಂಡಿದ್ದ ಕಾರುಣ್ಯಗೆ ಎರಡನೇ ಅವಕಾಶ ಲಭಿಸಿದೆ.
ಮೂರನೇ ಸ್ಪರ್ಧಿ ಮಸ್ತಾನ್.!
'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಮಸ್ತಾನ್ ಎಂಬುವರೂ ಕೂಡ ಸ್ಪರ್ಧಿಯಾಗಿ ಕಣಕ್ಕೆ ಇಳಿದಿದ್ದಾರೆ.
ಯಾರೀ ಮಸ್ತಾನ್.?
'ಬಿಗ್ ಬಾಸ್' ಮನೆಯ ಸ್ಪರ್ಧಿಗಳ ಮುಂದೆ ಮಸ್ತಾನ್ ಹೇಳಿಕೊಂಡಿರುವ ಪ್ರಕಾರ, ಆತ ಬೆಂಗಳೂರಿನ ಶಿವಾಜಿನಗರದಲ್ಲಿ ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್.
ಮುಂದೆ ಏನೇನ್ ಕಾದಿದ್ಯೋ.?
'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಎಲ್ಲಾ ಎಪಿಸೋಡ್ ಗಳನ್ನೂ ನೋಡಿಕೊಂಡು ಬಂದಿರುವ ಕಾರುಣ್ಯ ರಾಮ್, ಇನ್ಮೇಲೆ ಹೇಗಿರ್ತಾರೋ.. ನಟಿ ಸುಕೃತಾ ವಾಗ್ಲೇ ಗೇಮ್ ಪ್ಲಾನ್ ಏನು.? ಮಸ್ತಾನ್ ಭಾಯ್ ಏನ್ ಮಾಡ್ತಾರೋ..? ನೋಡೋಣ.