Don't Miss!
- News ಕೋವಿಡ್ ಸಮಯದಲ್ಲಿ ನಾನು ತಪ್ಪು ಮಾಡಿದ್ದೇನೆಂಬುದು ಅಪಪ್ರಚಾರ:ಕೆ ಸುಧಾಕರ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ ಬಾಸ್ ನಿಂದ ಕುಶಾಲ್ ಔಟ್, ನಿಷೇಧ ಭೀತಿ
ಕಲರ್ಸ್
ವಾಹಿನಿಯ
'ಬಿಗ್
ಬಾಸ್
7'
ರಿಯಾಲಿಟಿ
ಶೋನಲ್ಲಿ
ಬ್ರಿಟಿಷ್
ತಾರೆ
ಹಾಗೂ
ಗಾಯಕಿ
ಸೋಫಿಯಾ
ಹಯಾತ್
ಮೇಲೆ
ಹಲ್ಲೆ
ಮಾಡಿದ
ಆರೋಪದ
ಹೊತ್ತು
ಬಂಧನಕ್ಕೊಳಗಾಗಿದ್ದ
ನಟ
ಅರ್ಮಾನ್
ಕೊಹ್ಲಿ
ಮತ್ತೆ
ಬಿಗ್
ಬಾಸ್
ಮನೆಗೆ
ರೀ
ಎಂಟ್ರಿ
ಕೊಡುತ್ತಿದ್ದಂತೆ
ಮತ್ತೊಬ್ಬ
ವಿವಾದಿತ
ಸ್ಪರ್ಧಿ
ಹೊರ
ಬಿದ್ದಿರುವ
ಸುದ್ದಿ
ಸ್ಫೋಟಗೊಂಡಿದೆ
ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಕುಶಾಲ್ ಥಂಡನ್ ಮನೆಯಿಂದ ಹೊರ ಬಿದ್ದಿದ್ದಾನೆ. ಕುಶಾಲ್ ಪರ ವಿರೋಧ ಪ್ರತಿಕ್ರಿಯೆಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಈ ನಡುವೆ ಪ್ರೇಯಸಿ ಗೌಹರ್ ಬಿಟ್ಟು ಮನೆಯಿಂದ ಹೊರ ಬಿದ್ದಿರುವ ನೋವಿನಲ್ಲಿರುವ ಕುಶಾಲ್ ಗೆ ಮತ್ತೊಂದು ಆತಂಕ ಎದುರಾಗಿದೆ.
ಕಲರ್ಸ್ ವಾಹಿನಿಯ ರಿಯಾಲಿಟಿ ಶೋನ ರೀಲ್ ಬದುಕಿನ ಆಟದಿಂದಾಗಿ ರಿಯಲ್ ಲೈಫ್ ಗೆ ತೊಂದರೆಯಾಗುತ್ತಿದೆ. ಅರ್ಮಾನ್ ಹಾಗೂ ಸೋಫಿಯಾ ಪ್ರಕರಣದಿಂದಾಗಿ ಕುಶಾಲ್ ಸಿನಿಮಾ ಕೆರಿಯರ್ ಗೆ ಫುಲ್ ಸ್ಟಾಪ್ ಬೀಳುವ ಸಾಧ್ಯತೆ ಕಂಡು ಬಂದಿದೆ.
ಬ್ರಿಟಿಷ್ ತಾರೆ ಹಾಗೂ ಗಾಯಕಿ ಸೋಫಿಯಾ ಹಯಾತ್ ರನ್ನು ಅರ್ಮಾನ್ ವಿರುದ್ಧ ತಿರುಗಿ ಬೀಳುವಂತೆ ಮಾಡಿರುವ ಕುಶಾಲ್ ಮೇಲೆ ನಿಷೇಧ ಹೇರಲು ಬಾಲಿವುಡ್ ಚಿತ್ರರಂಗದ ದೊಡ್ಡ ತಲೆಗಳು ಚಿಂತನೆ ನಡೆಸಿರುವ ಸುದ್ದಿ ಹೊರ ಬಿದ್ದಿದೆ. ಅರ್ಮಾನ್ ಕೊಹ್ಲಿ ಅವರ ಅಪ್ಪ ರಾಜಕುಮಾರ್ ಕೊಹ್ಲಿ ಒಂದು ಕಾಲದ ಸೂಪರ್ ನಿರ್ದೇಶಕರಾಗಿದ್ದು, ಈಗಲೂ ಚಿತ್ರರಂಗದಲ್ಲಿ ಸಾಕಷ್ಟು ಒಳ್ಳೆ ಹೆಸರು ಉಳಿಸಿಕೊಂಡಿದ್ದಾರೆ. ಹೀಗಾಗಿ ಕುಶಾಲ್ ವಿರುದ್ಧ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಅರ್ಮಾನ್
ಗಿಂತ
ಮಹಿಳೆ
ಹಾಗೂ
ಸಹ
ಸ್ಪರ್ಧಿಗಳ
ಮೇಲೆ
ಹಲ್ಲೆ
ಮಾಡಿ
ಮನೆಯಿಂದ
ಹೊರ
ಬಿದ್ದಿದ್ದು
ಇದೇ
ಕುಶಾಲ್
ಎಂಬುದು
ಎಲ್ಲರಿಗೂ
ಗೊತ್ತಿರುವ
ವಿಷಯ.
ಬಚಾವಾದ ಏಜಾಜ್
ಈ ವಾರ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಗೌಹರ್ ಖಾನ್, ಕುಶಾಲ್ ಥಂಡನ್ ಹಾಗೂ ಏಜಾಜ್ ಖಾನ್ ಮನೆಯಿಂದ ಹೊರಬೀಳುವ ಭೀತಿ ಎದುರಿಸಿದ್ದರು. ಈ ಪೈಕಿ ಏಜಾಜ್ ಗೆ ಹೆಚ್ಚಿನ ಮತಗಳು ಸಿಕ್ಕಿ ಬಚಾವಾಗಿದ್ದಾನೆ. 'ಜಿಂದಾಗಿ ನಾ ಮಿಲೇಗಿ ದುಬಾರಾ'ಟಾಸ್ಕ್ ಗೆದ್ದ ಗೌಹರ್ ಕೂಡಾ ಸೇಫ್ ಆಗಿದ್ದಾಳೆ. ಆದರೆ, ಈ ಬಾರಿ ಏಜಾಜ್ ಮನೆಯಿಂದ ಹೊರ ಹಾಕಲು ಎಲ್ಲಾ ಸಿದ್ಧತೆ ನಡೆಸಲಾಗಿತ್ತು ಎನ್ನಲಾಗಿದೆ.
ಸಲ್ಮಾನ್ ಕೂಡಾ ಗರಂ
ಅರ್ಮಾನ್ ಹಾಗೂ ಸೋಫಿಯಾ ಪ್ರಕರಣದ ಮೂಕ ಪ್ರೇಕ್ಷಕರಾಗಿದ್ದ ಕುಶಾಲ್ ಹಾಗೂ ಗೌಹರ್ ಮೇಲೆ ಸಲ್ಮಾನ್ ಖಾನ್ ಕೂಡಾ ಗರಂ ಆಗಿದ್ದಾನೆ ಎಂದು ತಿಳಿದು ಬಂದಿದೆ.
ಉತ್ತಮ PR ಸಂಸ್ಥೆಗಳ ಸಹಾಯ ಪಡೆದು ಸಲ್ಮಾನ್ ಅವರನ್ನು ನಿಂದಿಸುತ್ತಾ ಹಾಗೂ ಸಲ್ಮಾನ್ ನನಗೆ ಸ್ಸಾರಿ ಕೇಳಿದರೂ ಎನ್ನುವ ಮೂಲಕ ಕುಶಾಲ್ ತನಗೆ ಬೇಕಾದ ಪ್ರಚಾರವನ್ನು ಗಿಟ್ಟಿಸಿಕೊಂಡಿದ್ದ. ಅದನ್ನೆಲ್ಲ ಮನೆಗೆ ರೀ ಎಂಟ್ರಿ ಕೊಟ್ಟ ಮೇಲೆ ಗೌಹರ್ ಬಳಿ ಹೇಳಿಕೊಂಡಿದ್ದ
ವಿಜೆ ಆಂಡಿ, ಸಂಗ್ರಾಮ್ ಗೆ ಸಹಕಾರಿ
ಅರ್ಮಾನ್ ಎಲ್ಲರೊಟ್ಟಿಗೆ ಕಿತ್ತಾಡಿಕೊಂಡು ಹೆಸರು ಕೆಡಿಸಿಕೊಂಡಿದ್ದಾನೆ. ಕುಶಾಲ್ ಹಾಗೂ ಗೌಹರ್ ಪ್ರೇಮ ಪ್ರಕರಣ ಹಾಗೂ ಏಜಾಜ್ ಭಗ್ನ ಪ್ರೇಮಿ ಪಾತ್ರ ನಾಟಕ ಎಲ್ಲವೂ ಪ್ರೇಕ್ಷಕರಿಗೆ ಅಷ್ಟಾಗಿ ಹಿಡಿಸುತ್ತಿಲ್ಲ. ಹೀಗಾಗಿ ವಿಜೆ ಆಂಡಿ ಹಾಗೂ ಸಂಗ್ರಾಮ್ ನಡುವೆ ಫೈನಲ್ ಹಣಾಹಣಿಗೆ ಪೈಪೋಟಿ ನಡೆಯುವ ಎಲ್ಲಾ ಸಾಧ್ಯತೆಯಿದೆ.
ಈ ನಡುವೆ ತನೀಶಾ ಬಗ್ಗೆ ಪ್ರೇಕ್ಷಕರಲ್ಲಿ ಏನೋ ಅನುಕಂಪ, ಪ್ರೀತಿ ಮೊದಲಿನಿಂದಲೂ ಇದ್ದೇ ಇದೆ. ಈ ವಾರದ ಎಪಿಸೋಡುಗಳು ಬಿಗ್ ಬಾಸ್ ವಿಜೇತರನ್ನು ನಿರ್ಧರಿಸಲಿದೆ ಎನ್ನಲಾಗಿದೆ.
ವಿವಾದಿತ ಟಾಸ್ಕ್
ಕುಶಾಲ್ ಮತ್ತೆ ಮನೆಗೆ ಬಂದರೆ ಏನು ಆಗುತ್ತೋ ನನಗೆ ಗೊತ್ತಿಲ್ಲ ಎಂದು ಅರ್ಮಾನ್ ಹೇಳಿದ್ದಾನೆ. ನನ್ನ ಬಳಿ ಕುಶಾಲ್ ಕ್ಷಮೆಯಾಚಿಸಿಲ್ಲ. ಮನೆಗೆ ಬಂದರೆ ನಾನಿರುವುದಿಲ್ಲ ಎಂದು ತನೀಶಾ ನೇರವಾಗಿ ಹೇಳಿದ್ದಳು
ಕುಶಾಲ್ ನಡೆಯೇನು?
ಮೊದಲ ಬಾರಿ ಆಂಡಿ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರ ಬಿದ್ದಿದ್ದ ಕುಶಾಲ್ ನಂತರ ಸಹ ಸ್ಪರ್ಧಿಗಳ ಮನೆಗೆ ತೆರಳಿ ಸ್ಸಾರಿ ಕೇಳಿ ಬಂದಿದ್ದ. ಕುಶಾಲ್ ಬದಲಾಗಿದ್ದಾನೆ ಎಂದು ಎಲ್ಲರೂ ಕೊಂಡಾಡಿದ್ದರು.
ಆದರೆ, ಈಗ ಸೋಫಿಯಾ ಹಾಗೂ ಅರ್ಮಾನ್ ಕೊಹ್ಲಿ ಕುಟುಂಬದ ಸಮರ ಜಾರಿಯಲ್ಲಿರುವಾಗ ಜೊತೆಗೆ ಚಿತ್ರರಂಗದಿಂದ ನಿಷೇಧದ ಭೀತಿ ಎದುರಿಸುತ್ತಿರುವಾಗ ಕುಶಾಲ್ ನಡೆ ಕುತೂಹಲಕಾರಿಯಾಗಿದೆ. ಕೊಹ್ಲಿ ಸೀನಿಯರ್ ರಾಜಕುಮಾರ್ ಅವರು ಸೋಫಿಯಾ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಸೋಫಿಯಾಗೆ ಕುಶಾಲ್ ಸಹಾಯ ಮಾಡುತ್ತಾನಾ?
ಬಿಗ್ ಬಾಸ್ ತಂತ್ರವೇ?
ಗೌಹರ್ ಜತೆ ಪ್ರಣಯ ಸಂಬಂಧ ಬೆಳೆಸಿಕೊಂಡಿದ್ದ ಕುಶಾಲ್ ಗೆ ಕ್ಯಾಂಡಿಯನ್ನು ಎದುರುಗೊಳ್ಳುವುದು ಇಷ್ಟವಿರಲಿಲ್ಲ. ಹೀಗಾಗಿ ಮನೆಯಿಂದ ಹೊರಕ್ಕೆ ಹಾಕಲಾಯಿತು. ಈಗ ಅರ್ಮಾನ್ ಎಂಟ್ರಿ ನಂತರ ಇದೇ ತಂತ್ರ ಅನುಸರಿಸಿ ಕುಶಾಲ್ ನನ್ನು ಹೊರ ಹಾಕಲಾಗಿದೆ
|
ಸಲ್ಲೂ ಚಮಚಾ ಅಲ್ಲ
ಅರ್ಮಾನ್ ನಂತೆ ಸಲ್ಮಾನ್ ಖಾನ್ ಚಮಚಾ ಆಗಲು ಕುಶಾಲ್ ಒಪ್ಪಲಿಲ್ಲ ಅದಕ್ಕೆ ಮನೆಯಿಂದ ಹೊರಕ್ಕೆ