Don't Miss!
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- News ಬೆಂಗಳೂರಿನ ಜನತೆಗೆ ಬಾಂಬು..ಮತಾಂಧರಿಗೆ ಕೊಂಬು: ಚೊಂಬು ಜಾಹೀರಾತಿಗೆ ಆರ್.ಅಶೋಕ್ ಗುಡುಗು
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Automobiles Bangaluru: ನಮ್ಮ ಯಾತ್ರಿ ಕ್ಯಾಬ್ ಸೇವೆ ಆರಂಭ.. ಎಷ್ಟಿದೆ ದರ?
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪೆಟ್ರೋಲ್ ಬಂಕ್, ಟೈರ್ ತಳ್ಳುವ ಕೆಲಸ ಮಾಡಿದ್ದೇನೆ
ಲಯ ಕೋಕಿಲ ಅವರು ತಮ್ಮ ಬಗ್ಗೆ ಹೇಳಿಕೊಳ್ಳುತ್ತಾ, ನಮ್ಮ ಇಡೀ ಕುಟುಂಬವೇ ಸಂಗೀತ ಕ್ಷೇತ್ರದಲ್ಲಿತ್ತು. ನಮ್ಮ ತಂದೆಗೆ ಅದು ಬಿಟ್ಟರೆ ಬೇರೆ ಏನೂ ಗೊತ್ತಿರಲಿಲ್ಲ. ಆ ಸಂದರ್ಭದಲ್ಲಿ ಎಲ್ಲಾ ಜವಾಬ್ದಾರಿಯೂ ನನ್ನ ಮೇಲೆ ಬಿತ್ತು. ಆಗ ನನ್ನ ಪುಟ್ಟ ತಮ್ಮ ಸಾಧು. ತುಂಬಾ ಕಷ್ಟದ ದಿನಗಳು. ಮೂರು ದಿನಗಳ ಅನ್ನವನ್ನು ಬೇಯಿಸಿ ತಿನ್ನುವಂತಹ ಪರಿಸ್ಥಿತಿ.
ಆಗ ಪೆಟ್ರೋಲ್ ಬಂಕ್, ಟೈರ್ ತಳ್ಳುವ ಕೆಲಸಗಳನ್ನು ಮಾಡಿದ್ದೇನೆ. ಆಗ ಒಂದು ಆರ್ಕೆಸ್ಟ್ರಾದಲ್ಲಿ ಚಾನ್ಸ್ ಸಿಕ್ತು. ಸಿ ಅಶ್ವತ್ಥ್ ಹಾಗೂ ಮೈಸೂರು ಅನಂತಸ್ವಾಮಿ ಅವರ ಜೊತೆ ಸಾಕಷ್ಟು ಕೆಲಸ ಮಾಡಿದ್ದೇನೆ. ಶಂಕರ್ ನಾಗ್ ಸಾರ್ ಅವರು ನಮ್ಮಂತಹವರಿಗೆಂದೇ ಸಂಕೇತ್ ಸ್ಟುಡಿಯೋ ಕಟ್ಟಿದರು.
ಬಿಗ್ ಬಾಸ್ ನೀಡಿರುವ "ನಾನೇ ಬೆಸ್ಟ್" ಟಾಸ್ಕ್ ಗಾಗಿ ಎಲ್ಲರೂ ತಮ್ಮ ಯಶೋಗಾಥೆಯನ್ನು ಹೇಳಿಕೊಂಡರು. ಶಕೀಲಾ ಅವರು ಮಾತನಾಡುತ್ತಾ, ನಾನು ಸಿನಿಮಾಗೆ ಅಡಿಯಿಟ್ಟದ್ದು ತುಂಬಾ ಕಷ್ಟದಲ್ಲಿದ್ದ ಕಾರಣಕ್ಕೆ. ನಮ್ಮ ತಂದೆತಾಯಿಗೆ ನಾವು ಏಳು ಜನ ಮಕ್ಕಳು. ಮಕ್ಕಳನ್ನೆಲಾ ಪೋಷಿಸುವ ಜವಾಬ್ದಾರಿ ನನ್ನ ಹೆಗಲ ಮೇಲೆ ಬಿತ್ತು. ನನ್ನ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಅವರಿಗಾಗಿ ದುಡಿಯಬೇಕಾಗಿತ್ತು.
ನನ್ನ ಮೊದಲ ಚಿತ್ರ 'ಪ್ಲೇ ಗರ್ಲ್'. ಸಿಲ್ಕ್ ಸ್ಮಿತಾ ಅವರಿಗೆ ಅಕ್ಕನಾಗಿ ಆ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಅದು ತಮಿಳು ಚಿತ್ರ. ಇಪ್ಪತ್ತು ಇಪ್ಪತ್ತಮೂರರ ಹರೆಯದಲ್ಲೆ ಮಲಯಾಳಂ ಚಿತ್ರರಂಗಕ್ಕೆ ಅಡಿಯಿಟ್ಟೆ. ನಿಜ ಹೇಳಬೇಕು ಎಂದರೆ ನನಗೆ ಒಂದೇ ಒಂದು ಅಕ್ಷರವೂ ಮಲಯಾಳಂ ಬರುತ್ತಿರಲಿಲ್ಲ.
ಎರಡು ಮೂರು ವರ್ಷದಲ್ಲಿ ಸಾಕಷ್ಟು ಹೆಸರು ಮಾಡಿದೆ. ನನ್ನ ಸಿನಿಮಾಗಳಿಂದ ನಿರ್ಮಾಪಕರು, ವಿತರಕರು ತುಂಬಾನೇ ದುಡ್ಡು ಮಾಡಿದರು. ಆ ನೆನಪಿಗಾಗಿ ತಮ್ಮ ಮನೆಗಳಿಗೂ ಶಕೀಲಾ ಪ್ಯಾಲೇಸ್, ಶಕೀಲಾ ಮಂಜಿಲ್ ಎಂದು ಹೆಸರಿಟ್ಟುಕೊಂಡಿದ್ದಾರೆ.
ಚಿತ್ರಮಂದಿರಗಳನ್ನು ಮುಚ್ಚಿ ಕಲ್ಯಾಣ ಮಂಟಪಳಾಗಿ ಬದಲಾಗಿಸುವಂತಹ ಪರಿಸ್ಥಿತಿ ಚಿತ್ರೋದ್ಯಮದಲ್ಲಿದ್ದಂತಹ ಕಾಲ. ಅಂತಹ ಸಂದರ್ಭದಲ್ಲಿ ನನ್ನ ಚಿತ್ರಗಳು ಹೊಸ ಬದಲಾವಣೆಗೆ ಕಾರಣವಾದವು. ಮುಚ್ಚುತ್ತಿದ್ದ ಥಿಯೇಟರ್ ಗಳು ಮತ್ತೆ ಜೀವ ಪಡೆದುಕೊಂಡವು.
ಎರಡು ವರ್ಷಗಳ ಕಾಲ ನನ್ನ ಡೇಟ್ಸ್ ಸಿಗುವುದು ಕಷ್ಟವಾಗಿತ್ತು. ಇದರ ಜೊತೆಗೆ ತಮ್ಮ ಚಿತ್ರಗಳಿಗೆ ಆಗ ಇದ್ದ ಬೆಲೆ, ತಮ್ಮ ಮಾರುಕಟ್ಟೆ ಬಗ್ಗೆ ಶಕೀಲಾ ಹೇಳಿಕೊಂಡರು. ಇದಕ್ಕೆಲ್ಲಾ ಆ ದೇವರೇ ಕಾರಣ ಎಂದೂ ಹೇಳಿದರು.