Don't Miss!
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- News Darshan: ಡಿ.ಕೆ. ಸುರೇಶ್ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೂನಿಯರ್ ವಿಷ್ಣುವರ್ಧನ್ ಬಗ್ಗೆ ನಟಿ ಶ್ರುತಿ ಹೇಳಿದ್ದೇನು?
'ಬಿಗ್ ಬಾಸ್' ಮನೆಯಲ್ಲಿ ಮೊದಮೊದಲು ಸೈಲೆಂಟ್ ಆಗಿ ಇರುತ್ತಿದ್ದ ನಟಿ ಶ್ರುತಿ ಈಗೀಗ ಹೆಚ್ಚು ಮಾತನಾಡುತ್ತಿದ್ದಾರೆ. ತಮ್ಮ ವೃತ್ತಿ ಜೀವನದ ಅನೇಕ ಘಟನೆಗಳನ್ನ ಬಿಚ್ಚಿಡುತ್ತಿದ್ದಾರೆ.
ಪತ್ರಕರ್ತೆ ಭಾವನಾ ಬೆಳಗೆರೆ, ಆರ್.ಜೆ ನೇತ್ರ, ಪೂಜಾ ಗಾಂಧಿ ಜೊತೆ ಮಾತನಾಡುತ್ತಿರುವಾಗ ಕನ್ನಡ ಚಿತ್ರರಂಗದ ಓರ್ವ ಹೀರೋ ಬಗ್ಗೆ ಶ್ರುತಿ ಮಾತನಾಡಲು ಪ್ರಾರಂಭಿಸಿದರು.
''ಅಮಿತಾಬ್ ಬಚ್ಚನ್ ಮಗನ ಹೆಸರಿನ ಎರಡು ಅಕ್ಷರ ಆ ಹೀರೋದ ಹೆಸರು. ಅವರಿಗೆ ಏನೂ ಬರಲ್ಲ. ಆದ್ರೂ ಅದನ್ನ ತೋರಿಸಿಕೊಳ್ಳುತ್ತಿರಲಿಲ್ಲ. ವಿಷ್ಣುವರ್ಧನ್ ನ ಮಾತ್ರ ಜಾಸ್ತಿ ಇಮಿಟೇಟ್ ಮಾಡೋರು''
''ಕಟ್ ಅಂದಾಗ ನಾವು ಫ್ರೀಜ್ ಆಗಿ ನಿಲ್ಲಬೇಕಿತ್ತು. ಇಲ್ಲಾಂದ್ರೆ ಕನ್ಟಿನ್ಯುಟಿ ಸಿಕ್ತಿರ್ಲಿಲ್ಲ. ಬಟ್ ಅವರು ಫ್ರೀಜ್ ಆಗ್ತಿರ್ಲಿಲ್ಲ. ಮೂವ್ಮೆಂಟ್ ಮಾಡೋರು. ಅವರಿಂದ ನಾನು ತುಂಬಾ ಸಲಿ ಒದೆ ತಿಂದಿದೀನಿ.'' [ಹುಚ್ಚ ವೆಂಕಟ್ ಗೆ 'ನನ್ ಮಗಂದ್' ಅಂದ ನಟಿ ಶ್ರುತಿ.!]
''ನಂದಿ ಬೆಟ್ಟದಲ್ಲಿ ಶೂಟಿಂಗ್ ಇತ್ತು. ಸಾಂಗ್ ಶೂಟಿಂಗ್ ಗೆ ಕುದುರೆ ಓಡಿಸೋಕೆ ಬರುತ್ತಾ ಅಂತ ಮಾಸ್ಟರ್ ಕೇಳಿದ್ರು. ಅವರಿಗೆ ಬರಲ್ಲ. ಆದ್ರೂ ಬರುತ್ತೆ ಅಂತ ಹೇಳಿದ್ರು.''
''ಅದಕ್ಕೆ ನಾನು ಹುಷಾರಾಗಿ ಅಸಿಸ್ಟೆಂಟ್ ಗಳಿಗೆ ಹೇಳಿದ್ದೆ. ಯಾವಾಗ ಬೇಕಾದ್ರೂ ಹೆಗರುತ್ತೀನಿ. ಬಂದು ಹಿಡ್ಕೊಳ್ಳಿ ಅಂತ. ಹಾಡಿಗಾಗಿ ಕಲರ್ ಬಾಂಬ್ ಇಟ್ಟಿದ್ದಾರೆ ಅಂತ ನಮಗೆ ಗೊತ್ತಿರ್ಲಿಲ್ಲ.''
''ಹಾಡು ಶುರುವಾಗ್ತಿದ್ದಂತೆ ಕಲರ್ ಬಾಂಬ್ ಬ್ಲಾಸ್ಟ್ ಆಗೋಯ್ತು. ಕುದುರೆ ಓಡೋಕೆ ಶುರುಮಾಡ್ತು. 3 ಗಂಟೆ ಹೀರೋನ ಹಿಡ್ಕೊಂಡು ಓಡಿಹೋಗಿದೆ ಕಾಡಿನ ಒಳಗೆ. ಅವರಿಗೆ ಕುದುರೆ ಓಡಿಸೋಕೂ ಬರಲ್ಲ'' ಅಂತ ನಟಿ ಶ್ರುತಿ ಹೇಳ್ತಿದ್ದರು. [ಅಳುಮುಂಜಿ ಶ್ರುತಿಗೂ ಕೋಪ; ಜಗಳಕ್ಕೂ ರೆಡಿಯಾದ ಆನಂದ]
ಹಾಗಾದ್ರೆ, ಆ ಹೀರೋ ಯಾರು.? ಶ್ರುತಿ ಕೊಟ್ಟ ಹಿಂಟ್ ಪ್ರಕಾರ ಅಮಿತಾಬ್ ಬಚ್ಚನ್ ಮಗನ ಹೆಸರಿನ ಎರಡು ಅಕ್ಷರ.! ನೇತ್ರ ಕೊಟ್ಟ ಕ್ಲೂ ಪ್ರಕಾರ ಜೂನಿಯರ್ ವಿಷ್ಣುವರ್ಧನ್.! ಇಷ್ಟು ಹೇಳಿದ್ಮೇಲೆ, ನಿಮಗೆ ಹೀರೋ ಯಾರು ಅಂತ ಕನ್ಫರ್ಮ್ ಆಗಿರುತ್ತೆ. ನಾವು ಬಿಡಿಸಿ ಹೇಳ್ಬೇಕಾಗಿಲ್ಲ ಅಲ್ವಾ?