Don't Miss!
- Lifestyle ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- News Namma Metro Pink Line: ಮೆಟ್ರೋ ಸುರಂಗ ಕಾಮಗಾರಿ ಬಹುತೇಕ ಪೂರ್ಣ: ಯೋಜನೆಯ ಅಪ್ಡೇಟ್
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇಷ್ಟಾರ್ಥ ಸಿದ್ಧಿಯಾದರೂ, ರೆಹಮಾನ್-ಕೃತಿಕಾ ಅತ್ತಿದ್ದೇಕೆ?
''ಮೊದಲು ಹೆಣ್ಮಕ್ಕಳಿಗೆ ಪ್ರಾಮುಖ್ಯತೆ ನೀಡಬೇಕಿತ್ತು. ಅವರಿಗೆ ಭಾವನೆಗಳು ಜಾಸ್ತಿ. ನಾನು ಭಾವನೆಗಳನ್ನ ತಡೆಯುತ್ತೇನೆ. ನನ್ನನ್ನ ಬಿಡಬಹುದಿತ್ತು. ಆಯ್ಕೆ ಮಾಡಬಾರದಿತ್ತು.'' ಅಂತ ಹೇಳ್ತಾಯಿದ್ದ ರೆಹಮಾನ್, ತಮ್ಮ 9 ತಿಂಗಳ ಮುದ್ದು ಮಗಳ ಫೋಟೋ ಕೈ ಬರುತ್ತಿದ್ದ ಹಾಗೆ ಅಳುವುದಕ್ಕೆ ಶುರುಮಾಡಿದರು.
ಇನ್ನೂ ಕೃತಿಕಾ ಕೈಗೆ ಅಮ್ಮ ಹಾಗೂ ಗೆಳತಿ ಶಿವಾನಿ ಫೋಟೋ ಬರುವ ಮೊದಲೇ ಕಣ್ಣೀರಿಡಲು ಪ್ರಾರಂಭಿಸಿದ್ದರು.
ಅಷ್ಟಕ್ಕೂ ಟಾಸ್ಕ್ ಏನು? 'ಬಿಗ್ ಬಾಸ್-3' ಸ್ಪರ್ಧಿಗಳ ಇಷ್ಟಾರ್ಥಗಳನ್ನ ಕೇಳಿ ತಿಳಿದುಕೊಂಡ 'ಬಿಗ್ ಬಾಸ್', 'ಇಷ್ಟಾರ್ಥ ಸಿದ್ಧಿರಸ್ತು' ಟಾಸ್ಕ್ ನೀಡಿದರು.
ಟಾಸ್ಕ್ ಪ್ರಕಾರ, ಚಂದನ್ ಮತ್ತು ಸುನಾಮಿ ಕಿಟ್ಟಿ ಬಲೂನ್ ಗಳನ್ನ ಒಡೆದು ಅದರಲ್ಲಿ ಸಿಕ್ಕ ಚೀಟಿಗಳ ಪೈಕಿ, ಮೂರು ಚೀಟಿಗಳನ್ನ ಆಯ್ಕೆ ಮಾಡಬೇಕಿತ್ತು.
ಸಿಕ್ಕ ಚೀಟಿಗಳನ್ನೆಲ್ಲಾ ಗುಡ್ಡೆ ಹಾಕಿದ ಮೇಲೆ ರೆಹಮಾನ್ ಮಗಳ ಭಾವಚಿತ್ರ, ಕೃತಿಕಾ ತಾಯಿ ಹಾಗೂ ಗೆಳತಿಯ ಭಾವಚಿತ್ರ ಮತ್ತು ಶ್ರುತಿ ಮಗಳ ದೂರವಾಣಿ ಕರೆ ಅಂತ ಬರೆದಿರುವ ಮೂರು ಚೀಟಿಗಳನ್ನ ಚಂದನ್ ಮತ್ತು ಸುನಾಮಿ ಕಿಟ್ಟಿ ಆಯ್ಕೆ ಮಾಡಿದರು. [ಹುಚ್ಚ ವೆಂಕಟ್ ಗೆ ಆವಾಝ್ ಹಾಕಿದ ರೆಹಮಾನ್ ಹೊರಗಟ್ಟಿ.!]
ಅದರಂತೆ, ರೆಹಮಾನ್ ಗೆ ಮಗಳು ಸಮಾರಾ ಭಾವಚಿತ್ರ, ಕೃತಿಕಾಗೆ ತಾಯಿ ಹಾಗೂ ಗೆಳತಿಯ ಫೋಟೋ ಮತ್ತು ಶ್ರುತಿಗೆ ಮಗಳು ದೂರವಾಣಿ ಕರೆಮಾಡಿದರು. ಮಗಳ ಜೊತೆ ಮಾತನಾಡಿ ಶ್ರುತಿ ಆನಂದಭಾಷ್ಪ ಸುರಿಸಿದರು.
ಇನ್ನೂ ರೆಹಮಾನ್ ಮತ್ತು ಕೃತಿಕಾ ಭಾವಚಿತ್ರ ಹಿಂದಿರುಗಿಸಬೇಕಿತ್ತು. ಇಬ್ಬರು ವಾಪಸ್ ಕೊಡುವುದಿಲ್ಲ ಅಂತ ಹಠ ಹಿಡಿದ ಮೇಲೆ 'ಬಿಗ್ ಬಾಸ್' ಮನೆ ಬಾಗಿಲುಗಳನ್ನ ಲಾಕ್ ಮಾಡಿ ಭಾವಚಿತ್ರ ವಾಪಸ್ ಕಸಿದುಕೊಂಡರು. ['ಬಿಗ್ ಬಾಸ್' ಮೇಲೆ ರೆಹಮಾನ್ ಮಾಡಿದ ಆರೋಪ ಏನು?]
ಇದರಿಂದ ಭಾವುಕರಾದ ರೆಹಮಾನ್ ತಮ್ಮ ಬೇಸರವನ್ನ ಹೊರಹಾಕಿದರು. ಇನ್ನೂ ಕೃತಿಕಾ ಕಥೆ ಯಾಕ್ ಕೇಳ್ತೀರಾ ಬಿಡಿ.....