Don't Miss!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- News India weather: ಮಳೆಗಾಗಿ ಕಾಯುತ್ತಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ
- Finance ಅಯೋಧ್ಯೆಯಲ್ಲಿ ಓಲಾ ಕ್ಯಾಬ್ ಸೇವೆ ಆರಂಭ
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಳುಮುಂಜಿ ಶ್ರುತಿಗೂ ಕೋಪ; ಜಗಳಕ್ಕೂ ರೆಡಿಯಾದ ಆನಂದ
ಒಂದ್ಕಾಲದಲ್ಲಿ ನಟಿ ಶ್ರುತಿ ಅಳುಮುಂಜಿ ಅಂತಲೇ ಹೆಸರುವಾಸಿ. ಮಹಿಳಾ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದ ಶ್ರುತಿ, ನಟನೆ ಜೊತೆಗೆ ತಮ್ಮ ಅಳುವಿನಿಂದ ಹೆಂಗಳೆಯರ ಮನಗೆದ್ದಿದ್ದರು.
ನಿಜಜೀವನದಲ್ಲಿ ಯಾವುದೇ ಸಮಸ್ಯೆ ಎದುರಾದರೂ, ಶಾಂತ ಚಿತ್ತದಿಂದಲೇ ಪ್ರತಿಕ್ರಿಯೆ ನೀಡುತ್ತಿದ್ದ ಶ್ರುತಿ ನಿನ್ನೆ 'ಬಿಗ್ ಬಾಸ್' ಮನೆಯಲ್ಲಿ ಯಾಕೋ ಕೊಂಚ ಗರಂ ಆದ ಹಾಗೆ ಕಂಡು ಬಂದರು. ['ಬಿಗ್ ಬಾಸ್' ಮನೆಯ ಎಲ್ಲಾ ತಾಜಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ]
'ಬಿಗ್ ಬಾಸ್-3' ಮನೆಯ ಸದಸ್ಯರು ಮೊದಲ ವಾರದ ಕ್ಯಾಪ್ಟನ್ ಆಗಿ ನಟಿ ಶ್ರುತಿ ಅವರನ್ನ ಆಯ್ಕೆ ಮಾಡಿದ್ದರು. ಅದರಂತೆ ಮನೆಯ ಎಲ್ಲಾ ಕೆಲಸಗಳನ್ನ, ಎಲ್ಲಾ ಸದಸ್ಯರು ಮಾಡುವಂತೆ ನೋಡಿಕೊಳ್ಳುವ ಜವಾಬ್ದಾರಿ ನಟಿ ಶ್ರುತಿಯದ್ದು.
ಮೂರು ದಿನ 'ಬಿಗ್ ಬಾಸ್' ಮನೆಯ ಎಲ್ಲಾ ಕೆಲಸಗಳು ಸುಸೂತ್ರವಾಗಿ ನಡೆಯಿತು. ಆದ್ರೆ ನಿನ್ನೆ ಮನೆಯಲ್ಲಿ ಯಾರೂ, ಯಾವ ಕೆಲಸವನ್ನೂ ನೆಟ್ಟಗೆ ಮಾಡ್ಲಿಲ್ಲ. ಇದನ್ನ ಕೇಳೋಕೆ ಮೀಟಿಂಗ್ ಮಾಡಿದಾಗ ನಟಿ ಶ್ರುತಿ ಮತ್ತು ಮಾಸ್ಟರ್ ಆನಂದ್ ನಡುವೆ ಮಾತಿನ ಸಮರ ನಡೆಯಿತು. ಮುಂದೆ ಓದಿ.....
ಮನೆ ಕೆಲಸ ಯಾರೂ ಮಾಡಿಲ್ಲ.!
ಅಡುಗೆ ಟೀಮ್, ಮನೆ ಸ್ವಚ್ಛ ಮಾಡುವ ಟೀಮ್ ಮತ್ತು ಮನರಂಜನೆ ಟೀಮ್ ನಲ್ಲಿರುವ ಸದಸ್ಯರು ನಿನ್ನೆ ಯಾವ ಕೆಲಸವನ್ನೂ ಸರಿಯಾಗಿ ಮಾಡಿಲ್ಲ ಅಂತ ಕ್ಯಾಪ್ಟನ್ ಶ್ರುತಿ ಮಾತಿಗಿಳಿದರು. ['ಬಿಗ್ ಬಾಸ್' ಮನೆಯಲ್ಲಿ ಅಹಂಕಾರಿ ಯಾರು ಗೊತ್ತಾ?]
ವಾಗ್ವಾದ ಶುರು ಮಾಡಿದ ಮಾಸ್ಟರ್ ಆನಂದ್
ಮನೆಯ ಯಾವ ಸದಸ್ಯರಿಗೂ ಸರಿಯಾಗಿ ನಿದ್ದೆ ಆಗಿಲ್ಲ. ಹೀಗಾಗಿ ಯಾರೂ ಕೆಲಸ ಸರಿಯಾಗಿ ಮಾಡುವುದಕ್ಕೆ ಆಗ್ಲಿಲ್ಲ ಅಂತ ಶ್ರುತಿ ಜೊತೆ ಮಾಸ್ಟರ್ ಆನಂದ್ ವಾಗ್ವಾದ ಶುರು ಮಾಡಿದರು. [''ಹೆಣ್ಮಕ್ಕಳ ಕಾಲು ಕತ್ತರಿಸ್ತೀನಿ'' ಎಂದ ಹುಚ್ಚ ವೆಂಕಟ್.!]
ಹುಚ್ಚ ವೆಂಕಟ್ ರಿಂದ ಮೂಡ್ ಆಫ್.!
ಮನರಂಜನೆ ನೀಡುವ ಸಲುವಾಗಿ ಹುಚ್ಚ ವೆಂಕಟ್ ಅನುಕರಣೆ ಮಾಡುವುದಕ್ಕೆ ಹೋಗಿ, ಅವರಿಂದ ಬಾಯಿಗೆ ಬಂದಂತೆ ಬೈಯಿಸಿಕೊಂಡ ಬಳಿಕ ಮಾಸ್ಟರ್ ಆನಂದ್ ಮೂಡ್ ಆಫ್ ಆಗಿತ್ತು. ಹೀಗಾಗಿ ಯಾವ ಕೆಲಸವನ್ನೂ ಮಾಡ್ಲಿಲ್ಲ ಅಂತ ಸಬೂಬು ಹೇಳಿದರು. [ಮಾಸ್ಟರ್ ಆನಂದ್ ಗೆ ಬಾಯಿಗೆ ಬಂದಂತೆ ಬೈದ ಹುಚ್ಚ ವೆಂಕಟ್! ]
ಮಾತು ಅರ್ಧಕ್ಕೆ ನಿಲ್ಲಿಸಿ ಹೋದ ಶ್ರುತಿ
ಮಾಸ್ಟರ್ ಆನಂದ್ ಮಾತುಗಳಿಂದ ಕೊಂಚ ಗರಂ ಆದ ನಟಿ ಶ್ರುತಿ, ತಮ್ಮ ಮಾತನ್ನ ಅರ್ಧಕ್ಕೆ ನಿಲ್ಲಿಸಿ ಎದ್ದುಹೋದರು.
ಶಾಂತಿ-ಕಾಂತಿ ಟಾಸ್ಕ್ ಸೋತ ಮನೆ ಸದಸ್ಯರು
ಮೊದಲ ವಾರ ಮನೆಯ ಎಲ್ಲಾ ಸದಸ್ಯರಿಗೆ 'ಬಿಗ್ ಬಾಸ್' ನೀಡಿದ ಶಾಂತಿ ಕಾಂತಿ ಟಾಸ್ಕ್ ಮುಗಿಯಿತು. ಟಾಸ್ಕ್ ನಲ್ಲಿ ಎಲ್ಲಾ ಸದಸ್ಯರು ಪಾಲ್ಗೊಳ್ಳದ ಕಾರಣ Luxury Budget ಮಿಸ್ ಆಯ್ತು.
ಹುಚ್ಚ ವೆಂಕಟ್ ಮೇಲೆ ಕೋಪ.!
'ಬಿಗ್ ಬಾಸ್' ನೀಡಿದ ಟಾಸ್ಕ್ ನಲ್ಲಿ ಹುಚ್ಚ ವೆಂಕಟ್ ಪಾಲ್ಗೊಳ್ಳಲಿಲ್ಲ. ಧ್ಯಾನದಲ್ಲಿ ಭಾಗಿಯಾಗಲಿಲ್ಲ. ಹೀಗಾಗಿ ಟಾಸ್ಕ್ ಗೆಲ್ಲಲಿಲ್ಲ ಅಂತ ಕೆಲವರು ಬೇಸರ ವ್ಯಕ್ತಪಡಿಸಿದರು.
ಹೆಣ್ಮಕ್ಕಳೇ ಗ್ರೇಟ್ ಎಂದ ಹುಚ್ಚ ವೆಂಕಟ್
''ನಾವು ಗಂಡಸರು ವೇಸ್ಟ್. ವೇಸ್ಟ್ ಬಾಡಿ ಅಂದ್ರೆ ಗಂಡಸರು. ಹೆಣ್ಮಕ್ಕಳೇ ಗ್ರೇಟ್'' ಅಂತ ಹುಚ್ಚ ವೆಂಕಟ್ ಡೈಲಾಗ್ ಹೊಡೀತಿದ್ರು.