Don't Miss!
- News ಸಿನಿಮಾದಲ್ಲಿ ರೀಲ್ ಬಿಟ್ಟಂತೆ ರಾಜಕೀಯದಲ್ಲೂ ರೀಲ್ ಬಿಟ್ಟರೆ ಜನ ಒಪ್ಪಲ್ಲ: ಡಿ ಕೆ ಸುರೇಶ್ ಹೀಗೆ ಹೇಳಿದ್ದು ಯಾರಿಗೆ?
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್' ಮನೆಯಲ್ಲಿ ಮೊಳಗಿದ ಕನ್ನಡ ಡಿಂಡಿಮ.!
'ಬಿಗ್ ಬಾಸ್-3' ಶುರುವಾಗುವುದಕ್ಕೂ ಮುನ್ನ ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಒಂದು ಮಾತು ಹೇಳಿದರು. ''ಈ ಬಾರಿ ಶೋನಲ್ಲಿ ಕನ್ನಡತನ ಹೆಚ್ಚು. ಕನ್ನಡಕ್ಕೆ ಸಂಬಂಧಪಟ್ಟ ಟಾಸ್ಕ್ ಗಳನ್ನ ನೀಡಲಾಗುತ್ತದೆ'' ಅಂತ.
ಆದ್ರೆ, 'ಬಿಗ್ ಬಾಸ್-3' ಶುರುವಾದಾಗಿನಿಂದಲೂ ಮನೆಯಲ್ಲಿ ಕನ್ನಡಕ್ಕಿಂತ ಇಂಗ್ಲೀಷ್ ಭಾಷೆಯನ್ನ ಬಳಸುವವರೇ ಹೆಚ್ಚು. ನಟಿ ಪೂಜಾ ಗಾಂಧಿ ಕೂಡ ಹೆಚ್ಚಾಗಿ ಆಂಗ್ಲ ಭಾಷೆಯಲ್ಲಿ ಮಾತನಾಡುತ್ತಾರೆ. ['ಬಿಗ್ ಬಾಸ್' ಮನೆಯಲ್ಲಿ ಪೂಜಾ ಗಾಂಧಿ ಕಣ್ಣೀರಧಾರೆ]
ಮಾಡೆಲ್ ಕಮ್ ನೃತ್ಯಗಾರ್ತಿ ಜಯಶ್ರೀ ಕನ್ನಡತಿ ಆಗಿದ್ದರೂ, ಅವರ ಸಂಭಾಷಣೆಯಲ್ಲಿ ಆಂಗ್ಲ ಪದಗಳೇ ಜಾಸ್ತಿ. ಇನ್ನೂ ಮಾತಿನ ಭರದಲ್ಲಿ ಹುಚ್ಚ ವೆಂಕಟ್ ಇಂಗ್ಲೀಷ್ ಪದಗಳನ್ನ ಬಳಸುತ್ತಾರೆ.
'ಬಿಗ್ ಬಾಸ್' ನಲ್ಲಿ ಕನ್ನಡ ಕಂಪು ಇಲ್ಲವಲ್ಲ ಅಂತ ಎಲ್ಲರೂ ಮೂಗು ಮುರಿಯುತ್ತಿರುವಾಗಲೇ, 'ಬಿಗ್ ಬಾಸ್' ನಿನ್ನೆ ನಟಿ ಪೂಜಾ ಗಾಂಧಿ ಮತ್ತು ಗಾಯಕ ರವಿ ಮುರೂರು ರವರಿಗೆ ವಿಶಿಷ್ಟ ಟಾಸ್ಕ್ ನೀಡಿದರು.
ನಾಡಗೀತೆ ''ಜಯ ಭಾರತ ಜನನಿಯ ತನುಜಾತೆ...'' ಚರಣ ಮತ್ತು ಪಲ್ಲವಿಯನ್ನ ನಟಿ ಪೂಜಾ ಗಾಂಧಿ ತಪ್ಪಿಲ್ಲದಂತೆ ಹಾಡಬೇಕು. ಅವರಿಗೆ ಹಾಡನ್ನ ಕಲಿಸುವ ಜವಾಬ್ದಾರಿ ಗಾಯಕ ರವಿ ಮುರೂರುರದ್ದು.
ನಾಡಗೀತೆಯ ಚರಣ ಮತ್ತು ಪಲ್ಲವಿ ಕಲಿತು, ಪೂಜಾ ಗಾಂಧಿ ತಪ್ಪಿಲ್ಲದಂತೆ ಹಾಡುವ ತನಕ 'ಬಿಗ್ ಬಾಸ್' ಮನೆಯ ಯಾವ ಸದಸ್ಯರು ಕೂಡ ಮಲಗುವ ಹಾಗಿಲ್ಲ. [ಮಳೆ ಹುಡುಗಿ ಪೂಜಾ ಗಾಂಧಿಗೆ ಹುಡುಗರ ಕಂಡ್ರೆ ಭಯವಂತೆ.!]
ನಾಡಗೀತೆಯನ್ನ ನಟಿ ಪೂಜಾ ಗಾಂಧಿ ಕಲಿತು ಹಾಡುವುದು ಇನ್ಯಾವಾಗಲೋ ಅಂತ 'ಬಿಗ್ ಬಾಸ್' ಮನೆ ಸದಸ್ಯರು ತಲೆ ಮೇಲೆ ಕೈಹೊತ್ತು ಕುಳಿತಿರುವಾಗಲೇ, ಕೆಲವೇ ನಿಮಿಷಗಳಲ್ಲಿ ನಾಡಗೀತೆ ಕಲಿತು, ಕ್ಯಾಮರಾ ಮುಂದೆ ನಿಂತು ಪೂಜಾ ಗಾಂಧಿ ಹಾಡಿಬಿಟ್ಟರು.
ಅಂತೂ, ಕನ್ನಡ ರಾಜ್ಯೋತ್ಸವದ ಪ್ರಯುಕ್ತ 'ಬಿಗ್ ಬಾಸ್' ಮನೆಯಲ್ಲಿ ಕನ್ನಡ ಡಿಂಡಿಮ ಮೊಳಗಿತು.