Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ ಬಾಸ್ ಮನೆಗೆ ಹುಚ್ಚ ವೆಂಕಟ್ ರೀ ಎಂಟ್ರಿ ಡೌಟ್
ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಕನ್ನಡದ ಬಿಗ್ಬಾಸ್ ಮನೆಯಲ್ಲಿ ಹುಚ್ಚ ವೆಂಕಟ್ ಅವರು ಸಹ ಸ್ಪರ್ಧಿ ರವಿ ಮುರೂರು ಅವರಿಗೆ ಗೂಸಾ ಕೊಟ್ಟು ರೌದ್ರಾವತಾರ ತಾಳಿ ಮನೆಯಿಂದ ಹೊರ ಬಿದ್ದಿರುವುದು ಎಲ್ಲರಿಗೂ ಗೊತ್ತಾಗಿರುತ್ತದೆ. ಅದರೆ, ಟಿಆರ್ ಪಿ ಕಿಂಗ್ ಎನಿಸಿರುವ ಹುಚ್ಚ ವೆಂಕಟ್ ರನ್ನು ಈ ರೀತಿ ಹೊರ ಹಾಕಿರುವುದೆಲ್ಲ ಚಾನೆಲ್ ನ ಗಿಮಿಕ್ ಎಂಬ ಮಾತಿಗೆ ಫಿಕ್ಷನ್ ಹೆಡ್ ಪರಮೇಶ್ವರ್ ಗುಂಡ್ಕಲ್ ಪ್ರತಿಕ್ರಿಯಿಸಿದ್ದಾರೆ.
ಯಾವುದೇ ಕಾರಣಕ್ಕೂ ಹುಚ್ಚ ವೆಂಕಟ್ ಅವರನ್ನು ಮನೆಗೆ ಮತ್ತೆ ಕರೆಸಿಕೊಳ್ಳುವ ಸಾಧ್ಯತೆ ಕಡಿಮೆ. ಶೇ 99ರಷ್ಟು ಈ ರೀತಿ ವೈಲ್ಡ್ ಕಾರ್ಡ್ ಎಂಟ್ರಿ ಸಾಧ್ಯವೇ ಇಲ್ಲ ಎಂದಿದ್ದಾರೆ.
ಬಿಡದಿಯ
ಇನ್ನೋವೇಟಿವ್
ಸಿಟಿಯಲ್ಲಿ
ಶೂಟಿಂಗ್
ನಡುವೆಯೇ
ಮಾಧ್ಯಮ
ಪ್ರತಿನಿಧಿಗಳ
ಜೊತೆ
ಮಾತನಾಡಿದ
ಪರಮೇಶ್ವರ್
ಅವರು,
ಇದರಲ್ಲಿ
ನಾವು
ಗಿಮಿಕ್
ಮಾಡಿ
ಏನು
ಲಾಭ
ಗಳಿಸಲು
ಸಾಧ್ಯ.
ಅತ್ಯಂತ
ಜನಪ್ರಿಯ
ಸ್ಪರ್ಧಿಯಾಗಿದ್ದ
ವೆಂಕಟ್(ನಾನು
ಹುಚ್ಚ
ಎನ್ನಲಾರೆ)
ಅವರು
ಇದ್ದರೆ
ತಾನೆ
ನಮಗೆ
ಲಾಭ.
ಹೊರ
ಹಾಕುವುದರಿಂದ
ಏನು
ಲಾಭ
ಸಾಧ್ಯ
ಹೇಳಿ
ಎಂದು
ಮರು
ಪ್ರಶ್ನಿಸಿದರು.
ವಾರದ ಕಥೆ ನಡೆಸುತ್ತಿದ್ದ ಕಿಚ್ಚ ಸುದೀಪ್ ಅವರ ಮಾತನ್ನು ಹುಚ್ಚ ವೆಂಕಟ್ ಕೇಳಲು ತಯಾರಿರಲಿಲ್ಲ. ಬಿಗ್ ಬಾಸ್ ಅಂತಾರಾಷ್ಟ್ರೀಯ ಮಟ್ಟದ ರಿಯಾಲಿಟಿ ಶೋ ಆಗಿದ್ದು, ಇಲ್ಲಿನ ನಿಯಮ ಎಲ್ಲರಿಗೂ ಒಂದೇ. ನಿಯಮ ಮುರಿದ ಕಾರಣ ವೆಂಕಟ್ ಅವರು ತಾವಾಗೇ ಮನೆಯಿಂದ ಹೊರ ಬರಬೇಕಾಗಿದೆ.
ಬಿಗ್ಬಾಸ್ ಮನೆಯಿಂದ ಹುಚ್ಚ ವೆಂಕಟ್ ಔಟ್ ಆಗಲು ಅವರ ವರ್ತನೆಯೇ ಕಾರಣ ಎಂದು ಮತ್ತೊಮ್ಮೆ ಹೇಳಬೇಕಾಗಿಲ್ಲ. ಹಿಂದಿ ಬಿಗ್ ಬಾಸ್ ನಲ್ಲೂ ಈ ರೀತಿ ಹಲ್ಲೆ ಮಾಡಿದ ಕಾರಣ ಸ್ಪರ್ಧಿಯೊಬ್ಬರನ್ನು ಹೊರಹಾಕಲಾಗಿತ್ತು. ಇಲ್ಲಿ ಯಾರು ಯಾರೊಬ್ಬರನ್ನು ದೂಡುವಂತಿಲ್ಲ, ಅವಾಚ್ಯ ಶಬ್ದಗಳಿಂದ ನಿಂದಿಸುವಂತಿಲ್ಲ. ನಿಯಮ ಮೀರಿದವರನ್ನು ಇಲ್ಲೇ ಇರಿಸಿಕೊಂಡರೆ ನಾನು ರಾಜಿನಾಮೆ ನೀಡಿ ಹೋಗಬೇಕಾಗುತ್ತದೆ. ಯಾರ ಪರ ವಹಿಸಿ ನಾವು ಕಾರ್ಯ ನಿರ್ವಹಿಸುವಂತಿಲ್ಲ ಎಂದು ಕಲರ್ಸ್ ಚಾನೆಲ್ ರಿಯಾಲಿಟಿ ಶೋ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಹೇಳಿದ್ದಾರೆ.