Don't Miss!
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Finance ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್
- News ಮಗಳ ಹತ್ಯೆ ಬಗ್ಗೆ ತಂದೆ ನಿರಂಜನ್ ಹಿರೇಮಠ ಪ್ರತಿಕ್ರಿಯೆ: ಒಂದು ಟ್ವೀಟ್ಗೆ ಸಿಎಂ ಜವಾಬ್ದಾರಿ ಮುಗಿಯಿತೇ?: ಮಾಜಿ ಸಿಎಂ
- Automobiles ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- Sports ಟಿ20 ವಿಶ್ವಕಪ್ 2024: ಟೀಮ್ ಇಂಡಿಯಾಗೆ ದೊಡ್ಡ ಚಿಂತೆಯಾದ ಈ ಆರಂಭಿಕನ ಫಾರ್ಮ್
- Technology iPhone: ಐಫೋನ್ 16 ಸರಣಿಯ ಕ್ಯಾಮೆರಾ ಫೀಚರ್ಸ್ ಲೀಕ್! ಏನೆಲ್ಲಾ ವಿಶೇಷತೆ ಇವೆ?..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರತಿಷ್ಟೆಯ ಆಟದಲ್ಲಿ ಗೆದ್ದ ಚಂದನ್; ಸೋತ ಅಯ್ಯಪ್ಪ!
''ಚಂದನ್ ಮುಂದೆ ಈ ವಾರ ನಾನು ಸೇಫ್ ಆದ್ರೆ, ಅದಕ್ಕಿಂತ ದೊಡ್ಡ ಖುಷಿ ಇನ್ನೊಂದಿಲ್ಲ'' ಅಂತ ಕ್ರಿಕೆಟರ್ ಅಯ್ಯಪ್ಪ ಹೇಳುತ್ತಲೇ ಇದ್ದರು. ಆದ್ರೆ, ಅಯ್ಯಪ್ಪ ಅಂದುಕೊಂಡಂತೆ ನಿನ್ನೆ ನಡೆಯಲೇ ಇಲ್ಲ.!
ವೀಕ್ಷಕರ ಎಸ್.ಎಂ.ಎಸ್ ಕೃಪೆಯಿಂದ ನಟ ಚಂದನ್ ಸೇಫ್ ಆಗಿ ಫೈನಲ್ ತಲುಪಿದರು. ಅಯ್ಯಪ್ಪ 'ಬಿಗ್ ಬಾಸ್' ಮನೆಯಿಂದ ಆಚೆ ಕಾಲಿಟ್ಟು, ತಮ್ಮ ಮನೆಯತ್ತ ಮುಖ ಮಾಡಿದರು.['ಡೇಂಜರ್ ಝೋನ್'ನಲ್ಲಿದ್ದಾರೆ ಚಂದನ್ ಮತ್ತು ಅಯ್ಯಪ್ಪ!]
ಮೊದಮೊದಲು ಆಪ್ತ ಗೆಳೆಯರಾಗಿದ್ದ ಅಯ್ಯಪ್ಪ ಮತ್ತು ಚಂದನ್ ನಡುವೆ ನಂತರ ಅದೇನಾಯ್ತೋ ಏನೋ, ಒಬ್ಬರನ್ನ ಕಂಡ್ರೆ ಮತ್ತೊಬ್ಬರಿಗೆ ಆಗ್ದೇಯಿರೋವಷ್ಟು ದ್ವೇಷ ಹುಟ್ಟಿಕೊಳ್ತು.['ಬಿಗ್ ಬಾಸ್-3' ಫೈನಲ್ ಗೆ ಅಯ್ಯಪ್ಪ ಹೋಗಲೇ ಬಾರದು!]
ಟಾಸ್ಕ್ ವಿಷಯದಲ್ಲಿ ಅಯ್ಯಪ್ಪ ವಿರುದ್ಧ ಚಂದನ್, ಚಂದನ್ ವಿರುದ್ಧ ಅಯ್ಯಪ್ಪ ತೊಡೆ ತಟ್ಟಿ ನಿಲ್ಲುತಿದ್ದರು. ಫೈನಲ್ ಗೆ ಇನ್ನೊಂದು ವಾರ ಬಾಕಿ ಇರುವಾಗಲೇ, ಚಂದನ್ ವಿರುದ್ಧ ತಾವು ಗೆದ್ದು ಫೈನಲ್ ಪ್ರವೇಶಿಸಬೇಕು ಎಂಬುದು ಅಯ್ಯಪ್ಪ ಬಯಕೆ ಆಗಿತ್ತು. ಆದ್ರೆ, ವೀಕ್ಷಕರ ನಿರ್ಧಾರದಿಂದ ಅಯ್ಯಪ್ಪ ಈ ವಾರ 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಔಟ್ ಆಗಿದ್ದಾರೆ.
ಚಂದನ್, ನಟಿ ಶ್ರುತಿ, ಪೂಜಾ ಗಾಂಧಿ, ರೆಹಮಾನ್ ಮತ್ತು ಮಾಸ್ಟರ್ ಆನಂದ್ ಫೈನಲ್ ಹಂತ ಪ್ರವೇಶಿಸಿದ್ದಾರೆ.