Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊನೆಯ ಎರಡು ವಾರಗಳ 'ಬಿಗ್ ಬಾಸ್' ಕಲರ್ಸ್ ಸೂಪರ್ ನಲ್ಲಿ.!
ಎಲ್ಲರಿಗೂ ಗೊತ್ತಿರುವ ಹಾಗೆ, 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಎರಡು ವಾರಗಳ ಕಾಲ ಎಕ್ಸ್ ಟೆಂಡ್ ಆಗಿದೆ. 14 ವಾರಗಳ ಬದಲು 16 ವಾರಗಳ ಕಾಲ ಈ ಬಾರಿಯ 'ಬಿಗ್ ಬಾಸ್' ನಡೆಯಲಿದೆ.
ಹಾಗಂದ ಮಾತ್ರಕ್ಕೆ, ಕಲರ್ಸ್ ಕನ್ನಡ ವಾಹಿನಿಯಲ್ಲಿಯೇ ಇನ್ನೆರಡು ವಾರಗಳ ಕಾಲ 'ಬಿಗ್ ಬಾಸ್' ಕಾರ್ಯಕ್ರಮ ಪ್ರಸಾರವಾಗಲಿದೆ ಅಂತ ಅಂದುಕೊಳ್ಳಬೇಡಿ. ಯಾಕಂದ್ರೆ, ಬರುವ ಸೋಮವಾರದಿಂದ ಕಲರ್ಸ್ ಸೂಪರ್ ಚಾನೆಲ್ ನಲ್ಲಿ ರಾತ್ರಿ 9 ಗಂಟೆಗೆ 'ಬಿಗ್ ಬಾಸ್' ಕಾರ್ಯಕ್ರಮ ಪ್ರಸಾರವಾಗಲಿದೆ.
'ಕಲರ್ಸ್ ಕನ್ನಡ' ವಾಹಿನಿಯಲ್ಲಿ ಹೊಸ ಸೀರಿಯಲ್
ಬರುವ ಸೋಮವಾರ ಅಂದ್ರೆ ಜನವರಿ 16 ರಿಂದ ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ರಾಧಾ ರಮಣ' ಧಾರಾವಾಹಿ ಪ್ರಸಾರವಾಗಲಿದೆ.['ಬಿಗ್ ಬಾಸ್' 2 ವಾರ ವಿಸ್ತರಣೆಯ ಹಿಂದಿನ ಮರ್ಮ ಬಿಚ್ಚಿಟ್ಟ ಪರಮೇಶ್ವರ್ ಗುಂಡ್ಕಲ್!]
'ಕಲರ್ಸ್ ಸೂಪರ್'ಗೆ ಶಿಫ್ಟ್ ಆದ 'ಬಿಗ್ ಬಾಸ್'
ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ಪ್ರಸಾರವಾಗುವುದರಿಂದ, ಕಲರ್ಸ್ ಸೂಪರ್ ಚಾನೆಲ್ ನಲ್ಲಿ ರಾತ್ರಿ 9 ಗಂಟೆಗೆ 'ಬಿಗ್ ಬಾಸ್' ಪ್ರಸಾರ ಆಗಲಿದೆ.
ಎರಡು ವಾರ ಎಕ್ಸ್ ಟೆಂಡ್ ಆಗಿದ್ದು ಯಾಕೆ.?
''13 ವಾರಗಳ ಕಾಲ ಉತ್ತಮ ಜನಪ್ರಿಯತೆ ಪಡೆದುಕೊಂಡು, ಜನರನ್ನ ಅತ್ಯುತ್ತಮವಾಗಿ ಈ ಕಾರ್ಯಕ್ರಮ ರಂಜಿಸಿದೆ. ಆದ್ದರಿಂದ ಜನರಿಗೂ ಒಳ್ಳೆಯ ಮನರಂಜನೆ ಸಿಗುತ್ತೆ ಹಾಗೂ ವಾಹಿನಿಗೂ ಉತ್ತಮ ವೀಕ್ಷಕರು ಸಿಗುತ್ತಾರೆ ಎಂಬ ಕಾರಣಕ್ಕೆ 'ಬಿಗ್ ಬಾಸ್' ಎಕ್ಸ್ ಟೆಂಡ್ ಮಾಡಲಾಯ್ತು'' ಎನ್ನುತ್ತಾರೆ 'ಬಿಗ್ ಬಾಸ್' ಡೈರೆಕ್ಟರ್ ಪರಮೇಶ್ವರ ಗುಂಡ್ಕಲ್.
ಎದುರಿಸಿದ ಸವಾಲು.?
''ಸುದೀಪ್ ಅವರ ಕಾಲ್ ಶೀಟ್ ತುಂಬಾ ಇಂಪಾರ್ಟೆಂಟ್ ಆಗಿತ್ತು. ಅವರ ಬ್ಯುಸಿ ಶೆಡ್ಯೂಲ್ ನಲ್ಲಿ ಮತ್ತೆ ಮೂರು ದಿನ ಕಾರ್ಯಕ್ರಮ ನಿರೂಪಣೆ ಮಾಡಬೇಕಿತ್ತು. ಆದ್ರೆ, ನಮಗಾಗಿ ಬಿಡುವು ಮಾಡಿಕೊಂಡು ಸಮ್ಮತಿಸಿದರು. ನಮಗೂ ಈ ನಿರ್ಧಾರ ಪ್ರಕಟ ಮಾಡುವಾಗ ಆತಂಕವಿತ್ತು. ಆದ್ರೆ, ಸುದೀಪ್ ಅವರು ಹೇಳಿದಾಗ ಮನೆಯಲ್ಲಿರುವ ಸದಸ್ಯರು ಚಪ್ಪಾಳೆ ಹೊಡೆದರು'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ಪರಮೇಶ್ವರ ಗುಂಡ್ಕಲ್ ತಿಳಿಸಿದ್ದಾರೆ.