Don't Miss!
- News ಕೇಂದ್ರದ ಬಿಜೆಪಿ ಸರ್ಕಾರದಿಂದ ಅನ್ನದಾತರಿಗೆ ಮೋಸ ; ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದ ಸಂಯುಕ್ತಾ ಪಾಟೀಲ್
- Finance ಬೆಂಗಳೂರು, ನೋಯ್ಡಾ, ಪುಣೆಯಲ್ಲಿ ಶೀಘ್ರದಲ್ಲೇ ಹೊಸ ಆಪಲ್ ಸ್ಟೋರ್ ಪ್ರಾರಂಭ
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Automobiles ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
- Lifestyle ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು.! ಹೇಗೆ ಗೊತ್ತಾ?
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್' ಮನೆಯಿಂದ 'RJ ನಿರಂಜನ್' ಔಟ್
'ಬಿಗ್ ಬಾಸ್ ಕನ್ನಡ-4' ಆಟದಿಂದ ಆರ್ ಜೆ ನಿರಂಜನ್ ದೇಶಪಾಂಡೆ ಹೊರ ಬಿದ್ದಿದ್ದಾರೆ. 'ಬಿಗ್ ಬಾಸ್' ಮನೆಯಿಂದ ಎಂಟನೇ ವಾರ ಯಾರು ಹೊರಗೆ ಹೋಗುತ್ತಾರೆ ಎಂಬ ಕುತೂಹಲ ವೀಕ್ಷಕರನ್ನ ಕಾಡಿತ್ತು.
ವೀಕ್ಷಕರ ಈ ಕುತೂಹಲಕ್ಕೆ ತೆರೆ ಎಳೆದ ಕಿಚ್ಚ ಸುದೀಪ್, ''ಕಿಚ್ಚನ ಜೊತೆ ವಾರದ ಕಥೆ'' ಎಪಿಸೋಡ್ ನಲ್ಲಿ ನಿರಂಜನ್ ಅವರು ಈ ವಾರ ಎಲಿಮಿನೇಟ್ ಆಗಿದ್ದಾರೆ ಎಂದು ಘೋಷಿಸಿದರು.['ಬಿಗ್ ಬಾಸ್' ಮನೆಯಲ್ಲಿ ಬೆಂಕಿಗೆ ಆಹುತಿಯಾದ ಅತಿಹೆಚ್ಚು ಮುಖಗಳಿವು.!]
ಈ ವಾರ 6 ಮಂದಿ ನಾಮೀನೇಟ್ ಆಗಿದ್ದರು?
'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ಈ ವಾರ 6 ಮಂದಿ ನಾಮೀನೇಟ್ ಆಗಿದ್ದರು.
ಯಾರು ಯಾರು?
ಭುವನ್ ಪೊನ್ನಣ್ಣ, ನಿರಂಜನ್ ದೇಶಪಾಂಡೆ, ಮಾಳವಿಕಾ, ಮೋಹನ್, ಶೀತಲ್ ಶೆಟ್ಟಿ ಮತ್ತು ಪ್ರಥಮ್ ಈ ವಾರ ನಾಮಿನೇಟ್ ಆಗಿದ್ದರು.
ನಿರಂಜನ್ ಗೆ ಗೇಟ್ ಪಾಸ್
ವೀಕ್ಷರಿಂದ ಕಡಿಮೆ ಎಸ್ ಎಂ ಎಸ್ ಹಾಗೂ ಈ ವಾರದ ಟಾಸ್ಕ್ ಫರ್ಫಾಮೆನ್ಸ್ ನಲ್ಲಿ ಆದ ಹಿನ್ನಡೆಯಿಂದ ಆರ್ ಜೆ ನಿರಂಜನ್ ದೇಶಪಾಂಡೆ 'ಬಿಗ್ ಬಾಸ್' ಮನೆಯಿಂದ ಹೊರ ಬಿದ್ದಿದ್ದಾರೆ.['ಬಿಗ್ ಬಾಸ್' ಮನೆಯಲ್ಲಿ ಒಮ್ಮೆಲೆ 3 ವೈಲ್ಡ್ ಕಾರ್ಡ್ ಎಂಟ್ರಿ.!]
'ಮಸ್ತಾನ್'ಗೆ ಶಿಕ್ಷೆ ಕೊಟ್ಟು ಹೋದ ನಿರಂಜನ್
ಮನೆಯಿಂದ ಹೋರ ಹೋದ ನಿರಂಜನ್ ಗೆ 'ಬಿಗ್ ಬಾಸ್' ಅಧಿಕಾರವೊಂದನ್ನ ನೀಡಿದ್ದರು. ಇದರ ಅನುಸಾರ, ಮನೆಯ ಸದಸ್ಯರೊಬ್ಬರು ದ್ವಾರಪಾಲಕರಾಗಿ ಕಾರ್ಯನಿರ್ವಹಿಸಬೇಕಾಗಿತ್ತು. ದ್ವಾರಪಾಲಕ ಕೆಲಸಕ್ಕೆ ನಿರಂಜನ್ ಅವರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದ 'ಮಸ್ತಾನ್' ಅವರನ್ನ ಸೂಚಿಸಿದರು.
ನಿರಂಜನ್ ಗೆ ಮದುವೆ
ಎಂಟನೇ ವಾರ 'ಬಿಗ್ ಬಾಸ್' ಮನೆಯಿಂದ ಹೊರಬಿದ್ದ ಆರ್ ಜೆ ನಿರಂಜನ್ ದೇಶಪಾಂಡೆ ಅವರು ಸದ್ಯ, ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ಮದುವೆ ದಿನಾಂಕ ನಿಗದಿಯಾಗಿದ್ದು, ಆದಷ್ಟೂ ಬೇಗ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುತ್ತಿದ್ದಾರೆ.