Don't Miss!
- Automobiles ವಂದೇ ಭಾರತ್ ಸ್ಲೀಪರ್, ಸೂಪರ್ ಆಪ್.. ರೈಲ್ವೆಯಿಂದ ಬಿಗ್ ಪ್ಲ್ಯಾನ್: ನೀವು ತಿಳಿಯಬೇಕಾದ ವಿಚಾರಗಳಿವು!
- News Siddaramaiah campaign: ಬಾಗೇಪಲ್ಲಿಯಲ್ಲಿಂದು ಸಿಎಂ ಸಿದ್ದರಾಮಯ್ಯ ಪ್ರಚಾರ ಸಭೆ, ಡಿಕೆಶಿ ಭಾಗಿ
- Finance Real Estate: ಬೆಂಗಳೂರಿನ ಕೋರಮಂಗಲದಲ್ಲಿ ದುಬಾರಿ ಬೆಲೆಗೆ ಆಸ್ತಿ ಖರೀದಿಸಿದ ಅಜಿತ್ ಐಸಾಕ್
- Technology Infinix: ಭಾರತದಲ್ಲಿಂದು ಇನ್ಫಿನಿಕ್ಸ್ ನೋಟ್ 40 ಪ್ರೊ 5G ಮೊದಲ ಸೇಲ್: ಬೆಲೆ, ಫೀಚರ್ಸ್ ಪರಿಶೀಲಿಸಿ
- Lifestyle ಎಳ ನೀರು ಹಾಕಿ ಮಾಡುವ 2 ದೋಸೆ ರೆಸಿಪಿ: ರುಚಿ ಸೂಪರ್, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಡೆಲ್ಲಿ ವಿರುದ್ಧದ ಹೀನಾಯ ಸೋಲಿಗೆ ಇವರೇ ಕಾರಣ; ಶುಭ್ಮನ್ ಗಿಲ್ ಗರಂ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರೀ ಕ್ಲೈಮ್ಯಾಕ್ಸ್ ಹಂತ ತಲುಪಿದ ಬಿಗ್ ಬಾಸ್ ಶೋ
ಈಟಿವಿ ಕನ್ನಡ ವಾಹಿನಿಯ ರಿಯಾಲಿಟಿ ಶೋ ಬಿಗ್ ಬಾಸ್ ಒಂದರ್ಥದಲ್ಲಿ ಪ್ರೀ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಇನ್ನು ಉಳಿದಿರುವುದು ನಾಲ್ಕೇ ವಾರ. ಮನೆಯಲ್ಲಿ ಇರುವ ಸ್ಪರ್ಧಿಗಳು ಆರು ಜನ ಮಾತ್ರ. ಈ ವಾರದಿಂದ ಒಬ್ಬೊಬ್ಬರೇ ಮನೆಯಲ್ಲಿ ಖಾಲಿಯಾಗುತ್ತಾ ಹೋಗುತ್ತಾರೆ. ಇಲ್ಲಿವೆ ನೋಡಿ 71ನೇ ದಿನದ ಹೈಲೈಟ್ಸ್.
ಈ ಬಾರಿಯ ನಾಮಿನೇಷನ್ ಪ್ರಕ್ರಿಯೆಯಲ್ಲಿ ನಾಲ್ಕು ಮಂದಿ ನಾಮಿನೇಟ್ ಆಗಿದ್ದಾರೆ. ನಿಕಿತಾ, ಅರುಣ್, ಚಂದ್ರಿಕಾ, ವಿಜಯ್ ಮತ್ತು ಅನುಶ್ರೀ. ಈ ಬಾರಿ ಬ್ರಹ್ಮಾಂಡ ಶರ್ಮಾ ಅವರು ನಾಮಿನೇಷನ್ ಆಗದ ಕಾರಣ ಬಿಗ್ ಬಾಸ್ ಅವರಿಗೆ ವಿಶೇಷ ಅಧಿಕಾರ ಕೊಟ್ಟರು. ಆ ಪ್ರಕಾರ ಅವರು ನಾಲ್ಕು ಮಂದಿಯಲ್ಲಿ ಒಬ್ಬರನ್ನು ಉಳಿಸಬಹುದು. ಅದರಂತೆ ಅವರು ಚಂದ್ರಿಕಾ ಅವರ ಹೆಸರು ಸೂಚಿಸಿದರು.
ಚಂದ್ರಿಕಾ ಹಾಗೂ ನರೇಂದ್ರ ಬಾಬು ಶರ್ಮಾ ಅವರು ಸೇಫ್ ಆಗಿದ್ದಾರೆ. ನಿಕಿತಾ, ಅರುಣ್, ವಿಜಯ್ ಹಾಗೂ ಅನುಶ್ರೀ ಅವರಲ್ಲಿ ಒಬ್ಬರು ಮನೆಯಿಂದ ಹೊರಹೋಗುತ್ತಾರೆ. ಅವರು ಯರಾಗಲಿದ್ದಾರೆ ಎಂಬುದು ಗೊತ್ತಾಗಬೇಕಾದರೆ ಶುಕ್ರವಾರದತನಕ (ಜೂ.7) ಕಾಯಬೇಕು.
ಈ ಬಾರಿ ಬಿಗ್ ಬಾಸ್ ಮನೆಯ ಸದಸ್ಯರಿಗೆ ಸರ್ ಪ್ರೈಸ್ ಮೇಲೆ ಸರ್ ಪ್ರೈಸ್ ಕೊಟ್ಟರು. ಮನೆಗೆ ಅವರ ಪ್ರೀತಿ ಪಾತ್ರರನ್ನು ಕರೆಸಿ ಸದಸ್ಯರ ಅಗಲಿಕೆಯ ನೋವನ್ನು ಕೊಂಚ ಮಟ್ಟಿಗೆ ಪರಿಹರಿಸಿದರು. ಎಲ್ಲರೂ ಸುದೀಪ್ ಅವರಿಗೆ ಮನಸಾರೆ ಥ್ಯಾಂಕ್ಸ್ ಹೇಳಿದರು.