Don't Miss!
- News Kotak Mahindra Bank: ಕೋಟಕ್ ಮಹಿಂದ್ರಾ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ: ಗ್ರಾಹಕರ ಮೇಲೆ ಪರಿಣಾಮಗಳೇನು?
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ ಬಾಸ್ ನಲ್ಲಿ ಮುಂಗಾರು ಮಳೆ ಚಿತ್ರದ ಕುಚೋದ್ಯ
ಈ ಬಾರಿ 'ಬಿಗ್ ಬಾಸ್' ಮನೆಯ ಸದಸ್ಯರಿಗೆ ಹೊಸ ಟಾಸ್ಕ್ ನೀಡಿದರು. ಅದೇನೆಂದರೆ ಚಿತ್ರ ನಿರ್ದೇಶನ. ಚಿತ್ರದ ಶೀರ್ಷಿಕೆ 'ಹಿಂಗಾರು ಮಳೆ'. ಆಕ್ಷನ್ ಕಟ್ ಹೇಳುವವರು ಅರುಣ್ ಸಾಗರ್. ಚಿತ್ರದ ನಾಯಕ, ನಾಯಕಿ ವಿಜಯ್ ರಾಘವೇಂದ್ರ ಹಾಗೂ ನಿಕಿತಾ. ದೇವದಾಸ ಮೊಲದ ಪಾತ್ರದಲ್ಲಿ ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ.
ಈ ಚಿತ್ರ ನಿರ್ದೇಶನದ ಟಾಸ್ಕ್ ಜೊತೆಗೆ ಬಿಗ್ ಬಾಸ್ ಒಂದು ಎಚ್ಚರಿಕೆಯನ್ನೂ ಕೊಟ್ಟರು. ಅದೇನೆಂದರೆ ಈ ಚಿತ್ರ ಸಂಪೂರ್ಣ ಭಿನ್ನವಾಗಿರಬೇಕು. ಯಾರನ್ನೂ ಅನುಕರಣೆ ಮಾಡಬಾರದು ಎಂದು. ಆದರೆ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಲಾಯಿತು.
ಮನೆಯಲ್ಲಿ ನಡೆದದ್ದೇ ಬೇರೆ. 'ಮುಂಗಾರು ಮಳೆ' ಚಿತ್ರದ ಗೋಲ್ಡನ್ ಸ್ಟಾರ್ ಗಣೇಶ್, ನಿರ್ದೇಶಕ ಯೋಗರಾಜ್ ಭಟ್, ನಾಯಕಿ ಪೂಜಾಗಾಂಧಿ ಅವರನ್ನು ಅಣಕಿಸುವಂತೆ ಈ ಟಾಸ್ಕನ್ನು ನಿರ್ವಹಿಸಲಾಯಿತು. ಎಂಬತ್ತೇಳನೇ ದಿನದ ಹೈಲೈಟ್ಸ್ ಇಲ್ಲಿವೆ ನೋಡಿ.
ಇಲ್ಲಿ 'ಹಿಂಗಾರು ಮಳೆ' ನಿರ್ದೇಶಕರ ಹೆಸರು ನಾಗರಾಜ್ ನಟ್. ಗಣೇಶ್ ಬದಲಾಗಿ ಮಣೇಶ್. ಪೂಜಾಗಾಂಧಿ ಹೋಗಿ ಸೋಜಾಗಾಂಧಿ. ಅವರ ತಾಯಿಯ ಹೆಸರು ಮಜಾಗಾಂಧಿ. ಇನ್ನು ಚಿತ್ರದ ಅಡಿಬರಹ ಮುಂಗಾರು ಮಳೆ-ಮಿನಿಮಿನಿ ಜಿಲ್ ಜವಾನಿ.
ಮಣೇಶ್ ಪಾತ್ರದಲ್ಲಿ ವಿಜಯ್ ರಾಘವೇಂದ್ರ ಅವರು ಬಹುತೇಕ ಗಣೇಶ್ ಅವರಂತೆ ಮಾಡಿ ತೋರಿಸಿದರು. ಇನ್ನು ಸೋಜಾಗಾಂಧಿಯಾಗಿ ನಿಕಿತಾ ಸಹ ಅಷ್ಟೇ ಪೂಜಾಗಾಂಧಿಯಂತೆ ನರ್ತಿಸಿದರು. ನಾಗರಾಜ್ ನಟ್ ಆಗಿ ಅರುಣ್ ಸಾಗರ್ ಯೋಗರಾಜ್ ಭಟ್ ಅವರಂತೆ ಮಾಡಿದರು.