Don't Miss!
- News Mandya: ಏಪ್ರಿಲ್ 24 ರಿಂದ 26ರ ವರೆಗೆ ಮಂಡ್ಯದಲ್ಲಿ ಪ್ರತಿಬಂಧಕಾಜ್ಞೆ ಜಾರಿ
- Automobiles ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ ಬಾಸ್ ಮನೆಯಲ್ಲಿ ರೊಮ್ಯಾಂಟಿಕ್ ಜೋಡಿ ಪ್ರತ್ಯಕ್ಷ
ಕಳೆದ ಹದಿಮೂರು ವಾರಗಳ ಅವಿಸ್ಮರಣೀಯ ಘಟನೆಗಳನ್ನು ಈ ಬಾರಿ 'ಬಿಗ್ ಬಾಸ್' ಮನೆಯ ನಾಲ್ಕು ಸದಸ್ಯರಿಗೆ ನೆನಪಿಸಿದರು. ಈಟಿವಿ ಕನ್ನಡ ವಾಹಿನಿಯ ರಿಯಾಲಿಟಿ ಶೋ ಕೊನೆಯ ಘಟ್ಟಕ್ಕೆ ಬಂದು ನಿಂತಿದೆ. ಅರುಣ್ ಸಾಗರ್, ವಿಜಯ್ ರಾಘವೇಂದ್ರ, ನಿಕಿತಾ ಹಾಗೂ ನರೇಂದ್ರ ಬಾಬು ಶರ್ಮಾ ಇವರಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಬಗ್ಗೆ ತೀವ್ರ ಕುತೂಹಲ ನೆಲೆಸಿದೆ.
ತೊಂಬತ್ತ ಮೂರನೇ ದಿನದ ಹೈಲೈಟ್ಸ್ ಇಲ್ಲಿವೆ. ಶ್ವೇತಾ ಪಂಡಿತ್ ಹಾಗೂ ತಿಲಕ್ ಜೋಡಿ ಮತ್ತೆ ಮನೆಗೆ ಆಗಮಿಸಿ ಉಳಿದ ಸದಸ್ಯರಲ್ಲಿ ಮಿಂಚಿನ ಸಂಚಾರ ಉಂಟು ಮಾಡಿದರು. ಇವರಿಬ್ಬರನ್ನು ಮನೆಯ ಸದಸ್ಯರು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಅರುಣ್ ಅವರಂತೂ ಶ್ವೇತಾರನ್ನು ಅಪ್ಪಿ ಮುದ್ದಾಡಿ ಬರಮಾಡಿಕೊಂಡರು.
ಅರುಣ್ ಅವರಂತೂ ಶ್ವೇತಾ ಅವರನ್ನು ಎತ್ತಿಕೊಂಡು ಐ ಲವ್ ಯೂ ಸೋ ಮಚ್ ಎಂದು ಕುಣಿದಾಡಿದರು. ತುಂಬಾ ತೆಳ್ಳಗಾಗಿದ್ದೀರಿ ಯಾಕೆ ಎಂದು ಅರುಣ್ ಅವರನ್ನು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅರುಣ್ ನಿನ್ನನ್ನು ಎತ್ತುವಷ್ಟರ ಮಟ್ಟಿಗೆ ಶಕ್ತಿ ಇದೆ ಎಂದರು. ಒಟ್ಟಾರೆಯಾಗಿ ಮನೆಯಲ್ಲಿ ಮತ್ತೆ ಸಂಭ್ರಮದ ವಾತಾವರಣ ನೆಲೆಸಿತು.
ಬಳಿಕ ಬ್ರಹ್ಮಾಂಡ ಶರ್ಮಾ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ ಶ್ವೇತಾ ಪಂಡಿತ್, ನಿಮ್ಮನ್ನು ಜನ ತುಂಬಾ ತುಂಬಾ ಪ್ರೀತಿಸುತ್ತಿದಾರೆ ಎಂದು ವರದಿ ಕೊಟ್ಟರು. ಇದರಿಂದ ನರೇಂದ್ರ ಬಾಬು ಶರ್ಮಾ ಅವರ ಮುಖ ಊರಗಳ ಅರಳಿತು.