Don't Miss!
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- News ಮೈಸೂರು: ಪ್ರಧಾನಿ ಮೋದಿ ಕುರಿತಾದ ಹಾಡು ಶೇರ್ ಮಾಡಿ ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜದೀಪ್ ಬಗಲಿಗೆ ಈಟಿವಿ ಕನ್ನಡ ನ್ಯೂಸ್ ಚಾನೆಲ್
ಉಡುಪಿ, ಆಗಸ್ಟ್ 1: 'ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ವಿಪರೀತ ಮಾರ್ಪಾಡುಗಳನ್ನು ಕಾಣುತ್ತಿವೆ. ಮಾಧ್ಯಮ ಸಂಸ್ಥೆಗಳ ಸಂಖ್ಯೆ ವಿಪರೀತವಾಗುತ್ತಿವೆ. ಆದರೆ ಗುಣಮಟ್ಟ ಹೇಳಿಕೊಳ್ಳುವಂತಹುದಲ್ಲ' ಎಂದು ಹಿರಿಯ ಪತ್ರಕರ್ತ, ಸಿಎನ್ಎನ್-ಐಬಿಎನ್ ನ್ಯೂಸ್ ಚಾನೆಲ್ ಮುಖ್ಯ ಸಂಪಾದಕ ರಾಜದೀಪ್ ಸರ್ದೇಸಾಯಿ ಹೇಳಿದ್ದಾರೆ.
ಮಣಿಪಾಲ
ವಿವಿ
ಸ್ಕೂಲ್
ಆಫ್
ಕಮ್ಯುನಿಕೇಷನ್
ವಿದ್ಯಾರ್ಥಿಗಳ
ಜತೆ
ಬುಧವಾರ
ಬೆಳಗ್ಗೆ
ನಡೆಸಿದ
ಸಂವಾದದ
ವೇಳೆ
ರಾಜದೀಪ್
ಈ
ಅಭಿಪ್ರಾಯ
ವ್ಯಕ್ತಪಡಿಸಿದರು.
ನಾವಿರುವ
ಸಮಾಜದಲ್ಲಿ
ಇಂದು
ಅಸಹನೆ
ಹೆಚ್ಚುತ್ತಿದೆ.
ಪರಸ್ಪರ
ಅಪನಂಬಿಕೆಯಿಂದ
ಸಮಾಜ
ಇಬ್ಭಾಗವಾಗುತ್ತಿದೆ.
ಪತ್ರಕರ್ತ
ಇದನ್ನು
ಜನರಿಗೆ
ಎತ್ತಿ
ತೋರಿಸುವ
ಕೆಲಸ
ಮಾಡಬೇಕಾಗಿದೆ
ಎಂದು
ಅವರು
ಕಿವಿಮಾತು
ಹೇಳಿದರು.
ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದ್ದೇವೆ- ರಾಜದೀಪ್ ವಿಷಾದ
ಪತ್ರಕರ್ತನಿಗೆ ಅತೀ ಮುಖ್ಯವಾಗಿ ಬೇಕಾಗಿರುವುದು ವಿಶ್ವಾಸಾರ್ಹತೆ. ಒಬ್ಬ ಓದುಗ, ವೀಕ್ಷಕನ ಮನೋದೃಷ್ಟಿಯಲ್ಲಿ ನೀವು ಯಾವತ್ತೂ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳದಂತೆ ವರದಿ ಮಾಡುವುದು ಮುಖ್ಯ. ಆದರೆ ಇಂದಿನ ದಿನಗಳಲ್ಲಿ ಸುದ್ದಿಯನ್ನು ವೈಭವೀಕರಿಸುವ ಭರದಲ್ಲಿ ನಾವು ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದ್ದೇವೆ ಎಂದು ರಾಜದೀಪ್ ವಿಷಾದ ವ್ಯಕ್ತಪಡಿಸಿದರು.
ಮಾಧ್ಯಮಎಂಬುದು 20-ಟ್ವೆಂಟಿ ಪಂದ್ಯವಲ್ಲ
ಪತ್ರಕರ್ತನ ಪಾಲಿಗೆ ಪ್ರತಿದಿನವೂ ಹೊಸ ದಿನವಾಗಿರುತ್ತದೆ. ಪ್ರತಿದಿನವೂ ಹೊಸ ಸವಾಲುಗಳನ್ನು ಎದುರಿಸಲು ಸಿದ್ಧನಾಗಿರಬೇಕು. ಅದರೊಂದಿಗೆ ಆತ ನೈತಿಕತೆಯ ಎಲ್ಲೆ ಮೀರಬಾರದು. ಮಾಧ್ಯಮಎಂಬುದು 20-ಟ್ವೆಂಟಿ ಪಂದ್ಯವಲ್ಲ ಎಂಬ ಅರಿವು ಆತನಿಗಿರಬೇಕು ಎಂದವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜನಪರ ಕಾರ್ಯಕ್ರಮಗಳಿಗೆ ಪ್ರಾಯೋಜಕರೇ ಸಿಗುವುದಿಲ್ಲ
ಜನಸಾಮಾನ್ಯರಿಗೆ ಬೇಕಾದ ಕಾರ್ಯಕ್ರಮಗಳನ್ನು ಈಗಲೂ ಪ್ರಸಾರ ಮಾಡಲಾಗುತ್ತದೆ. ಆದರೆ ಅದು ಹೆಚ್ಚು ಜನರ ಗಮನ ಸೆಳೆಯುವುದಿಲ್ಲ. ಉದಾಹರಣೆಗೆ ತಮ್ಮ ಐಬಿಎನ್ ಚಾನೆಲಿನಲ್ಲಿ ಈಗ ಪಶ್ಚಿಮ ಘಟ್ಟದ ಅಳಿವು-ಉಳಿವಿನ ಬಗ್ಗೆ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಆದರೆ ಅದಕ್ಕೆ ನಮಗೆ ಪ್ರಾಯೋಜಕರೇ ಸಿಗುವುದಿಲ್ಲ ಎಂದು ಸಖೇದ ಆಶ್ಚರ ವ್ಯಕ್ತಪಡಿಸಿದರು.
ಈಟಿವಿ-ಕನ್ನಡ ಖರೀದಿಗೆ ರಾಜದೀಪ್ :
ಪ್ರತಿಯೊಂದು ಪ್ರಾದೇಶಿಕ ಭಾಷೆಯಲ್ಲೂ ಗುಣ ಮಟ್ಟದ ಚಾನೆಲ್ ಆರಂಭಿಸಬೇಕೆಂಬುದು ನಮ್ಮ ಬಯಕೆ. ಈಟಿವಿ-ಕನ್ನಡ ಖರೀದಿಗೆ ಪ್ರಯತ್ನ ಮುಂದುವರಿದಿದೆ. ಆದರೆ ಸರಕಾರದಿಂದ ಇನ್ನೂ ಒಪ್ಪಿಗೆ ಸಿಕ್ಕಿಲ್ಲ ಎಂದು ತಿಳಿಸಿದರು. ಎಸ್ಒಸಿ ನಿರ್ದೇಶಕ ಪ್ರೊ. ವರದೇಶ್ ಹಿರೇಗಂಗೆ ಸ್ವಾಗತಿಸಿ, ರಾಜ್ದೀಪ್ ಅವರ ಪರಿಚಯ ಮಾಡಿದರು. ಮಣಿಪಾಲ ವಿವಿ ಸಾರ್ವಜನಿಕ ಸಂಪರ್ಕ ನಿರ್ದೇಶಕ ಅಲೆಕ್ಸ್ ಚಾಂಡಿ ಉಪಸ್ಥಿತರಿದ್ದರು.