Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶ್ವೇತಾ ವಿರುದ್ಧ ಬಕೆಟ್ ಹಿಡಿಯುತ್ತಿರುವ ಆರೋಪ
ಮನೆಯಲ್ಲಿ ರೇಷನ್ ಮುಗಿದ ಬಗ್ಗೆ ಮಹಿಳಾ ಸದಸ್ಯರು ಚರ್ಚಿಸಿದರು. ಮೂರು ದಿನಕ್ಕೆ ಯಾವುದೇ ಕಾರಣಕ್ಕೂ ರೇಷನ್ ಆಗಲ್ಲ. ಅಕ್ಕಿ, ಗೋಧಿ ಸ್ವಲ್ಪವೇ ಇದೆ ಎಂದು ಮಾತನಾಡಿಕೊಂಡರು.
ಕ್ಯಾಪ್ಟನ್ ಆದವರ ಜೊತೆ ಶ್ವೇತಾ ಚೆಂಗಪ್ಪ ಬಕೆಟ್ ಹಿಡಿಯುತ್ತಿದ್ದಾರೆ ಎಂದು ದೀಪಿಕಾ ಹಾಗೂ ಆದಿ ಚರ್ಚಿಸಿದರು. ಅದರೆ ಈ ಮಾತನ್ನು ಅಕುಲ್ ಬಾಲಾಜಿ ಒಪ್ಪಲಿಲ್ಲ. ನಾನು ಕ್ಯಾಪ್ಟನ್ ಆಗಿದ್ದಾಗ ಯಾರೂ ನನಗೆ ಸರಿಯಾಗಿ ಊಟವನ್ನೂ ಹಾಕಲಿಲ್ಲ ಎಂದರು.
ಬಿಗ್ ಬಾಸ್ ಕೊಟ್ಟ ನೋಟ್ ಬುಕ್ ಮತ್ತು ಪೆನ್ನನ್ನು ತಮ್ಮ ಟೀ ಶರ್ಟಿನೊಳಗೆ ಬಚ್ಚಿಟ್ಟುಕೊಂಡರು ಶ್ವೇತಾ ಚೆಂಗಪ್ಪ. ಇನ್ನೊಂದು ಕಡೆ ಆದಿ, ನೀತೂ, ದೀಪಿಕಾ ಈ ಬಾರಿ ಯಾರು ಮನೆಯಿಂದ ಹೊರಹೋಗುತ್ತಾರೆ ಎಂಬ ಬಗ್ಗೆ ಚರ್ಚಿಸಿದರು.
ತನ್ನ ಬಗ್ಗೆ ದೀಪಿಕಾ ಚಾಡಿ ಹೇಳಿರುವ ಬಗ್ಗೆ ಸಂತೋಷ ಅವರು ಸ್ವಲ್ಪ ಗರಂ ಆಗಿದ್ದರು. ಈ ಬಗ್ಗೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ನೀನು ನನಗೆ ಒಳ್ಳೆಯ ಸರ್ಟಿಫಿಕೇಟ್ ಕೊಟ್ಟಿದ್ದೀಯಾ ಎಂದರು ಸಂತೋಷ್. ನನ್ನ ಬಗ್ಗೆ ಯಾವಾಗಲೂ ನೀವು ನೆಗಟೀವ್ ಆಗಿ ಕಾಣಿಸುತ್ತೀರಾ ಎಂದರು ದೀಪಿಕಾ. ವಾಟರ್ ಬಾಟಲನ್ನು ಸಂತೋಷ್ ಕಡೆಗೆ ಎಸೆದು ಕೋಪದಿಂದ ಹೊರಟು ಹೋದರು ದೀಪಿಕಾ.
ಈ ಬಾರಿ ಮನೆಯಲ್ಲಿ ಇನ್ನೊಂದು ಆಟ ಶುರುವಾಯಿತು. ಅದೇನೆಂದರೆ ಕುಸ್ತಿ. ಬಾಹುಬಲ ತೋರಲು ಬಿಗ್ ಬಾಸ್ ಅವಕಾಶ ಮಾಡಿಕೊಟ್ಟರು. ಆಕ್ಟಿವಿಟಿ ಏರಿಯಾದಲ್ಲಿ ಮಲ್ಲಯುದ್ಧ ನಡೆಯಲಿದೆ. ಗೆದ್ದ ಪುರುಷರಿಗೆ ಜಗದೇಕ ಮಲ್ಲ, ಮಹಿಳೆಯರಿಗೆ ಜಗತ್ ಜಟ್ಟಿ ಎಂಬ ಪ್ರಶಸ್ತಿ ನೀಡಲಾಗುತ್ತದೆ ಎಂದು ಹೇಳಿದರು.